ರಾಜ್ಯ

ಬೆಳೆ ವಿಮೆ ಅನ್ಯಾಯ ಖಂಡಿಸಿ ರೈತ ಸಂಘದ ಮನವಿ; 8 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಧರಣಿ ಎಚ್ಚರಿಕೆ. ಅಫಜಲಪುರ: ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸ್ವಾಭಿಮಾನಿ ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಅಫಜಲಪುರ ತಾಲೂಕು ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಅಫಜಲಪುರ ತಾಲೂಕಿನಲ್ಲಿ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ತೀವ್ರ ಅನ್ಯಾಯವಾಗಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ಸಂಪೂರ್ಣ ಬೆಳೆ ಕಳೆದುಕೊಂಡಿದ್ದರು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಆಸರೆಯಾಗಬೇಕಿದ್ದ ಬೆಳೆ ವಿಮೆ ಯೋಜನೆಯಡಿ ರೈತರು ಪ್ರೀಮಿಯಂ ಪಾವತಿಸಿದ್ದರೂ, ಹಲವಾರು ರೈತರ ಖಾತೆಗಳಿಗೆ ಕೇವಲ ₹17, ₹20ರಷ್ಟು ಅಲ್ಪ ಮೊತ್ತ ಮಾತ್ರ ಜಮೆಯಾಗಿದೆ. ಅನೇಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರಿಗೆ ಇದುವರೆಗೂ ಯಾವುದೇ ಪರಿಹಾರ ಜಮೆಯಾಗಿಲ್ಲ ಎಂದು ರೈತ ಮುಖಂಡರು ಆರೋಪಿಸಿದರು. ಈ ಅನ್ಯಾಯದ ವಿರುದ್ಧ ಈಗಾಗಲೇ ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳಿಗೆ 8 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಅಫಜಲಪುರದ ಅಂಬೇಡ್ಕರ್ ವೃತ್ತದಲ್ಲಿ ಟೆಂಟ್ ಹಾಕಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರಮೇಶ ಪಾಟೀಲ್, ಗುರು ಚಾಂದಕವಟೆ, ಬಸವರಾಜ ಪಾಟೀಲ್, ಕಲ್ಯಾಣಿ ಅಂಜುಟಗಿ, ದೌಲತರಾಯ ಪಾಟೀಲ್, ಶರಣಗೌಡ ಪಾಟೀಲ್, ಅರ್ಜುನ ಸೋಮಜಾಳ, ಪ್ರಮೋದ ಭೋವಿಸಂಗಣ್ಣ ವಾಲಿ, ಚಂದು ಬನ್ನೇಟಿ, ರಾಜು ಬಡದಾಳ, ಮಲ್ಲು ಅತ್ತಾರ, ಶಿವು ಹಿರ್ಯಾಳ, ಸೂರ್ಯಕಾಂತ ಪವಾರ, ಬಸವರಾಜ ಕಲಶೆಟ್ಟಿ, ಸೇರಿದಂತೆ ತಾಲೂಕಿನ ವಿವಿಧ ಭಾಗಗಳ ರೈತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಬೆಳೆ ವಿಮೆ ಅನ್ಯಾಯ ಖಂಡಿಸಿ ರೈತ ಸಂಘದ ಮನವಿ; 8 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಧರಣಿ ಎಚ್ಚರಿಕೆ. ಅಫಜಲಪುರ: ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸ್ವಾಭಿಮಾನಿ...

Read more

ಗೊಂದಲಗಳಿಗೆ ತೆರೆ ಎಳೆದು ನೈಜ ಇತಿಹಾಸ ಅರಿಯಿರಿ: ತಳವಾರ ಸಮಾಜದ ಮುಖಂಡರ ಕರೆ

ಗೊಂದಲಗಳಿಗೆ ತೆರೆ ಎಳೆದು ನೈಜ ಇತಿಹಾಸ ಅರಿಯಿರಿ: ತಳವಾರ ಸಮಾಜದ ಮುಖಂಡರ ಕರೆ   ತಳವಾರ ಸಮಾಜದ ವೈಭವಯುತ ಇತಿಹಾಸ ಯುವಪೀಳಿಗೆಗೆ ತಿಳಿಯಲಿ: ಜಾಗೃತಿ ಸಭೆಯಲ್ಲಿ ಕರೆ...

Read more

ತಳವಾರ ಸಮಾಜದ ಇತಿಹಾಸ ತಿಳಿದುಕೊಳ್ಳುವುದು ಅಗತ್ಯ:ಮಲ್ಲಪ್ಪ ನಾಟೀಕಾರ

ತಳವಾರ ಸಮಾಜದ ಇತಿಹಾಸ ತಿಳಿದುಕೊಳ್ಳುವುದು ಅಗತ್ಯ:ಮಲ್ಲಪ್ಪ ನಾಟೀಕಾರ ಇಂಡಿ, ಜು. 26: ತಳವಾರ ಸಮಾಜಕ್ಕೆ ತನ್ನದೇ ಆದ ವೈಭವಯುತ ಇತಿಹಾಸವಿದ್ದು, ಅದರ ಬಗ್ಗೆ ಅರಿವಿಲ್ಲದ ಕೆಲವರು ಸಮಾಜದಲ್ಲಿ...

Read more

ಪುರಸಭೆ ಕಚೇರಿ ಬಾಗಿಲಿಗೆ ಬೀಗ ಜಡೆದು ಪ್ರತಿಭಟನೆ ಮಾಡಿದ ಮಹಿಳೆಯರು

ಪುರಸಭೆ ಕಚೇರಿ ಬಾಗಿಲಿಗೆ ಬೀಗ ಜಡೆದು ಪ್ರತಿಭಟನೆ ಮಾಡಿದ ಮಹಿಳೆಯರು ಅಫಜಲಪುರ, ಜು. 20: ಪಟ್ಟಣದ ವಾರ್ಡ್ ನಂ. 17ರ ವಿವಿಧ ಮೂಲಸೌಕರ್ಯ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವಂತೆ...

Read more

ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರಮಟ್ಟದ ಜನಪರ ನಾಯಕ: ಅಂಬರೀಶ ಬುರಲಿ

ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರಮಟ್ಟದ ಜನಪರ ನಾಯಕ: ಅಂಬರೀಶ ಬುರಲಿ ಅಫಜಲಪುರ: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಸಭೆಯ ಪ್ರತಿಪಕ್ಷ ನಾಯಕರು ಹಾಗೂ 371(ಜೆ) ಕಲಂ ಜಾರಿಯ ಪ್ರಮುಖ ರೂವಾರಿಗಳಾದ...

Read more

ಎಸ್‌ಟಿ ಪ್ರಮಾಣಪತ್ರಕ್ಕೆ ಜು.27ರಿಂದ ದೀರ್ಘದಂಡ ನಮಸ್ಕಾರ: ಸಂತೋಷ ತಳವಾರ

ಎಸ್‌ಟಿ ಪ್ರಮಾಣಪತ್ರಕ್ಕೆ ಜು.27ರಿಂದ ದೀರ್ಘದಂಡ ನಮಸ್ಕಾರ: ಸಂತೋಷ ತಳವಾರ ಅಫಜಲಪೂರ:  ಕಲಬುರಗಿ ಜಿಲ್ಲೆಯಲ್ಲಿ ತಳವಾರ ಸಮಾಜದ ಜನರಿಗೆ ತಡೆ ಹಿಡಿದ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣಪತ್ರ ನೀಡಬೇಕು...

Read more

ಭೀಮಾ ನದಿಗೆ ತಕ್ಷಣ ನೀರು ಹರಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ” : ಮಹಾಂತಗೌಡ ಪಾಟೀಲ ಗೌರ

ಭೀಮಾ ನದಿಗೆ ತಕ್ಷಣ ನೀರು ಹರಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ" : ಮಹಾಂತಗೌಡ ಪಾಟೀಲ ಗೌರ ಅಫಜಲಪುರ,:  ಭೀಮಾ ನದಿಗೆ ತಕ್ಷಣ ನೀರು ಹರಿಸಿ ರೈತರ ಬೆಳೆಗಳನ್ನು...

Read more

ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ಕೂಡಲೇ ಬೆಳೆ ಪರಿಹಾರ ವಿತರಿಸಿ: ಸರ್ಕಾರಕ್ಕೆ ರೈತ ಮುಖಂಡ ಶಿವರಾಜ್ ಕೆಂಗನಾಳ್ ಆಗ್ರಹ”

​"ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ಕೂಡಲೇ ಬೆಳೆ ಪರಿಹಾರ ವಿತರಿಸಿ: ಸರ್ಕಾರಕ್ಕೆ ರೈತ ಮುಖಂಡ ಶಿವರಾಜ್ ಕೆಂಗನಾಳ್ ಆಗ್ರಹ" ​ವಿಜಯಪುರ: "ವಿಜಯಪುರ ಜಿಲ್ಲೆಯ ರೈತರು ಪ್ರಸ್ತುತ ಅತ್ಯಂತ...

Read more

ಇಂದು ಬರ ಅಧ್ಯಯನಕ್ಕಾಗಿ ನಿಖಿಲ್ ಕುಮಾರಸ್ವಾಮಿ  ಇಂಡಿಗೆ ಎಂಟ್ರಿ 

ಇಂದು ಬರ ಅಧ್ಯಯನಕ್ಕಾಗಿ ನಿಖಿಲ್ ಕುಮಾರಸ್ವಾಮಿ  ಇಂಡಿಗೆ ಎಂಟ್ರಿ  ಇಂಡಿ  ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ಅವರು ಬರ ಅಧ್ಯಯನದ ನಿಮಿತ್ತ 2026ರ...

Read more
Page 1 of 210 1 2 210
  • Trending
  • Comments
  • Latest