ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅರ್ಜುನ ಲಮಾಣಿ ಪತ್ರಕರ್ತರಿಗೆ ಕ್ಷೇಮೆಯಾಚನೆ
‘ನಕಲಿ ಪತ್ರಕರ್ತರು’ ಹೇಳಿಕೆ: ಪತ್ರಕರ್ತರಲ್ಲಿ ನೋವಾಗಿದ್ದರೆ ಕ್ಷಮೆಯಾಚನೆ – ಅರ್ಜುನ ಲಮಾಣಿ
ವಿಜಯಪುರ: ವಿಜಯಪುರ ಜಿಲ್ಲಾ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಅರ್ಜುನ ಲಮಾಣಿ ಅವರು, ಆಗಸ್ಟ್ 1, 2026ರಂದು ಶಿಕ್ಷಕರ ಪ್ರತಿಭಟನೆಯ ಸಂದರ್ಭದಲ್ಲಿ ಸಂಘದ ಜೊತೆಗಾರರನ್ನು ಉದ್ದೇಶಿಸಿ ಮಾತನಾಡುವ ವೇಳೆ ಬಳಸಿದ ‘ನಕಲಿ ಪತ್ರಕರ್ತರು’ ಎಂಬ ಪದದ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಪತ್ರಕರ್ತರ ಸೋಗಿನಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ಉದ್ದೇಶಿಸಿಯೇ ಆ ಪದವನ್ನು ಬಳಸಲಾಗಿತ್ತು. ಯಾವುದೇ ಪತ್ರಕರ್ತರು ಅಥವಾ ಪತ್ರಿಕಾ ಮಿತ್ರರಿಗೆ ನೋವುಂಟು ಮಾಡುವ ಉದ್ದೇಶ ತಮ್ಮದಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ತಮ್ಮ ಮಾತಿನಿಂದ ಪತ್ರಕರ್ತ ಸಹೋದರರ ಮನಸ್ಸಿಗೆ ನೋವಾಗಿದ್ದರೆ, ಆಡಿದ ಮಾತಿಗೆ ವಿಷಾದ ವ್ಯಕ್ತಪಡಿಸುವುದರ ಜೊತೆಗೆ ಕ್ಷಮೆಯಾಚಿಸುವುದಾಗಿ ಅರ್ಜುನ ಲಮಾಣಿ ಅವರು ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾ ಕ್ಷೇತ್ರದ ಗೌರವ ಹಾಗೂ ಪತ್ರಕರ್ತರೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳುವುದು ಉದ್ದೇಶವಾಗಿದ್ದು, ತಮ್ಮ ಹೇಳಿಕೆಯನ್ನು ಈ ಹಿನ್ನೆಲೆಯಲ್ಲಿ ಪರಿಗಣಿಸುವಂತೆ ಅವರು ಮನವಿ ಮಾಡಿದ್ದಾರೆ.


















