ಆಗಸ್ಟ್ 13ರಂದು ಬಂಥನಾಳ ಶ್ರೀಮಠದಲ್ಲಿ ನೂತನ ಉತ್ತರಾಧಿಕಾರಿಗಳ ಭವ್ಯ ಪುರಪ್ರವೇಶ
ಇಂಡಿ: ಆಗಸ್ಟ ೧೩ ರಂದು ಬಂಥನಾಳ ಶ್ರೀಮಠದ ನೂತನ ಉತ್ತರಾಧಿಕಾರಿಗಳ ಭವ್ಯ ಪುರಪ್ರವೇಶ ಕಾರ್ಯಕ್ರಮವು ಅತ್ಯಂತ ವೈಭವದಿಂದ ಜರುಗಲಿದೆ. ಈ ಐತಿಹಾಸಿಕ ಧಾರ್ಮಿಕ ಮಹೋತ್ಸವಕ್ಕೆ ನೆರೆಹೊರೆಯ ಗ್ರಾಮಗಳು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು ೪೦ ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಳ್ಳಲು ಬೃಹತ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಡಾ ವೃಷಭಲಿಂಗ ಮಹಾಶಿವಯೋಗಿಗಳು ತಿಳಿಸಿದರು.
ಅವರು ಬಂಥನಾಳದ ಶ್ರೀಮಠದ ಆವರಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಶ್ರೀಮಠದ ಉತ್ತರಾಧಿಕಾರಿಗಳ ಪುರಪರವೇಶದ ಅಂಗವಾಗಿ ತಾಂಬಾ ಗ್ರಾಮದಿಂದ ಸಾವಿರಾರು ಸುಮಂಗಲೆಯರ ಪೂರ್ಣಕುಂಭ ಹೊತ್ತ ಭವ್ಯ ಕುಂಭಮೇಳ ಮೆರವಣಿಗೆಗೆ ಚಾಲನೆ ಸಿಗಲಿದೆ. ಮೆರವಣಿಗೆಯುದ್ದಕ್ಕೂ ವಿವಿಧ ಕಲಾತಂಡಗಳು, ಜಾನಪದ ಕಲೆಗಳು ಹಾಗೂ ಸಾಂಪ್ರದಾಯಿಕ ಬಾಜಾ ಭಜಂತ್ರಿಗಳ ನಾದಸ್ವರ ಭಕ್ತರಲ್ಲಿ ಭಕ್ತಿಯ ಸಂಚಲನ ಮೂಡಿಸಲಿದೆ. ನೂತನ ಉತ್ತರಾಧಿಕಾರಿಗಳನ್ನು ಅಲಂಕೃತ ವಾಹನದಲ್ಲಿ ಕೂರಿಸಿ, ಮಂಗಳವಾದ್ಯಗಳು ಹಾಗೂ ಜಯಘೋಷಗಳೊಂದಿಗೆ ಅತ್ಯಂತ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಭಾರಿ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳಿಗೆ ಸುಗಮ ದರ್ಶನ ಮತ್ತು ಆಸನದ ವ್ಯವಸ್ಥೆಗಾಗಿ ಬೃಹತ್ ವೇದಿಕೆ ಹಾಗೂ ವಿಶಾಲವಾದ ಪೆಂಡಾಲ್ ನಿರ್ಮಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ ಬೃಹತ್ ದಾಸೋಹ ಭವನಗಳನ್ನು ಸಜ್ಜುಗೊಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಗೊಂದಲ ಉಂಟಾಗದAತೆ ನಿಗಾ ವಹಿಸಲು ಮತ್ತು ಭಕ್ತರ ಸೌಕರ್ಯಗಳನ್ನು ನೋಡಿಕೊಳ್ಳಲು ನೂರಾರು ಸ್ವಯಂಸೇವಕರ ತಂಡಗಳನ್ನು ರಚಿಸಲು ತೀರ್ಮಾನ ಮಾಡಲಾಗಿದೆ.
ಈ ಪುರಪರವೇಶ ಕಾರ್ಯಕ್ರಮದಲ್ಲಿ ನಾಡಿನ ಹಾಗೂ ಜಿಲ್ಲೆಯ ವಿವಿಧ ಮಠಾಧೀಶರು, ಹಿರಿಯ ಶ್ರೀಗಳು ಮತ್ತು ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಬಂಥನಾಳ ಶ್ರೀಮಠವು ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಮತ್ತು ಧಾರ್ಮಿಕ ಕ್ರಾಂತಿ ಮಾಡಿದ ಪರಂಪರೆಯನ್ನು ಹೊಂದಿದೆ. ನೂತನ ಉತ್ತರಾಧಿಕಾರಿಗಳ ಈ ಪುರಪರವೇಶವು ಮಠದ ಧಾರ್ಮಿಕ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ ಎಂದು ತಿಳಿಸಿದರು.
ಬಂಥನಾಳದಲ್ಲಿ ಸಂಪ್ರದಾಯದAತೆ ಈಗ ೧೧ ದಿವಸಗಳ ಕಾಲ ಬಾಗೇವಾಡಿಯ ಶಿವ ಪ್ರಕಾಶ ಪೂಜ್ಯರಿಂದ ಪ್ರವಚನ ನಡೆದಿದ್ದು ಅಂದು ಮುಕ್ತಾಯ ಸಮಾರಂಭ ನಡೆಯಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪೂಜ್ಯರು ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಗೋಳಸಾರದ ಅಭಿನವ ಪುಂಡಲಿAಗ ಶ್ರೀಗಳು, ತಡವಲಗಾದ ರಾಚೋಟೇಶ್ವರ ಶ್ರೀಗಳು, ಆಲಮೇಲದ ಚಂದ್ರಶೇಖರ ಶ್ರೀಗಳು, ಬಾಗೇವಾಡಿಯ ಶಿವಪ್ರಕಾಶ ಶ್ರೀಗಳು, ಮುಳವಾಡದ ಸಿದ್ದಲಿಂಗ ಶ್ರೀಗಳು ಪಾಲ್ಗೊಂಡಿದ್ದರು.
ಇಂಡಿ: ಪತ್ರಿಕಾಗೋಷ್ಠಿಯಲ್ಲಿ ಬಂಥನಾಳದ ಡಾ. ವೃಷಭಲಿಂಗ ಮಹಾಶಿವಯೋಗಿಗಳು ಮಾತನಾಡಿದರು.

















