Tag: #ಅಫಜಲಪುರ#ಕಲ್ಬರ್ಗು#ಕಲ್ಯಾಣ ಕರ್ನಾಟಕ

ಬೆಳೆ ವಿಮೆ ಅನ್ಯಾಯ ಖಂಡಿಸಿ ರೈತ ಸಂಘದ ಮನವಿ; 8 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಧರಣಿ ಎಚ್ಚರಿಕೆ. ಅಫಜಲಪುರ: ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸ್ವಾಭಿಮಾನಿ ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಅಫಜಲಪುರ ತಾಲೂಕು ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಅಫಜಲಪುರ ತಾಲೂಕಿನಲ್ಲಿ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ತೀವ್ರ ಅನ್ಯಾಯವಾಗಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ಸಂಪೂರ್ಣ ಬೆಳೆ ಕಳೆದುಕೊಂಡಿದ್ದರು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಆಸರೆಯಾಗಬೇಕಿದ್ದ ಬೆಳೆ ವಿಮೆ ಯೋಜನೆಯಡಿ ರೈತರು ಪ್ರೀಮಿಯಂ ಪಾವತಿಸಿದ್ದರೂ, ಹಲವಾರು ರೈತರ ಖಾತೆಗಳಿಗೆ ಕೇವಲ ₹17, ₹20ರಷ್ಟು ಅಲ್ಪ ಮೊತ್ತ ಮಾತ್ರ ಜಮೆಯಾಗಿದೆ. ಅನೇಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರಿಗೆ ಇದುವರೆಗೂ ಯಾವುದೇ ಪರಿಹಾರ ಜಮೆಯಾಗಿಲ್ಲ ಎಂದು ರೈತ ಮುಖಂಡರು ಆರೋಪಿಸಿದರು. ಈ ಅನ್ಯಾಯದ ವಿರುದ್ಧ ಈಗಾಗಲೇ ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳಿಗೆ 8 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಅಫಜಲಪುರದ ಅಂಬೇಡ್ಕರ್ ವೃತ್ತದಲ್ಲಿ ಟೆಂಟ್ ಹಾಕಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರಮೇಶ ಪಾಟೀಲ್, ಗುರು ಚಾಂದಕವಟೆ, ಬಸವರಾಜ ಪಾಟೀಲ್, ಕಲ್ಯಾಣಿ ಅಂಜುಟಗಿ, ದೌಲತರಾಯ ಪಾಟೀಲ್, ಶರಣಗೌಡ ಪಾಟೀಲ್, ಅರ್ಜುನ ಸೋಮಜಾಳ, ಪ್ರಮೋದ ಭೋವಿಸಂಗಣ್ಣ ವಾಲಿ, ಚಂದು ಬನ್ನೇಟಿ, ರಾಜು ಬಡದಾಳ, ಮಲ್ಲು ಅತ್ತಾರ, ಶಿವು ಹಿರ್ಯಾಳ, ಸೂರ್ಯಕಾಂತ ಪವಾರ, ಬಸವರಾಜ ಕಲಶೆಟ್ಟಿ, ಸೇರಿದಂತೆ ತಾಲೂಕಿನ ವಿವಿಧ ಭಾಗಗಳ ರೈತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಬೆಳೆ ವಿಮೆ ಅನ್ಯಾಯ ಖಂಡಿಸಿ ರೈತ ಸಂಘದ ಮನವಿ; 8 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಧರಣಿ ಎಚ್ಚರಿಕೆ. ಅಫಜಲಪುರ: ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸ್ವಾಭಿಮಾನಿ ...

Read more

ಸಾಲದ ಹೊರೆ ತಾಳಲಾರದೆ ಹಿಂಚಗೇರಾದಲ್ಲಿ ಯುವ ರೈತ ಆತ್ಮಹತ್ಯೆ

ಸಾಲದ ಹೊರೆ ತಾಳಲಾರದೆ ಹಿಂಚಗೇರಾದಲ್ಲಿ ಯುವ ರೈತ ಆತ್ಮಹತ್ಯೆ ಅಫಜಲಪುರ, ತಾಲೂಕಿನ ಹಿಂಚಗೇರಾ ಗ್ರಾಮದ ಯುವ ರೈತ ಅಂಬರೀಶ್ ತಂದೆ ಶಂಕ್ರೆಪ್ಪ ಶಿವಪೂರ (21) ಅವರು ತಮ್ಮ ...

Read more

ಪುರಸಭೆ ಕಚೇರಿ ಬಾಗಿಲಿಗೆ ಬೀಗ ಜಡೆದು ಪ್ರತಿಭಟನೆ ಮಾಡಿದ ಮಹಿಳೆಯರು

ಪುರಸಭೆ ಕಚೇರಿ ಬಾಗಿಲಿಗೆ ಬೀಗ ಜಡೆದು ಪ್ರತಿಭಟನೆ ಮಾಡಿದ ಮಹಿಳೆಯರು ಅಫಜಲಪುರ, ಜು. 20: ಪಟ್ಟಣದ ವಾರ್ಡ್ ನಂ. 17ರ ವಿವಿಧ ಮೂಲಸೌಕರ್ಯ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವಂತೆ ...

Read more

ಭೀಮಾ ನದಿಗೆ ತಕ್ಷಣ ನೀರು ಹರಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ” : ಮಹಾಂತಗೌಡ ಪಾಟೀಲ ಗೌರ

ಭೀಮಾ ನದಿಗೆ ತಕ್ಷಣ ನೀರು ಹರಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ" : ಮಹಾಂತಗೌಡ ಪಾಟೀಲ ಗೌರ ಅಫಜಲಪುರ,:  ಭೀಮಾ ನದಿಗೆ ತಕ್ಷಣ ನೀರು ಹರಿಸಿ ರೈತರ ಬೆಳೆಗಳನ್ನು ...

Read more

ಭೀಮಾ ನದಿಗೆ ನೀರು ಬಿಡುಗಡೆ ಹೋರಾಟಕ್ಕೆ ಕರವೇ ಬೆಂಬಲ: ಶ್ರೀಕಾಂತ ದಿವಾಣಜಿ

ಭೀಮಾ ನದಿಗೆ ನೀರು ಬಿಡುಗಡೆ ಹೋರಾಟಕ್ಕೆ ಕರವೇ ಬೆಂಬಲ: ಶ್ರೀಕಾಂತ ದಿವಾಣಜಿ ಅಫಜಲಪುರ: ಭೀಮಾ ನದಿಗೆ ತಕ್ಷಣ ನೀರು ಬಿಡುಗಡೆ ಮಾಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ...

Read more

ವಿದ್ಯುತ್ ತಂತಿ ತಗುಲಿ ರೈತ ಬಲಿ? ರಸ್ತೆ ತಡೆದು ಪ್ರತಿಭಟನೆ

ವಿದ್ಯುತ್ ತಂತಿ ತಗುಲಿ ರೈತ ಬಲಿ? ರಸ್ತೆ ತಡೆದು ಪ್ರತಿಭಟನೆ   ಅಫಜಲಪುರ: ತಾಲೂಕಿನ ಅಳ್ಳಗಿ (ಕೆ) ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ರೈತನೊಬ್ಬ ಮೃತಪಟ್ಟಿರುವ ದುರ್ಘಟನೆ ...

Read more

ಕಳಪೆ ಚರಂಡಿ ಕಾಮಗಾರಿ; ವಿರೋಧ ಪಕ್ಷ ಏನು ಮಾಡುತ್ತಿದೆ?s

ಕಳಪೆ ಚರಂಡಿ ಕಾಮಗಾರಿ; ವಿರೋಧ ಪಕ್ಷ ಏನು ಮಾಡುತ್ತಿದೆ? ಅಫಜಲಪುರ: ಪಟ್ಟಣದಲ್ಲಿ ಕೈಗೊಂಡಿರುವ ಚರಂಡಿ ಕಾಮಗಾರಿ ಕಳಪೆ ಮಟ್ಟದಲ್ಲಿದ್ದು, ರಸ್ತೆ ಬದಿಯ ಚರಂಡಿ ಮುಚ್ಚಳ ಕುಸಿದು ದೊಡ್ಡ ...

Read more

ಜಮೀನಿಗೆ ಹೋಗಲು ದಾರಿ ಇಲ್ಲ; ತಹಸೀಲ್ದಾರರ ಮಧ್ಯಸ್ಥಿಕೆಗೆ ರೈತನ ಮನವಿ

ಜಮೀನಿಗೆ ಹೋಗಲು ದಾರಿ ಇಲ್ಲ; ತಹಸೀಲ್ದಾರರ ಮಧ್ಯಸ್ಥಿಕೆಗೆ ರೈತನ ಮನವಿ ಅಫಜಲಪೂರ: ತಾಲೂಕಿನ ಉಡಚಾಣ ಗ್ರಾಮದ ರೈತ ಬಸವರಾಜ ಶರಣಪ್ಪ ಕುಂಬಾರ ಅವರು ತಮ್ಮ ಜಮೀನಿಗೆ ತೆರಳುವ ...

Read more

ವಿದ್ಯುತ್ ಸೇವೆ ಖಾಸಗೀಕರಣ ವಿರೋಧಿಸಿ ರೈತರು-ಜೇಸ್ಕಾಂ ನೌಕರರ ಜಂಟಿ ಹೋರಾಟ

ವಿದ್ಯುತ್ ಸೇವೆ ಖಾಸಗೀಕರಣ ವಿರೋಧಿಸಿ ರೈತರು-ಜೇಸ್ಕಾಂ ನೌಕರರ ಜಂಟಿ ಹೋರಾಟ ಅಫಜಲಪುರ: ರಾಜ್ಯದ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವ ಪ್ರಯತ್ನವನ್ನು ವಿರೋಧಿಸಿ ರೈತ ಸಂಘಟನೆಗಳು ...

Read more

ತಂಗಡಗಿಯವರಿಗೆ ಡಿಸಿಎಂ ಸ್ಥಾನ ನೀಡಿ: ಪ್ರಮೋದ ಭೋವಿ ವಡ್ಡರ

ತಂಗಡಗಿಯವರಿಗೆ ಡಿಸಿಎಂ ಸ್ಥಾನ ನೀಡಿ: ಪ್ರಮೋದ ಭೋವಿ ವಡ್ಡರ ಅಫಜಲಪುರ: ರಾಜ್ಯ ಸಚಿವ ಸಂಪುಟದಲ್ಲಿ ಭೋವಿ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕ ...

Read more
Page 1 of 3 1 2 3
  • Trending
  • Comments
  • Latest
ಕೇಂದ್ರ ಸಚಿವ ಜೋಶಿ ಹಾಗೂ ಸಂಸದೆ ಕಂಗನಾ ರಣಾವತ್ ವಿರುದ್ಧ ಮಹಿಳಾ ಕಾಂಗ್ರೆಸ್ ಪ್ರತಿಭಟನೆ
ಬೆಳೆ ವಿಮೆ ಅನ್ಯಾಯ ಖಂಡಿಸಿ ರೈತ ಸಂಘದ ಮನವಿ; 8 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಧರಣಿ ಎಚ್ಚರಿಕೆ.   ಅಫಜಲಪುರ: ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸ್ವಾಭಿಮಾನಿ ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಅಫಜಲಪುರ ತಾಲೂಕು ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಅಫಜಲಪುರ ತಾಲೂಕಿನಲ್ಲಿ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ತೀವ್ರ ಅನ್ಯಾಯವಾಗಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ಸಂಪೂರ್ಣ ಬೆಳೆ ಕಳೆದುಕೊಂಡಿದ್ದರು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಆಸರೆಯಾಗಬೇಕಿದ್ದ ಬೆಳೆ ವಿಮೆ ಯೋಜನೆಯಡಿ ರೈತರು ಪ್ರೀಮಿಯಂ ಪಾವತಿಸಿದ್ದರೂ, ಹಲವಾರು ರೈತರ ಖಾತೆಗಳಿಗೆ ಕೇವಲ ₹17, ₹20ರಷ್ಟು ಅಲ್ಪ ಮೊತ್ತ ಮಾತ್ರ ಜಮೆಯಾಗಿದೆ. ಅನೇಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರಿಗೆ ಇದುವರೆಗೂ ಯಾವುದೇ ಪರಿಹಾರ ಜಮೆಯಾಗಿಲ್ಲ ಎಂದು ರೈತ ಮುಖಂಡರು ಆರೋಪಿಸಿದರು.  ಈ ಅನ್ಯಾಯದ ವಿರುದ್ಧ ಈಗಾಗಲೇ ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳಿಗೆ 8 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಅಫಜಲಪುರದ ಅಂಬೇಡ್ಕರ್ ವೃತ್ತದಲ್ಲಿ ಟೆಂಟ್ ಹಾಕಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು.  ಪ್ರತಿಭಟನೆಯಲ್ಲಿ ರಮೇಶ ಪಾಟೀಲ್, ಗುರು ಚಾಂದಕವಟೆ, ಬಸವರಾಜ ಪಾಟೀಲ್, ಕಲ್ಯಾಣಿ ಅಂಜುಟಗಿ, ದೌಲತರಾಯ ಪಾಟೀಲ್, ಶರಣಗೌಡ ಪಾಟೀಲ್, ಅರ್ಜುನ ಸೋಮಜಾಳ, ಪ್ರಮೋದ ಭೋವಿಸಂಗಣ್ಣ ವಾಲಿ, ಚಂದು ಬನ್ನೇಟಿ, ರಾಜು ಬಡದಾಳ, ಮಲ್ಲು ಅತ್ತಾರ, ಶಿವು ಹಿರ್ಯಾಳ, ಸೂರ್ಯಕಾಂತ ಪವಾರ, ಬಸವರಾಜ ಕಲಶೆಟ್ಟಿ, ಸೇರಿದಂತೆ ತಾಲೂಕಿನ ವಿವಿಧ ಭಾಗಗಳ ರೈತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಬೆಳೆ ವಿಮೆ ಅನ್ಯಾಯ ಖಂಡಿಸಿ ರೈತ ಸಂಘದ ಮನವಿ; 8 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಧರಣಿ ಎಚ್ಚರಿಕೆ. ಅಫಜಲಪುರ: ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸ್ವಾಭಿಮಾನಿ ಕಬ್ಬು ಬೆಳೆಗಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಅಫಜಲಪುರ ತಾಲೂಕು ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಅಫಜಲಪುರ ತಾಲೂಕಿನಲ್ಲಿ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ತೀವ್ರ ಅನ್ಯಾಯವಾಗಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ಸಂಪೂರ್ಣ ಬೆಳೆ ಕಳೆದುಕೊಂಡಿದ್ದರು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಆಸರೆಯಾಗಬೇಕಿದ್ದ ಬೆಳೆ ವಿಮೆ ಯೋಜನೆಯಡಿ ರೈತರು ಪ್ರೀಮಿಯಂ ಪಾವತಿಸಿದ್ದರೂ, ಹಲವಾರು ರೈತರ ಖಾತೆಗಳಿಗೆ ಕೇವಲ ₹17, ₹20ರಷ್ಟು ಅಲ್ಪ ಮೊತ್ತ ಮಾತ್ರ ಜಮೆಯಾಗಿದೆ. ಅನೇಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರಿಗೆ ಇದುವರೆಗೂ ಯಾವುದೇ ಪರಿಹಾರ ಜಮೆಯಾಗಿಲ್ಲ ಎಂದು ರೈತ ಮುಖಂಡರು ಆರೋಪಿಸಿದರು. ಈ ಅನ್ಯಾಯದ ವಿರುದ್ಧ ಈಗಾಗಲೇ ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳಿಗೆ 8 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಅಫಜಲಪುರದ ಅಂಬೇಡ್ಕರ್ ವೃತ್ತದಲ್ಲಿ ಟೆಂಟ್ ಹಾಕಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರಮೇಶ ಪಾಟೀಲ್, ಗುರು ಚಾಂದಕವಟೆ, ಬಸವರಾಜ ಪಾಟೀಲ್, ಕಲ್ಯಾಣಿ ಅಂಜುಟಗಿ, ದೌಲತರಾಯ ಪಾಟೀಲ್, ಶರಣಗೌಡ ಪಾಟೀಲ್, ಅರ್ಜುನ ಸೋಮಜಾಳ, ಪ್ರಮೋದ ಭೋವಿಸಂಗಣ್ಣ ವಾಲಿ, ಚಂದು ಬನ್ನೇಟಿ, ರಾಜು ಬಡದಾಳ, ಮಲ್ಲು ಅತ್ತಾರ, ಶಿವು ಹಿರ್ಯಾಳ, ಸೂರ್ಯಕಾಂತ ಪವಾರ, ಬಸವರಾಜ ಕಲಶೆಟ್ಟಿ, ಸೇರಿದಂತೆ ತಾಲೂಕಿನ ವಿವಿಧ ಭಾಗಗಳ ರೈತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಜೀವನದ ನೆನಪುಗಳಿಗೆ ಸಾಕ್ಷಿಯಾದ  ಸ್ನೇಹ ಸಮ್ಮಿಲನ