ವೀರಶೈವ ಲಿಂಗಾಯತ ಮಹಾ ಅಧಿವೇಶನಕ್ಕೆ 2
ಲಕ್ಷ ಜನ
ಇಂಡಿ : ಡಿ. 23 ಮತ್ತು 24 ರಂದು ದಾವಣಗೆರೆ ನಗರದಲ್ಲಿ ನಡೆಯುವ ವೀರಶೈವ ಲಿಂಗಾಯತ ಮಹಾ ಅಧಿವೇಶನಕ್ಕೆ 2 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು ಹೊರಗಡೆಯಿಂದ ಬಂದವರಿಗೆ ಊಟ, ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾ ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿ ಬಸವರಾಜ ಸಾಹುಕಾರ ಕುಮಸಗಿ ತಿಳಿಸಿದರು.
ವೀರಶೈವ ಲಿಂಗಾಯತ ಮಹಾಸಭಾ ತಾಲೂಕು
ಘಟಕದಿಂದ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿದ ಅವರು ಮಹಾರಾಷ್ಟ್ರ, ಆಂಧ್ರ,
ಕೇರಳ, ಹೈದ್ರಾಬಾದಗಳಿಂದಲೂಆಗಮಿಸುವವರಿಗೆ ಶಿರಮಗೊಂಡನಹಳ್ಳಿಯ ಹಾಸ್ಟೆಲ, ವಸತಿ ಗೃಹಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ವೀರಶೈವ ಲಿಂಗಾಯತ ಎಲ್ಲಾ ಒಳಪಂಗಡ
ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು
ಎಂದು ಆಗ್ರಹದೊಂದಿಗೆ ಶಕ್ತಿ ಪ್ರದರ್ಶನ
ಮಾಡಲಾಗುವದು ಎಂದರು.