ಕೂಡ್ಲಿಗಿ : ಮೊಹರಂ ಶಾಂತಿ ಸಭೆ – ಶಾಂತಿ ಸೌಹಾರ್ಧತೆಗೆ ಅಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ
ವಿಜಯನಗರ ಜಿಲ್ಲೆ ಕೂಡ್ಲಿಗಿ : ಜೂನ್ 20 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ , ಕೂಡ್ಲಿಗಿ ಪೊಲೀಸ್ ಉಪವಿಭಾಗ. ಮತ್ತು ಪೊಲೀಸ್ ಠಾಣೆ , ಹಾಗೂ ತಾಲೂಕಾಡಳಿತ , ವಿವಿದ ಸಮುದಾಯಗಳ ಮುಖಂಡರು , ನಾಗರೀಕರ ಸಹಯೋಗದಲ್ಲಿ. ಮೊಹರಂ ಹಬ್ಬದ ಪ್ರಯುಕ್ತ , ಶಾಂತಿ ಸಭೆ ಆಯೋಜಿಸಲಾಗಿತ್ತು.
ಇಲಾಖೆಯೊಂದಿಗೆ ಸರ್ವರೂ ಸಹಕರಿಸಬೇಕಿದೆ
ಡಿ.ವೈ.ಎಸ್ಪಿ ಮಲ್ಲೇಶಪ್ಪ ದೊಡ್ಡಮನೆ ಮಾತನಾಡಿ , ಹಬ್ಬ ಸಂಭ್ರಮದ ಸಂಖೇತವಾಗಿದೆ. ಯಾವುದೇ ಕಾರಣಕ್ಕೆ ಶಾಂತಿ ಭಂಗವಾಗಬಾರದು , ಕಾನೂನು ಸುವ್ಯೆವಸ್ಥೆಗೆ ಧಕ್ಕೆ ತರುವುದಕ್ಕೆ ಆಸ್ಪದವಿರುವುದಿಲ್ಲ , ಸರ್ವಜನಾಂಗದವರೆಲ್ಲರೂ ಪರಸ್ಪರ ಸೌಹಾರ್ಧತೆಯಿಂದ ಒಡಗೂಡಿ ಹಬ್ಬ ಆಚರಿಸಬೇಕಿದೆ. ಮೊಹರಂ ಹಬ್ಬ ಸುಲಲಿತವಾಗಿ ನಡೆಯುವಲ್ಲಿ , ಹಾಗೂ ಸುಸೂತ್ರವಾಗಿ ಯಶಸ್ವಿಯಾಗಿ ಜರುಗಿಸುವ ನಿಟ್ಟಿನಲ್ಲಿ , ಇಲಾಖೆ ಎಲ್ಲಾ ರೀತಿಯ ಸಿದ್ಧತೆಯೊಂದಿಗೆ ಮುಂಜಾಗ್ರತಾ ಕ್ರಮ ಜರುಗಿಸಲಾಗಿರುತ್ತೆ ಎಂದರು.
ಸಮುದಾಯಗಳ ಹಿರಿಯರು ಪ್ರಭಾವಿಗಳು , ಪೋಷಕರು ಮುಖಂಡರು ಜನಪ್ರತಿನಿಧಿಗಳು , ಎಲ್ಲಾ ಸಮುದಾಯಗಳ ಪ್ರಮುಖರು ಇಲಾಖೆಯೊಂದಿಗೆ ಸಹಕರಿಸಬೇಕಿದೆ. ತಮ್ಮ ತಮ್ಮ ಯುವಕರನ್ನು ಮುಂಜಾಗ್ರತೆ ಕ್ರಮವಾಗಿ ಹದ್ದು ಭಸ್ತಿನಲ್ಲಿಡಬೇಕಿದೆ , ಮತ್ತು ಅವರಿಗೆ ಹಬ್ಬದಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ತಿಳಿಹೇಳಬೇಕಿದೆ ಎಂದು ಸೂಚಿಸಿದರು.
ಅಪರಾಧಕ್ಕೆ ಕ್ಷಮೆ ಇಲ್ಲ ನಿರ್ಧಾಕ್ಷಿಣ್ಯ ಕ್ರಮ – ಎಚ್ಚರ
ಶಾಂತಿ ಭಂಗ ಕಾನೂನು ಸುವ್ಯವಸ್ಥೆ ಧಕ್ಕೆಯಾದಲ್ಲಿ , ಅಂತವರ ವಿರುದ್ಧ ನಿರ್ಧಾಕ್ಷಿಣ್ಯ ಕಠಿಣ ಕ್ರಮ ಜರುಗಿಸಲಾಗುವುದು. ಹಬ್ದದ ಸಂದರ್ಭದಲ್ಲಿ ಕೋಮು ಗಲಭೆ ದಂಗೆ ದೊಂಬಿ , ಗುಂಪು ಘರ್ಷಣೆ ಹೊಡೆದಾಟ ಬಡಿದಾಟ ಹಲ್ಲೆಗಳಂತಹ ದುಶ್ಕೃತ್ಯಗಳಲ್ಲಿ ಭಾಗಿಯಾದವರಿಗೆ. ಮತ್ತು ಘಟನೆಗೆ ಕುಮ್ಮಕ್ಕು ನೀಡಿದವರಿಗೆ ಉತ್ತೇಜಿಸಿದವರಿಗೆ ಸಹಕರಿಸಿದವರಿಗೆ , ಯಾವುದೇ ಕಾರಣಕ್ಕೆ ಕಾನೂನಿನಲ್ಲಿ ಕ್ಷಮೆ ಇರುವುದೇ ಇಲ್ಲ ಕಾನೂನು ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ವರಿಸಿದರು. ಕಾರಣ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆಗಳಿಗೆ ಯಾರೂ ಆಸ್ಪದ ನೀಡಬಾರದು , ಹಬ್ಬ ಸಂಭ್ರಮ ಸಡಗರದಿಂದ ಜರುಗಿಸಬೇಕಿದೆ.
ಪುಂಡ ಯುವಕರನ್ನು ಹತೋಟಿಯಲ್ಲಿಡುವ ಜವಾಬ್ದಾರಿ ಹಿರಿಯರದ್ದು
ಶಾಂತಿ ಸೌಹಾರ್ಧತೆಗೆ ಹೆಚ್ಚು ಆಧ್ಯತೆ ನೀಡಬೇಕಿದೆ , ಈ ನಿಟ್ಟಿನಲ್ಲಿ ನಾಗರೀಕರು ಸರ್ವ ಧರ್ಮಿಯರು , ಇಲಾಖೆಯೊಂದಿಗೆ ಎಲ್ಲಾ ರೀತಿಯಲ್ಲಿ ಸಹಕರಿಸಬೇಕೆಂದು ಅವರು ಕರೆ ನೀಡಿದರು.
ಕಾರಣ ಹಬ್ಬದ ಸಂದರ್ಭದಲ್ಲಿ ಎಲ್ಲರ ನೆಮ್ಮದಿ ಕಾಪಾಡುವ ನಿಟ್ಟಿನಲ್ಲಿ , ಎಲ್ಲಾ ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಬುದ್ದಿ ಹೇಳಬೇಕಿದೆ. ಅವರಲ್ಲಿ ಕಾನೂನಿನ ಗಾಂಭೀರ ಪ್ರಭಾವ ಕುರಿತು , ಅರಿವು ಮೂಡಿಸಿ ಸಂಯಮ ಶಾಂತಿ ಸೌಹಾರ್ದತೆಯಿಂದ ವರ್ತಿಸುವಂತೆ ಜಾಗ್ರತೆ ಮೂಡಿಸಬೇಕಿದೆ ಎಂದರು.
ಮತ್ತು ಪ್ರಭಾವಿಗಳು ಸಂಘ ಸಂಸ್ಥೆಗಳ ಪ್ರಮುಖರು ರಾಜಕಾರಣಿಗಳು , ಹಿರಿಯರು ಮುಖಂಡರು ತಮ್ಮ ತಮ್ಮ ಯುವಕರನ್ನು ಹದ್ದು ಬಸ್ತಿನಟ್ಟಿರಬೇಕಿದೆ. ಈ ಮೂಲಕ ಇಲಾಖೆಯೊಂದಿಗೆ ಸಹಕರಿಸಿ , ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊಂದಬೇಕಿದೆ ಎಂದರು.
*ಇಲಾಖೆ ಸರ್ವರೀತಿಯಲ್ಲಿ ಸನ್ನದ್ಧ*- ಮೊಹರಂ
ಹಬ್ಬ ಅಚರಣೆ ಹಾಗೂ ಮೆರವಣಿಗೆ ಸಂದರ್ಭದಲ್ಲಿ , ಯಾವುದೇ ಅಹಿತಕರ ಘಟನೆಗೆ ಅಸ್ಪದವಿರುವುದಿಲ್ಲ. ಮುಂಜಾಗ್ರತೆಯಾಗಿ ಅಗತ್ಯ ಭದ್ರತಾ ಕ್ರಮಗಳನ್ನು ಜರುಗಿಸಲಾಗುತ್ತದೆ , ಪ್ರಮುಖ ಬೀದಿಗಳು ಹಾಗೂ ಧಾರ್ಮಿಕ ಕೇಂದ್ರಗಳ ಬಳಿ , ಮತ್ತು ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತೆ. ಅಗತ್ಯವಿರುವ ಕಡೆ ಮೀಸಲು ಪೊಲೀಸ್ ಪಡೆ ನೇಮಿಸಿ , ಸೂಕ್ತ ಬಿಗಿ ಭದ್ರತೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ , ಸೂಕ್ಷ್ಮ ಪ್ರದೇಶಗಳಲ್ಲಿ ಗುಂಪು ಸೇರುವುದನ್ನು ನಿಷೇಧಿಸಲಾಗಿದ್ದು ತೀವ್ರ ನಿಗಾ ವಹಿಸಲಾಗಿರುತ್ತೆ ಎಂದರು.
*ಗಣ್ಯರು ವಿವಿದ ಸಮುದಾಯಗಳ ಪ್ರಮುಖರು ಭಾಗಿ*
ವೇದಿಕೆಯಲ್ಲಿದ್ದ ತಹಶಿಲ್ದಾರರಾದ ವಿ.ಕೆ.ನೇತ್ರಾವತಿರವರು , ಸಿಪಿಐ ಪ್ರಹ್ಲಾದ್ ಆರ್ ಚನ್ನಗಿರಿ ರವರು ಮಾತನಾಡಿದರು. ಹಲವು ಮುಖಂಡರು ಮಾತನಾಡಿ , ಸಲಹೆ ಸೂಚನೆಗಳನ್ನು ಅಭಿಪ್ರಾಯಗಳನ್ನು ಸಭೆಯಲ್ಲಿ ನೀಡಿದರು.
ಪಿಎಸ್ಐ ಸಿ ಪ್ರಕಾಶ ಇದ್ದರು. ಮುಸ್ಲೀಂ ಧರ್ಮದ ಪ್ರಮುಖರು ಸೇರಿದಂತೆ , ವಿವಿದ ಧರ್ಮಗಳ ಗುರುಗಳು , ವಿವಿದ ಸಮುದಾಯಗಳ ಮುಖಂಡರು. ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಪಟ್ಟಣದ ಹಿರಿಯರು , ನಾಗರೀಕರು , ವಿವಿದ ಪಕ್ಷಗಳ ಪ್ರಮುಖರು , ಯುವಕರು , ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ವಿ.ಜಿ.ವೃಷಭೇಂದ್ರ ಕೂಡ್ಲಿಗಿ – 9008937428 / 8151937428*


















