ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ
ಅಥಣಿ : ತಾಲೂಕಿನಲ್ಲಿ ಮಧುಬಾವಿ ಗ್ರಾಮದ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಕಾರ್ಯಾಲಯದಲ್ಲಿ ರಾಜ್ಯಾಧ್ಯಕ್ಷರು ಭೇಟಿ ನೀಡಿದರು.
ರಾಜ್ಯದ್ಯಕ್ಷರು ಮಾತನಾಡಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಬಗ್ಗೆ ಇವರ ನೀಡಿ ನಮ್ಮ ಗುರಿ ನಿರುದ್ಯೋಗಿಯ ನಿವಾರಣೆ ನಮ್ಮ ಸಂಸ್ಥೆಯ ಗುರಿ ಎಂದು ಹೇಳಿದರು ನಮ್ಮೆಲ್ಲಾ ಸದಸ್ಯರು ನಮ್ಮ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಿ ಎಂದರು ನಮ್ಮ ಯೋಜನೆಗಳನ್ನ ಪಡೆದುಕೊಳ್ಳುವರು ನಮ್ಮ ಸದಸ್ಯರಿಗೆ ಮಾತ್ರ ಎಂದು ಹೇಳಿದರು
ನಮ್ಮಲ್ಲಿ ಸದಸ್ಯರಿಗೆ ಎಚ್ಚರಿಕೆ ನೀಡಿದರು ಏನಾದರೂ ತಪ್ಪು ಮಾಡಿದ್ದಲ್ಲಿ ಭಷ್ಟಾಚಾರದಲ್ಲಿ ತೊಡಗಿದರೆ ಸಂಸ್ಥೆಯ ಕಪ್ಪು ಚುಕ್ಕೆ ತಂದರೆ ನಿಮ್ಮ ಸದಸ್ಯತ್ವವನ್ನು ರದ್ದುಗೊಳಿಸಲಾಗುವುದು ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.ಶಕ್ತಿದಳ ಕೂಡ ಈ ಕಾರ್ಯಕ್ರಮವನ್ನು ಯಶಸ್ವಿಯಾಗಲು ಕಾರ್ಯನಿರ್ವಹಿಸಿದರು.
ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿಯ ಸಂಸ್ಥೆಯ ತಾಲೂಕ ಘಟಕದ ಮುಖ್ಯಸ್ಥರಾದ ಪ್ರವೀಣ ನಾಯಿಕ ಮಾತನಾಡಿ ರಾಜ್ಯಾಧ್ಯಕ್ಷರ ಮಾತಿನಂತೆ ನಾವು ಶಿಸ್ತು ಬದ್ದಮತ್ತು ಯಾವುದೇ ರೀತಿ ಸಂಸ್ಥೆಗೆ ಚುಕ್ಕಿ ಬರದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುತ್ತಣ್ಣ ಕರಾಳಿ, ರಾಜು ಸಿಂದಗಿ ,ಶರಣಪ್ಪ ಶಿಂಧೆ ,ಅನಿಲ ಭಾಮನೆ, ಎಂ ಶರ್ಮಾ , ಮಹಾದೇವ ನಾಯಿಕ, ಅಮೂಲ ಚವಾನ,ಆದಿತ್ಯ ನಾಯಿಕ, ಸರಸ್ವತಿ ನ್ಯಾಮಗೌಡ, ಕವಿತಾ ಬೋಸ್ಲೆ, ರಂಜಾನ್ ಮುಲ್ಲಾ ಶಾಂತ ಶಿಂಧೆ ,ರೇಷ್ಮಾ ತೇಲಿ,ಸಾವಿತ್ರಿ ಬಡಿಗೇರ, ಅಶೋಕ ಬಡಿಗೇರ ಅನೇಕ ಮುಖಂಡರು ಉಪಸಿತರಿದ್ದರು. ಸೃಷ್ಟಿ ನಾಯಿಕ ಸ್ವಾಗತಿಸಿ ವಂದಿಸಿದರು.


















