ಶಾಲಾ ಸಂಸತ್ ಚುನಾವಣೆ ; ಮಕ್ಕಳಿಗೆ ಚುನಾವಣಾ ಅರಿವು..!
ಇಂಡಿ : ತಾಲೂಕಿನ ಲಚ್ಚಾಣ ಗ್ರಾಮದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಕಿರಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು. ಇದೇ ಪ್ರಪ್ರಥಮ ಬಾರಿಗೆ ಇವಿಎಂ ಮೂಲಕ ಚುನಾವಣೆಯನ್ನು ನಡೆಸಿ ಮಕ್ಕಳಲ್ಲಿ ಅರಿವು ಮೂಡಿಸಲಾಯಿತು. ಮಕ್ಕಳು ಚುನಾವಣೆಯಲ್ಲಿ ಭಾಗಿಯಾಗುವ ರೀತಿ ಎಲ್ಲರನ್ನ ಹುರಿದುಂಬಿಸುವಂತಿತ್ತು.
ಈ ಒಂದು ಕಾರ್ಯಕ್ರಮ ಮಕ್ಕಳಿಗೆ ಚುನಾವಣೆಯ ಬಗ್ಗೆ ತಿಳುವಳಿಕೆ ನೀಡುವಂತಿತ್ತು. ಇಲ್ಲಿ ಪ್ರಧಾನಮಂತ್ರಿಯಾಗಿ ಸೌಪರ್ಣಿಕಾ ಕುದರಿ, ಹಣಕಾಸು ಮಂತ್ರಿಯಾಗಿ ಆಕಾಶ್ ಪೂಜಾರಿ ಗ್ರಹ ಮಂತ್ರಿಯಾಗಿ ಶರತ್ ಮಾದರ್, ಕ್ರೀಡಾ ಮಂತ್ರಿಯಾಗಿ ಯೋಗೇಶ್ ಕಾಂಬಳೆ, ಸಾಂಸ್ಕೃತಿಕ ಮಂತ್ರಿ ಆಗಿ ಕೀರ್ತಿ ಮಾದರ್, ಪ್ರವಾಸೋದ್ಯಮ ಮಂತ್ರಿಯಾಗಿ ವೈಭವ ಅಗಸರ, ನೀರಾವರಿ ಮಂತ್ರಿಯಾಗಿ ಬಸವರಾಜ್ ದಶವಂತ, ಆರೋಗ್ಯ ಮಂತ್ರಿಯಾಗಿ ಶ್ರೀಧರ ಹಕ್ಕೀ, ಪ್ರಾರ್ಥನಾ ಮಂತ್ರಿಯಾಗಿ ಸುಕನ್ಯ ಆಯ್ಕೆಯಾದರು. ಇವರೆಲ್ಲರಿಗೂ ಕೂಡ ಪಾಲಕರು ಹಾಗೂ ಪ್ರಾಂಶುಪಾಲರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.