ಪ್ರಾಮಾಣಿಕತೆಗೆ ಪೊಲೀಸ್ ಠಾಣೆಯಲ್ಲಿ ಸನ್ಮಾನ: ₹1 ಲಕ್ಷ ಹಣವಿದ್ದ ಬ್ಯಾಗ್ ವಾಪಸ್ ನೀಡಿದ ಕರುನಾಡು ಕೆಫೆ ಮಾಲೀಕ
ಅಫಜಲಪುರ: ಜುಲೈ 20, 2026ರಂದು ONGC ಸಂಸ್ಥೆಯ ಸೆಕ್ಯೂರಿಟಿ ಇನ್ಸ್ಪೆಕ್ಟರ್ (ವಿಜಿಲೆನ್ಸ್ ವಿಭಾಗ) ಶಿವಾಜಿ ಚವ್ಹಾಣ ಅವರು ವೈಯಕ್ತಿಕ ಕೆಲಸದ ನಿಮಿತ್ತ ಅಫಜಲಪುರಕ್ಕೆ ಬಂದಿದ್ದರು.
ಈ ವೇಳೆ ಪಟ್ಟಣದ ಕರುನಾಡು ಕೆಫೆಯಲ್ಲಿ ಚಹಾ ಸೇವಿಸಿ ತೆರಳುವಾಗ ತಮ್ಮ ಬ್ಯಾಗ್ ಅನ್ನು ಅಲ್ಲಿಯೇ ಮರೆತು ಹೋಗಿದ್ದರು.
ಬ್ಯಾಗ್ನಲ್ಲಿ ₹1 ಲಕ್ಷ ನಗದು ಇತ್ತು.
ಕೆಫೆಯ ಮಾಲೀಕರಾದ ಮಂಜು ಬುತಾಳೆ ವಠಾರ ಅವರು ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಹೆಚ್ಚಿನ ಪ್ರಮಾಣದ ನಗದು ಇರುವುದನ್ನು ಗಮನಿಸಿ ಯಾವುದೇ ಆಸೆಪಡದೆ ನೇರವಾಗಿ ಅಫಜಲಪುರ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದರು. ಬಳಿಕ ಪೊಲೀಸರು ಶಿವಾಜಿ ಚವ್ಹಾಣ ಅವರನ್ನು ಸಂಪರ್ಕಿಸಿ ಬ್ಯಾಗ್ ಹಾಗೂ ಅದರಲ್ಲಿದ್ದ ₹1 ಲಕ್ಷ ನಗದನ್ನು ಸುರಕ್ಷಿತವಾಗಿ ಹಸ್ತಾಂತರಿಸಿದರು.
ಮಂಜು ಬುತಾಳೆ ವಠಾರ ಅವರ ಪ್ರಾಮಾಣಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮೆಚ್ಚಿದ ಅಫಜಲಪುರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಮತಿ ವಾತ್ಸಲ್ಯ ಅವರು ಪೊಲೀಸ್ ಠಾಣೆಯ ವತಿಯಿಂದ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಅನಿಸಿಕೆ 1
ದಿನನಿತ್ಯ ಪ್ರಸ್ತುತ ಸಮಾಜದಲ್ಲಿ ಕಳ್ಳತನ ಸುಲಿಗೆ ಹಿಂತಹ ಪ್ರಕರಣದ ನಡೆಯುತ್ತಿರುವದು ಕೆಟ್ಟ ಘಟಕಗಳ ನಡುವೆ ತಮ್ಮ ಕೇಫೆಯಲ್ಲಿ ಬಿಟ್ಟು ಹೋದ ಒಂದು ಲಕ್ಷ ರೂಪಾಯಿಗಳ ಬ್ಯಾಗ ಸಿಕ್ಕ ನಂತರ ಪೋಲಿಸ ಅಧಿಕಾರಿಗಳ ಸಮ್ಮುಖದಲ್ಲಿ ಮರಳಿಸಿದ್ದು ಮಾನವಿಯತೆಗೆ ಹಿಡಿದ ಕೈ ಗನ್ನಡಿಯಾಗಿದೆ
ಪುಂಡಲೀಕ ಹೊಸಮನಿ ( ಯುವ ಮುಖಂಡರು ಅಫಜಲಪುರ)
ಈ ಘಟನೆ ಸಾರ್ವಜನಿಕರಲ್ಲಿ ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳಿಗೆ ಉತ್ತಮ ಮಾದರಿಯಾಗಿದ್ದು, ಮಂಜು ಬುತಾಳೆ ವಠಾರ ಅವರ ಕಾರ್ಯಕ್ಕೆ ಪಟ್ಟಣದ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
.