ದಶಕಗಳ ಕನಸು ರಾಮಾಪುರ ಗರಿಕೆಕಂಡಿ ಮಾರ್ಗದ 14 ಕಿ ಮೀ ರಸ್ತೆಗೆ ಗುದ್ದಲಿ ಪೂಜೆ ಮಾಡಿದ ಶಾಸಕ ಎಂ ಆರ್ ಮಂಜುನಾಥ್
ಹನೂರು : ತಾಲೂಕಿನಲ್ಲಿ ಕಳೆದ ಎರಡು ದಶಕಗಳಿಂದ ಡಾಂಬರನ್ನು ಕಾಣದೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ವಾಹನ ಸವಾರರಿಗೆ ಕಾಡುತ್ತಿದ್ದ ರಸ್ತೆಗೆ ಲೋಕೋಪಯೋಗಿ ಇಲಾಖೆಯ ಅನುದಾನದ ದಡಿಯಲ್ಲಿ 25 ಕೋಟಿ ವೆಚ್ಚದಲ್ಲಿ ರಾಮಾಪುರದಿಂದ ಗರಿಕೆಕಂಡಿ ತನಕ 14 ಕಿಮಿ ರಸ್ತೆಗೆ ಕ್ಷೇತ್ರದ ಶಾಸಕ ಎಂ ಆರ್ ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಎಂ ಆರ್ ಮಂಜುನಾಥ್ ಇಂದಿನ ರಸ್ತೆ ಕಾಮಗಾರಿ ನಮ್ಮ ಕ್ಷೇತ್ರದ ಬದಲಾವಣೆ ತರುವಂತದಾಗಿದೆ. ಕಳೆದ 15 – 20 ವರ್ಷದಿಂದ ಅಭಿವೃದ್ಧಿ ಕಾಣದೆ ವಾಹನ ಸವಾರರಿಗೆ ಈ ಭಾಗದ ಸಾರ್ವಜನಿಕರಿಗೆ ಹಲವಾರು ಅಪಘಾತಗಳಾಗಿ ಸಂಕಷ್ಟ ತಂದಿದ್ದ ರಸ್ತೆಗೆ ಇವತ್ತು ಗುದ್ದಲಿ ಪೂಜೆ ನಡೆಸಿರುವುದು ನನಗೆ ತುಂಬಾ ಸಂತೋಷವಾಗಿದೆ. ಈ ರಸ್ತೆ ವಿಚಾರವಾಗಿ ಅನುದಾನ ನೀಡಲು ಲೋಕೋಪಯೋಗಿ ಇಲಾಖೆ ಸಚಿವರಾದ ಜಾರಕಿಹೊಳಿ ಅವರಿಗೆ ಹೇಳಿಕೊಂಡಾಗ ಸ್ಪಂದಿಸಿ ಅನುಮೋದನೆ ನೀಡಿ ತುಂಬಾ ಉಪಕಾರ ಮಾಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ . ಹನೂರಿನಿಂದ ರಾಮಾಪುರ -ಗರಿಕೆಕಂಡಿ ಮಾರ್ಗವಾಗಿ ತಮಿಳುನಾಡು ಸಂಪರ್ಕ ನೀಡುವ ರಸ್ತೆ ಇದಾಗಿದ್ದು.ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಲು ಸರ್ಕಾರಕ್ಕೆ ಒತ್ತಾಯ ಮಾಡುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿ. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗೆ ಕಾಮಗಾರಿಯು ಉತ್ತಮ ಗುಣಮಟ್ಟದಿಂದ ಕೂಡಿರಲಿ ಇನ್ನೇನು ವಾರದೊಳಗೆ ಟೆಂಡರ್ ಆಗಲಿದೆ ಮಾರ್ಚ್ 12 ರಿಂದ ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಇರುವ ಕಾರಣ ಈ ರಸ್ತೆ ಕಾಮಗಾರಿ ವಿಳಂಬ ಆಗದಿರಲಿ ಎಂದು ಭೂಮಿ ಪೂಜೆ ಮಾಡಿದ್ದೇವೆ. ಇನ್ನು ನಮ್ಮ ಕ್ಷೇತ್ರದಲ್ಲಿ ವಿವಿಧೆಡೆ ಗುಂಡಿ ಬಿದ್ದಿರುವ ರಸ್ತೆಗಳು ಆದಷ್ಟು ಬೇಗನೆ ಅಭಿವೃದ್ಧಿ ಆಗುತ್ತದೆ. ನಿಮ್ಮೆಲ್ಲರ ಸಹಕಾರದ ಜೊತೆ ನಾನು ಆ ಕೆಲಸವನ್ನು ನಾನು ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾರ್ಟಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಸಂದ್ಯಾ, ಎಇಇ ಚಿನ್ನಣ್ಣ,ಇಂಜಿನಿಯರ್ ಮಹೇಶ್, ಜೆಡಿಎಸ್ ಮುಖಂಡ, ಮಂಜೇಶ್, ಶ್ರೀನಾ, ಮಹದೇವ ಪ್ರಸಾದ್, ಕೇಬಲ್ ರಾಜು, ಪ್ರಸಾದ್ ,ಶಿವಪ್ಪ,ಮುನಿಯಪ್ಪ,ಹುಚ್ಚಯ್ಯ,ಶಾಗ್ಯ ಬಾಬು, ಮಮಂಜಿ, ಮೈಕಲ್, ಕಂಟ್ರಾಕ್ಟರ್ ಮಹೇಶ್, ಗೋವಿಂದೆ ಗೌಡ,ಎಸ್ ಆರ್ ಮಹಾದೇವ,ಇನ್ನು ಮುಂತಾದವರು ಹಾಜರಿದ್ದರು.
ವರದಿ:ಚೇತನ್ ಕುಮಾರ್ ಎಲ್, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ