ಮಲ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಂಆರ್ ಮಂಜುನಾಥ್
ಹನೂರು : ಮಲ ತ್ಯಾಜ್ಯ ನಿರ್ವಹಣಾ ಘಟಕವನ್ನು
ಸುಮಾರು 70ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಕ್ಕೆ ಕೊಂಗರಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಶಾಸಕ ಮಂಜುನಾಥ್ ಗುದ್ದಲಿಪೂಜೆ ನೇರವೇರಿಸಿದರು.
ಶಾಸಕ ಎಂಆರ್ ಮಂಜುನಾಥ್ ಮಾತನಾಡಿ
ನಗರ ಪ್ರದೇಶಗಳಲ್ಲಿ ಇಲ್ಲದೇ ಇರುವಂತಹ ಈ ಸೌಲಭ್ಯಗಳನ್ನು ಗ್ರಾಮೀಣ ವ್ಯಾಪ್ತಿಗಳಲ್ಲಿಯೂ ಒದಗಿಸುವ ಉದ್ದೇಶದಿಂದ ಈ ಘಟಕ ನಿರ್ಮಾಣ ಮಾಡಲಾಗುತ್ತಿದ್ದು, ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತೆಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಚಿಕ್ಕಸ್ವಾಮಿ, ಮುಖಂಡರಾದ ರಾಜಣ್ಣ ಸಿಂಗನಲ್ಲೂರು ಮಂಜೇಶ್
ಇ,ಓ ಶ್ರೀನಿನಾಸ್ ಕುಡಿಯುವ ನೀರು ನ್ಯೆರ್ಮಲ್ಯ ಎಇಇ ಹರೀಶ್ ಪಿಡಿಒ ಮಹೇಂದ್ರ ಒಳಚರಂಡಿ ಹಾಗೂ ಕುಡಿಯುವ ನೀರಿನ ಇಲಾಖೆಯಅಧಿಕಾರಿ ಪೂರ್ಣಿಮಾ ಇನ್ನು ಮುಂತಾದವರು ಹಾಜರಿದ್ದರು.