ರಾಯಚೂರು : ಅಲ್ಲಮಪ್ರಭು ಬಡಾವಣೆಯ ಶ್ರೀ ಹುತ್ತಿನ ಉದ್ಭವ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಪ್ರತಿವರ್ಷದಂತೆ ಈ ವರ್ಷವೂ ಕೂಡ ದೇವಸ್ಥಾನ ಸಮಿತಿಯು ಹಮ್ಮಿಕೊಂಡಿದೆ.
ರಾಯಚೂರು ನಗರದ ಜ್ಯೋತಿ ಕಾಲೋನಿಯ ಅಲ್ಲಮಪ್ರಭು ಬಡಾವಣೆಯಲ್ಲಿ ಇರುವಂತಹ ಹುತ್ತಿನ ಉದ್ಭವ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ಯ ವೀರನಗೌಡ ಹಂಚಿನಾಳ ಮಾಧ್ಯಮಗೋಷ್ಠಿ ಮುಖಾಂತರ ತಿಳಿಸಿದರು, ಫೆಬ್ರವರಿ 16ರಂದು ಜಾತ್ರೆ ಆರಂಭವಾಗುತ್ತಿದ್ದು , ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಯಲ್ಲಮ್ಮ ದೇವಿಗೆ, ಅಭಿಷೇಕ, ಅರ್ಚನೆ, ಉಡಿತುಂಬುವ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಉತ್ಸವ ಮಾಡಲಾಗುವುದು ಎಂದರು.
ಜಾತ್ರಾ ಮಹೋತ್ಸವದಲ್ಲಿ ನಗರ, ಜಿಲ್ಲೆ ಹೊರರಾಜ್ಯದ ಭಕ್ತಮಂಡಳಿ ಕೂಡ ಭಾಗವಹಿಸಲಿದ್ದು ಅದ್ದೂರಿಯಾಗಿ ಜಾತ್ರ ಮಹೋತ್ಸವ ಜರುಗಿಸಲು ಭಕ್ತಮಂಡಳಿ ಸಹಕರಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೀರನಗೌಡ ಹಂಚಿನಾಳ, ವೆಂಕಟೇಶ ಮೇಸ್ತ್ರಿ, ನರಸಿಂಹಲು, ವೀರೇಶ್, ಗೋವಿಂದ, ರಾಜು ಹೆಸರೂರು, ರಾಜು ಆಂಜನೇಯ ಉಪಸ್ಥಿತರಿದ್ದರು.