Voice Of JANATA : RONA : ಕಳೆದ 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೊಬ್ಬ ಅಯೋಧ್ಯೆಯಲ್ಲಿ ರಾಮ ಭಕ್ತನಾಗಿ ಪತ್ತೆಯಾಗಿದ್ದಾನೆ. ಹೌದು, ರೋಣ ಪಟ್ಟಣದ ಪೂಜಾ ಗಾರ್ಮೆಂಟ್ಸ್ನ್ ಮಾಲೀಕ ಜಗದೀಶ ಬಾಟಿ ಅವರ ಸಹೋದರ ಪದ್ಮರಾಜ ಬಾಟಿ ಈಗ ಅಯೋಧ್ಯೆಯಲ್ಲಿ ರಾಮ ಭಕ್ತನಾಗಿ ಪತ್ತೆಯಾಗಿದ್ದಾನೆ.
ಕೆಲಸ ನಿಮಿತ್ಯ ಲೋಕಾಪೂರಕ್ಕೆ ಹೋಗಿದ್ದ ಇಲ್ಲಿಯವರೆಗೂ ಪದ್ಮರಾಜ, ವಾಪಸ್ಸು ಬಂದಿರಲಿಲ್ಲಾ, ಗಾಬರಿಗೊಂಡ ಮನೆಯವರು ಹಲವಡೆ ಹುಡುಕಾಡಿದ್ದರು. ಇಲ್ಲಿಯವರೆಗೂ ಪತ್ತೆಯಾಗಿರಲಿಲ್ಲಾ. ಮನೆ ಬಿಟ್ಟು ಅಯೋಧ್ಯೆಗೆ ಹೋಗಿದ್ದ ಜಗದೀಶ ಅಯೋಧ್ಯೆಯಲ್ಲಿ ರಾಮ ಭಕ್ತನಾಗಿ ಹೆಸರು ಶಿವಗಿರಿ ಎಂದು ಬದಲಿಸಿಕೊಂಡು ರಾಮ ಮಂದಿರದ ಸೇವೆಯನ್ನು ಮಾಡುತ್ತಾ ಇದ್ದನು.
ಆಧಾರ ಕಾರ್ಡ್ನಿಂದ ಪತ್ತೆ :
ರಾಮ ಮಂದಿರದಲ್ಲಿ ಕೆಲಸ ಮಾಡುತ್ತಿದ್ದ, ಎಲ್ಲಾ ಕರ ಸೇವಕರು ಕಡ್ಡಾಯವಾಗಿ ಆಧಾರ್ ಕಾರ್ಡು ಮಾಡಿಸಬೇಕು ಎಂದು ಅಲ್ಲಿನ ಮುಖ್ಯಸ್ಥರು ಸೂಚಿಸಿದಾಗ ಪದ್ಮರಾಜ ಆಧಾರ್ ಕಾರ್ಡು ಮಾಡಿಸಲು ಮುಂದಾದರು, ಈ ಮೊದಲು ಅವರು ಆಧಾರ್ ಕಾರ್ಡು ಮಾಡಿಸಿದ್ದರಿಂದ, ಹೊಸ ಆಧಾರ್ ಕಾರ್ಡು ಮಾಡಿಸಲು ಹೆಬ್ಬೆರಳು ಮುದ್ರೆ ನೀಡಿದಾಗ, ಈ ಮೊದಲು ಆಧಾರ್ ಕಾರ್ಡು ಮಾಡಿಸಿದ್ದ ಇವರ ಮನೆಯ ವಿಳಾಸಕ್ಕೆ ಮಾಹಿತಿಯೊಂದು ಬಂದಿದ್ದು, ಈ ಮಾಹಿತಿಯ ಆಧಾರದ ಮೇಲೆ ಪದ್ಮರಾಜ ಅಯ್ಯೋಯಲ್ಲಿರುವುದು ಪತ್ತೆಯಾಗಿದ್ದು. ಅಲ್ಲದೆ ಇವರ ಮೊಬೈಲ್ ನಂಬರ್ ಕೂಡಾ ಮನೆಯವರಿಗೆ ಪತ್ತೆಯಾಗಿದೆ.
ಸಂತಸ ಪಟ್ಟ ಮನೆಯವರು- ಕಳೆದ 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪದ್ಮರಾಜ ಮರ್ಯಾದಾ ಪುರುಷೋತ್ತಮ ಶ್ರೀರಾಮ ಜನ್ಮಸ್ಥಳ ಅಯೋಧ್ಯೆಯಲ್ಲಿರುವುದು ಕುಟುಂಭಸ್ಥರಿಗೆ ಸಂತಸ ತಂದಿದೆ, ಅಲ್ಲದೇ, ಮನೆಯವರು ಜಗದೀಶ ಜೊತೆ ದೂರವಾಣಿಯಲ್ಲಿ ಮತನಾಡಿದ್ದು, ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯ ಬಳಿಕ ನಿಮ್ಮಲ್ಲಿಗೆ ಬರುವುದಾಗಿ ತಿಳಿಸಿದ್ದಾರೆ ಎಂದು ಅವರ ಸಹೋದರ ಜಗದೀಶ ತಿಳಿಸಿದ್ದಾರೆ.