• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

    ಚರಂಡಿ ಸ್ವಚ್ಛಗೊಳಿಸಿ, ಅನಧಿಕೃತ ಕಟ್ಟಡ ತೆರವುಗೊಳಿಸಿ: ಪುರಸಭೆಗೆ ಇಂದಿರಾನಗರ ನಿವಾಸಿಗಳ ಆಗ್ರಹ

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

    ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

    ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

      ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ

      ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

      ಇಂದು ಇಂಡಿಯಲ್ಲಿ ಪತ್ರಿಕಾ ದಿನಾಚರಣೆ

      ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

      ಸಮಾಜಮುಖಿ ಕಾರ್ಯದ ಮೂಲಕ ಆರ್.ಡಿ.  ಪಾಟೀಲ್ ಜನ್ಮದಿನ

      ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

      ಭೀಮಾ ನದಿಗೆ 300 ಕ್ಯೂಸೆಕ್‌ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ

      ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

      ಇಂಡಿಯಲ್ಲಿ ನೂತನ ಬಿಇಓಗೆ ಸನ್ಮಾನ – ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಭರವಸೆ

      ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

      ಚನ್ನಮ್ಮ ದೇವೇಗೌಡ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

      ಚರಂಡಿ ಸ್ವಚ್ಛಗೊಳಿಸಿ, ಅನಧಿಕೃತ ಕಟ್ಟಡ ತೆರವುಗೊಳಿಸಿ: ಪುರಸಭೆಗೆ ಇಂದಿರಾನಗರ ನಿವಾಸಿಗಳ ಆಗ್ರಹ

      ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

      ಪೋಲಿಯೋ ಮುಕ್ತ ಸಮಾಜಕ್ಕಾಗಿ ಚವನಭಾವಿಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ.

      ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

      ಕಮಲಾಬಾಯಿಗೌಡತಿ ದಾದಾಗೌಡ ಪಾಟೀಲ ನಿಧನ

      ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

      ಜ್ಞಾನವೇ ಜೀವನದ ನಿಜವಾದ ಆಸ್ತಿ-ಅನಂತ್ ಜೈನ್

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ರಾಜ್ಯ

      ಯತ್ನಾಳರ ಮಹತ್ವದ ಹೇಳಿಕೆ: ಲಚ್ಯಾಣ ಮಠದ ಗೊಂದಲಕ್ಕೆ ಜಿಡಗಾ-ಮುಗಳಖೇಡ ಶ್ರೀಗಳ ನೇತೃತ್ವದಲ್ಲಿ ಪರಿಹಾರ!

      Voiceofjanata.in

      August 10, 2026
      0
      ಯತ್ನಾಳರ ಮಹತ್ವದ ಹೇಳಿಕೆ: ಲಚ್ಯಾಣ ಮಠದ ಗೊಂದಲಕ್ಕೆ ಜಿಡಗಾ-ಮುಗಳಖೇಡ ಶ್ರೀಗಳ ನೇತೃತ್ವದಲ್ಲಿ ಪರಿಹಾರ!
      0
      SHARES
      0
      VIEWS
      Share on FacebookShare on TwitterShare on whatsappShare on telegramShare on Mail

      ಯತ್ನಾಳರ ಮಹತ್ವದ ಹೇಳಿಕೆ: ಲಚ್ಯಾಣ ಮಠದ ಗೊಂದಲಕ್ಕೆ ಜಿಡಗಾ-ಮುಗಳಖೇಡ ಶ್ರೀಗಳ ನೇತೃತ್ವದಲ್ಲಿ ಪರಿಹಾರ!

       

      ಇಂಡಿ: “ಲಚ್ಯಾಣದ ಸದ್ಗುರು ಶ್ರೀ ಸಿದ್ದಲಿಂಗ ಮಹಾರಾಜರ ಪುಣ್ಯಭೂಮಿ ಅತ್ಯಂತ ಪವಿತ್ರವಾದದ್ದು. ಮುಗಳಖೋಡ ಮತ್ತು ಜಿಡಗಾ ಮಹಾಸಂಸ್ಥಾನ ಮಠಗಳಿಗಿಂತಲೂ ಈ ಲಚ್ಯಾಣದ ಶ್ರೀಮಠವು ಆಧ್ಯಾತ್ಮಿಕವಾಗಿ ಮತ್ತು ಸಾಮಾಜಿಕವಾಗಿ ಇನ್ನೂ ಎತ್ತರಕ್ಕೆ ಬೆಳೆಯಬೇಕು, ದೇಶದಾದ್ಯಂತ ಕೀರ್ತಿ ಪಸರಿಸಬೇಕು ಎಂಬುದೇ ನಮ್ಮ ಪರಮ ಆಶಯವಾಗಿದೆ” ಎಂದು ಮುಗಳಖೋಡ-ಜಿಡಗಾ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾರ್ಮಿಕವಾಗಿ ನುಡಿದಿದ್ದಾರೆ.

      ಭಾನುವಾರ ಇಂಡಿ ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾಪ್ರಭುಗಳ ಕರ್ತೃ ಗದ್ದುಗೆಯ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಷ ಬಿಲ್ವಾರ್ಚನೆ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಧರ್ಮಸಭೆಯ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

      ಲಚ್ಯಾಣ ಮಠ ಭಕ್ತಿ ಶ್ರದ್ದೆಯ ಅಭಿಮಾನ, ಭಕ್ತಿ ಇರುವಲ್ಲಿ ಭಗವಂತ ಇರುತ್ತಾನೆ, ಗುರುಗಳು ಇದ್ದಲ್ಲಿ ಶಿಷ್ಯರು ಇರುತ್ತಾರೆ. ಭಕ್ತ ಜ್ಞಾನ, ಸತ್ಯ, ಧರ್ಮ, ನೀತಿ, ಭಕ್ತಿ, ಸಂಸ್ಕಾರ, ನ್ಯಾಯದಿಂದ ಭಗವಂತನ ಸ್ಥಾನ ಪಡೆಯುತ್ತಾನೆ. ಅಪಾರ ಶಿಷ್ಯರನ್ನು ಹೊಂದಿರುವ ಲಚ್ಯಾಣ ಮಠದ ಕೀರ್ತಿ ರಾಜ್ಯಾದಂತ ಬೆಳೆಯಬೇಕು. ಲಚ್ಯಾಣ ಮಠ ಪ್ರಗತಿ ಹೊಂದಿ ಬೆಳೆಯ ಬೇಕು, ಸಿದ್ದಲಿಂಗ ಗುರುಗಳ ಶಕ್ತಿ ಎತ್ತರಕ್ಕೆ ಬೆಳೆಯಬೇಕು. ಇಂದು ಮಹಿಳೆಯರು ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಿದ್ದಲಿಂಗರ ಆಶೀರ್ವಾದದಿಂದ ನೂರು ದಾಂಪತ್ಯ ಸುಖಮಯ ಜೀವನ ನಿಮ್ಮದು, ಸಿದ್ದಲಿಂಗರ ಆಶೀರ್ವಾದ ನಿಮ್ಮ ಮೇಲಿದೆ ಎಂದರು.

      ಮುಗಳಖೋಡದ ಸದ್ಗುರು ಶ್ರೀ ಯಲ್ಲಾಲಿಂಗ ಮಹಾರಾಜರು ಮತ್ತು ಲಚ್ಯಾಣದ ಸದ್ಗುರು ಶ್ರೀ ಸಿದ್ಧಲಿಂಗ ಮಹಾರಾಜರ ನಡುವಿನ ಐತಿಹಾಸಿಕ ಹಾಗೂ ದಿವ್ಯ ಗುರು-ಶಿಷ್ಯ ಪರಂಪರೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಈ ಮಹಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

      ಶಾಸಕ ಬಸವನಗೌಡ ಪಾಟೀಲ ಯತ್ನಾಳರು ಮಾತನಾಡಿ, ಲಚ್ಯಾಣ ಬಂಥನಾಳದ ಸಂಗನಬಸವ ಶ್ರೀಗಳು ವಿಜಯಪುರ ಜಿಲ್ಲೆ ಶೈಕ್ಷಣಿಕ ಕ್ರಾಂತಿ ಮಾಡಿದ್ದು ವಿಜಯಪುರ ಜಿಲ್ಲೆಯ ಜನರಿಗೆ ಶಿಕ್ಷಣ ನೀಡುವಲ್ಲಿ ಶ್ರಮಿಸಿದ್ದಾರೆ. ಲಚ್ಯಾಣ ಮಠ ಭವ್ಯ ಪರಂಪರೆ ಹೊಂದಿದೆ. ಸರಕಾರ ಮಾಡದ ಕೆಲಸ ಬಂಥನಾಳ ಶ್ರೀಗಳು ಮಾಡಿದ್ದು ಆ ಪರಂಪರೆ ಉಳಿಸಿಕೊಂಡು ಹೋಗಬೇಕಾಗಿದೆ. ಮಠದ ಏಳ್ಗೆಗಾಗಿ ಎಲ್ಲರ ಅಭಿಪ್ರಾಯ ಪಡೆದು , ಜಿಡಗಾ-ಮುಗಳಖೇಡ ಪೂಜ್ಯರ ನೇತೃತ್ವದಲ್ಲಿ ಗೊಂದಲ ನಿರ್ಮೂಲನೆ ಮಾಡಬೇಕು ಎಂದರು.

      ಅಭಿನವ ಸಿದ್ದಾರೂಢ ಮಹಾಸ್ವಾಮೀಜಿ ಷರ್ಣಮುಖಾರೂಢ ಮಠ ಹುಬ್ಬಳ್ಳಿ, ಅಭಿನವ ಮೃತ್ಯುಂಜಯ ಶ್ರೀಗಳು ಮಣಕವಾಡ, ವೀರ ಮಹಾಂತ ಶ್ರೀಗಳು ಚಿನ್ಮಯಗಿರಿ, ನಿರಂಜನ ಶ್ರೀಗಳು ಅಫಜಲಪೂರ, ಶ್ರೀ ಅಮರನಾಥ ಮಹಾದೇವ ಮಠ ಕುಷ್ಟಗಿ, ಶಿರಶ್ಯಾಡದ ಆಬಿನವ ಮುರಘೇಂದ್ರ ಶ್ರೀಗಳು, ಧನರಾಜ ಮುಜಗೊಂಡ ಮಾತನಾಡಿದರು.

      ವೇದಿಕೆಯಲ್ಲಿ ಹಳಿಂಗಳಿ ಶಿವಾನಂದ ಶ್ರೀಗಳು, ಜುನಾಗಡದ ಮಹಾಂತ ಸಹದೇವಾನಂದ ಗಿರಿ ಶ್ರೀಗಳು, ಹುಣಸಿಹಾಳದ ನಿಜಗುಣ ದೇವರು, ಜಕನೂರದ ಸಿದ್ದಲಿಂಗ ದೇವರು, ಸುಲೇಪೇಠದ ದೊಡ್ಡೆಂದ್ರ ಶ್ರೀಗಳು, ಕಲಬುರಗಿಯ ಚರಲಿಂದ ಶ್ರೀಗಳು, ಮಾಶ್ಯಾಳದ ಮರುಳಾರಾಧ್ಯ ಶ್ರೀಗಳು, ನಿಂಬರ್ಗಾದ ಶಿವಲಿಂಗೇಶ್ವರ ಶ್ರೀಗಳು, ಜೋಗುರದ ಶಂಕರಾನAದ ಶ್ರೀಗಳು, ರೂಗಿಯ ಸುಗಲಾತಾಯಿ, ತುಂಗಳದ ಅನುಸೂಯಾ ಮಾತಾಜಿ, ಚಿಕ್ಕ ಪಡಸಲಗಿಯ ಅಕ್ಕಮಹಾದೇವಿ, ಶಶಿಕಾಂತ ಗುರುಜಿ, ದಯಾಸಾಗರ ಪಾಟೀಲ, ಕಾಸುಗೌಡ ಬಿರಾದಾರ ಮತ್ತಿತರಿದ್ದರು.

      ಈ ಮಹೋತ್ಸವಕ್ಕೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಮಹಾಜನರು ಭಕ್ತಿ ಸಾಗರದಲ್ಲೇ ತೇಲಾಡಿದರು. ಮಠದ ವತಿಯಿಂದ ಆಗಮಿಸಿದ ಸಮಸ್ತ ಭಕ್ತಾದಿಗಳಿಗೆ ಭವ್ಯ ದಾಸೋಹ ಹಾಗೂ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

      ಇಂಡಿ: ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾಪ್ರಭುಗಳ ಕರ್ತೃ ಗದ್ದುಗೆಯ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಷ ಬಿಲ್ವಾರ್ಚನೆ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಧರ್ಮಸಭೆಯ ಪಾವನ ಸಾನಿಧ್ಯವಹಿಸಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

      ಇಂಡಿ: ಸಾವಿರಾರು ಮಹಿಳೆಯರಿಗೆ ಉಡಿ ತುಂಬಲಾಯಿತು.

      ಇಂಡಿ: ಮುಗಳಖೋಡ-ಜಿಡಗಾ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಸಿಧ್ದಲಿಂಗ ಮಹಾರಾಜರ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ ನೆರವೇರಿಸಿದರು.

      Tags: #Public News#Significant statement by Yatnal: Resolution to the Lachyan Matha dispute under the leadership of the Jidaga-Mugalakheda Seers!#State News#Today News#VOICE OF JANATA (VOJ-VOJ)#Voice Of Janata Desk News#Voiceofjanata.in#ಲಚ್ಯಾಣ #ಬಂಥನಾಳ #ಬಸವನಗೌಡಪಾಟೀಲಯತ್ನಾಳ #ವಿಜಯಪುರ #ಲಚ್ಯಾಣಮಠ #ಜಿಡಗಾ #ಮುಗಳಖೇಡ #BreakingNews #VoiceOfJanata
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಯತ್ನಾಳರ ಮಹತ್ವದ ಹೇಳಿಕೆ: ಲಚ್ಯಾಣ ಮಠದ ಗೊಂದಲಕ್ಕೆ ಜಿಡಗಾ-ಮುಗಳಖೇಡ ಶ್ರೀಗಳ ನೇತೃತ್ವದಲ್ಲಿ ಪರಿಹಾರ!

      ಯತ್ನಾಳರ ಮಹತ್ವದ ಹೇಳಿಕೆ: ಲಚ್ಯಾಣ ಮಠದ ಗೊಂದಲಕ್ಕೆ ಜಿಡಗಾ-ಮುಗಳಖೇಡ ಶ್ರೀಗಳ ನೇತೃತ್ವದಲ್ಲಿ ಪರಿಹಾರ!

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಯತ್ನಾಳರ ಮಹತ್ವದ ಹೇಳಿಕೆ: ಲಚ್ಯಾಣ ಮಠದ ಗೊಂದಲಕ್ಕೆ ಜಿಡಗಾ-ಮುಗಳಖೇಡ ಶ್ರೀಗಳ ನೇತೃತ್ವದಲ್ಲಿ ಪರಿಹಾರ!

      ಯತ್ನಾಳರ ಮಹತ್ವದ ಹೇಳಿಕೆ: ಲಚ್ಯಾಣ ಮಠದ ಗೊಂದಲಕ್ಕೆ ಜಿಡಗಾ-ಮುಗಳಖೇಡ ಶ್ರೀಗಳ ನೇತೃತ್ವದಲ್ಲಿ ಪರಿಹಾರ!

      August 10, 2026
      ಲಚ್ಯಾಣ ಶ್ರೀ ಸಿದ್ದಲಿಂಗೇಶ್ವರ ಕಮರಿ ಮಠದಲ್ಲಿ ಇಂದು ಲಕ್ಷ ಬಿಲ್ವಾರ್ಚನೆ ಮಹೋತ್ಸವ | ಸಹಸ್ರಾರು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

      ಲಚ್ಯಾಣ ಶ್ರೀ ಸಿದ್ದಲಿಂಗೇಶ್ವರ ಕಮರಿ ಮಠದಲ್ಲಿ ಇಂದು ಲಕ್ಷ ಬಿಲ್ವಾರ್ಚನೆ ಮಹೋತ್ಸವ | ಸಹಸ್ರಾರು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

      August 9, 2026
      ಮಳೆ ಆಗಿಲ್ಲ, ವರದಿಯಲ್ಲಿ ಮಾತ್ರ ಮಳೆ..! | ನೈಜ ಮಳೆ ಪ್ರಮಾಣ ಪರಿಶೀಲನೆಗೆ ಬಾಳು ಮುಳಜಿ ಆಗ್ರಹ

      ಮಳೆ ಆಗಿಲ್ಲ, ವರದಿಯಲ್ಲಿ ಮಾತ್ರ ಮಳೆ..! | ನೈಜ ಮಳೆ ಪ್ರಮಾಣ ಪರಿಶೀಲನೆಗೆ ಬಾಳು ಮುಳಜಿ ಆಗ್ರಹ

      August 9, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.