ಭೀಮಾ ಏತನೀರಾವರಿ ಯೋಜನೆ ವಿದ್ಯುತ್ ಕಡಿತಕ್ಕೆ ರೈತ ಸಂಘಗಳ ತೀವ್ರ ವಿರೋಧ
ಅಫಜಲಪುರ: 26-03-2026 ರಂದು ಮಾನ್ಯ ಕಾರ್ಯಪಾಲಕ ಅಭಿಯಂತರರು ಭೀಮಾ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಹೊರಡಿಸಿದ ವಿದ್ಯುತ್ ಕಡಿತ ಆದೇಶಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯೆ ಹೋರಾಟ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ ಎಂದು ರೈತ ಹೋರಾಟಗಾರ ಶ್ರೀಮಂತ ಬಿರಾದಾರ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸುಮಾರು 25 ವರ್ಷಗಳಿಂದ ಭೀಮಾ ಏತನೀರಾವರಿ ಯೋಜನೆ ಜಾರಿಯಲ್ಲಿದ್ದರೂ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಯದೇ ರೈತರು ನಿರಂತರವಾಗಿ ವಂಚಿತರಾಗುತ್ತಿದ್ದಾರೆ ಇತ್ತ ಕಾಲುವಿಗೆ ನೀರಿಲ್ಲದೆ ಕಾಲುವೆಯಿಂದ ನೀರನ್ನು ಬಳಕೆ ಮಾಡುವ ರೈತರಿಗೆ ಅನ್ಯಾಯವಾಗುತ್ತಿದೆ ಸೋನ್ನ ಬ್ಯಾರೇಜ್ ಹಿನ್ನಿರಿನಿಂದ ನೀರನ್ನ ಉಪಯೋಗಿಸಿ ಕಬ್ಬು ಬೆಳೆಯುವ ರೈತರಿಗೆ ವಿದ್ಯುತ್ ಕಡಿತ ಮಾಡಿ ಅತ್ತ ಆ ರೈತರಿಗೂ ಕೂಡ ಅನ್ಯಾಯವಾಗುತ್ತಿದೆ ಇದು ಅಧಿಕಾರಿಗಳ ಒಂದು ಬೇಜವಾಬ್ದಾರಿ ಇಂದಾಗಿ ಈ ತಾಲೂಕಿನಲ್ಲಿ ರೈತರು ಅನ್ಯಾಯ ಕೊಳಗಾಗುತ್ತಿದ್ದಾರೆ ಎಂದು ಆರೋಪಿಸಿದರು.
ಯೋಜನೆಗೆ ಬಂದ ಅನುದಾನ ಗುತ್ತಿಗೆದಾರರ ಪಾಲಾಗಿದ್ದು, ವೈಜ್ಞಾನಿಕ ರೀತಿಯಲ್ಲಿ ನೀರು ಸಂಗ್ರಹಿಸುವ ಕಾರ್ಯ ನಡೆದಿದೆ ಎಂಬುದು ಕಾಣುತ್ತಿಲ್ಲ ಎಂದರು.
ಮಳೆಗಾಲದಲ್ಲಿ 3.16 ಟಿಎಂಸಿ ಮಟ್ಟದ ನೀರು ಸಂಗ್ರಹಿಸಬೇಕಾದರೂ ಆ ಪ್ರಮಾಣದಲ್ಲಿ ಸಂಗ್ರಹವಾಗುತ್ತಿಲ್ಲ. ನದಿಯಲ್ಲಿ ನೀರು ಹರಿದು ಹೋದ ಬಳಿಕ ಸಂಗ್ರಹಿಸಲು ಪ್ರಯತ್ನಿಸುವುದರಿಂದ ಗರಿಷ್ಠ ಪ್ರಮಾಣದ ನೀರನ್ನು ತಡೆಹಿಡಿಯಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ, ಹಿನ್ನೀರಿನ ಆಧಾರದಲ್ಲಿ ರೈತರು ಬೆಳೆದ ಬೆಳೆಗಳಿಗೆ ನೀರು ಬಿಡಬೇಕಾದ ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡುವುದರಿಂದ ಲಕ್ಷಾನುಗಟ್ಟಲೆ ಕಬ್ಬು ಬೆಳೆಯುವುದಕ್ಕಾಗಿ ಹಾಕಿದ ಲಾಗೋಡಿಯನ್ನ ಬರದೆ ರೈತ ಬೀದಿಗೆ ಬರುವಂತಾಗುತ್ತದೆ ರೈತರು ಹಾಕಿದ ಖರ್ಚು ವೆಚ್ಚವನ್ನು ಯಾರು ಬರಿಸುವರು ಇದಕ್ಕೆ ತಾಲೂಕಿನ ಬೇಜವಾಬ್ದಾರಿ ಅಧಿಕಾರಿಗಳು ಕಾರಣ
ಈ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದರೆ ರೈತ ಸಂಘಟನೆಗಳು ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸಲು ಸಜ್ಜಾಗಿವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಗುರು ಚಾಂದಕವಟೆ, ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದ ಸಂಚಾಲಕ ಶಾಂತಪ್ಪ ಅಂಜುಟಗಿ, ರಮೇಶ ಪಾಟೀಲ, ಭೀಮರಾವ ಗೌರ, ನೂರ ಅಹ್ಮದ ಭಾಗವಾನ, ಶಿವ ಪ್ರಸಾದ್ ನೂಲಾ, ಚಂದ್ರಶೇಖರ ಕರಜಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



















