ಸಮೀಕ್ಷೆಯಲ್ಲಿ “ತಳವಾರ” ಮುಖ್ಯ ಜಾತಿಯಾಗಿ ಎಂದು ಬರೆಯಿಸಿ : ಮಾಜಿ ಶಾಸಕ ಶರಣಪ್ಪ ಸುಣಗಾರ
ಇಂಡಿ : ರಾಜ್ಯ ಸರಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಳವಾರ ಸಮಾಜದ ಜನಾಂಗದವರು ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ ಅನುಬಂಧ ‘ಸಿ’ ಕ್ರಮ ಸಂಖ್ಯೆ 38 ರಲ್ಲಿರುವ ಕೊಡ್ ಸಂಖ್ಯೆ 13 ರಲ್ಲಿ ಬರುವಂತೆ ಮುಖ್ಯ ಜಾತಿ ತಳವಾರ ಎಂದು ಕಡ್ಡಾಯವಾಗಿ ಬರೆಯಲು ತಳವಾರ ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಶರಣಪ್ಪ ಸುಣಗಾರ ತಿಳಿಸಿದರು.
ಶನಿವಾರ ಪಟ್ಟಣದ ಖಾಸಗಿ ಹೊಟೆಲ್ ಸಭಾಭವನದಲಿ ತಳವಾರ ಸಮಾಜ ಸೇವಾ ಸಮಿತಿ ಆಶ್ರಯದಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಪೂರ್ವಭಾವಿ ಸಭೆಯಲ್ಲಿ ನೇತೃತ್ವ ವಹಿಸಿ ಮಾತನಾಡಿದರು.
ನಮ್ಮ ಸಮಾಜಕ್ಕೆ ಇವತ್ತಿಗೂ ರಾಜ್ಯದಲ್ಲಿ ಯಾವುದೇ ಕ್ಷೇತ್ರ ಅಥವಾ ರಂಗದಲ್ಲಾಗಲಿ ದೊರೆತ ಸಹಾಯ ಸಹಕಾರದ ಬಗ್ಗೆ ಗೊತ್ತಿದೆ. ಇಂದು ರಾಜ್ಯ ರಾಜಕೀಯ ಬೆಳವಣಿಗೆ ಮತ್ತು ಜಾಗತಿಕ ಬೆಳವಣಿಗೆಯಲ್ಲಿ ಎಲ್ಲಾ ಸಮುದಾಯಗಳು ಬದಲಾವಣೆ ಮತ್ತು ಪರಿವರ್ತನೆಯಾದಂತೆ ನಮ್ಮ ಸಮಾಜ ಬದಲಾವಣೆಯಾಗುವ ಅವಶ್ಯಕತೆ ಇದೆ.
ನಮ್ಮ ಸಮಾಜಕ್ಕೆ ಇತಿಹಾಸವಿದೆ. ಇತಿಹಾಸ ಗೊತ್ತು ಇರದ ವ್ಯಕ್ತಿ ಇತಿಹಾಸ ಸೃಷ್ಟಿಸಲಾರ. ಆ ಕಾರಣಕ್ಕಾಗಿ ನಮ್ಮ ಸಮಾಜಕ್ಕೆ ಈ ಸಮೀಕ್ಷೆ ಒಂದು ಇತಿಹಾಸ ಪುಸ್ತಕವಾಗಿ ಮಾರ್ಪಾಡುವಾಗಬೇಕು. ಹಾಗಾಗಿ ಇದೆ. ಸೆ-22 ರಂದು ನಡೆಯುವ ಸಮೀಕ್ಷೆಯಲ್ಲಿ ಪರಿಶಿಷ್ಟ ಪಂಗಡ ಪಟ್ಟಿ ಅನುಬಂಧ ‘ಸಿ’ ಕಾಲಂ ಸಂಖ್ಯೆ 9 ಕ್ರಮ ಸಂಖ್ಯೆ 38.13 ರಲ್ಲಿ ಮುಖ್ಯ ಜಾತಿ ತಳವಾರ ಎಂದು, ಕಾಲಂ ಸಂಖ್ಯೆ 10 ಉಪಜಾತಿ ಅನ್ವಯವಾಗುವುದಿಲ್ಲೆಂದು, ಕಾಲಂ ಸಂಖ್ಯೆ 11 ರಲ್ಲಿ ಒಂದೆ ವೇಳೆ ತಂತ್ರಾಂಶದಲ್ಲಿ ಸಮಾನಾರ್ಥಕ ಪದಗಳು ನಾಯಕ/ನಾಯಕ್ಡ ಎಂದು ಪಡೆಯುತ್ತಿದ್ದರೆ ಕಡ್ಡಾಯವಾಗಿ ನಮೂದಿಸಬೇಕು. ಕಾಲಂ ಸಂಖ್ಯೆ 12 ಪ.ಪಂ ಜಾತಿ ಪ್ರಮಾಣ ಪತ್ರ ಪಡೆದಿದ್ದು ಹೌದು ಎಂದು, ಕಾಲಂ ಸಂಖ್ಯೆ 30 ಕುಲಕಸಬು ತಳವಾರ (64) ಎಂದು ಬರೆಯಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿರುವ ತಾಲೂಕು ತಳವಾರ ಸೇವಾ ಸಮಿತಿ ಅಧ್ಯಕ್ಷ ಧರ್ಮರಾಜ ವಾಲಿಕಾರ ಪ್ರಾಸ್ಥವಿಕವಾಗಿ ಮಾತಾನಾಡಿದ ಅವರು, ನಮ್ಮ ಸಮಾಜ ಸುಮಾರು ವರ್ಷಗಳಿಂದ ಅನೇಕ ಕಾರಣಗಳಿಂದ ಅತ್ಯಂತ ಹೀನಾಯ ಪರಿಸ್ಥಿತಿ ಅನುಭವಿಸಿದ್ದೆವೆ. ಆದರೆ ಈಗ ಸಿಕ್ಕ ಸದೈವದ ಅವಕಾಶದಲ್ಲಿ ಸಮಾಜದ ಪ್ರತಿಯೊಬ್ಬರೂ ಪಾಲ್ಗೊಂಡು ಸಮೀಕ್ಷೆ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಇನ್ನೂ ಸಮಾಜದ ಜಿಲ್ಲಾ ಅಧ್ಯಕ್ಷ ಪ್ರಕಾಶ ಸೊನ್ನದ, ಉಪಾಧ್ಯಕ್ಷ ಅನೀಲ ಜಮಾದಾರ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ ಇದೊಂದು ಸುವರ್ಣ ಅವಕಾಶ. ಈ ಹಿಂದಿನ ಸಮೀಕ್ಷೆಯಲ್ಲಿ ನಡೆದ ತಪ್ಪುಗಳು ಈ ಸಮೀಕ್ಷೆಯಲ್ಲಿ ನಡೆಯದಂತೆ ಜಾಗರೂಕತೆಯಿಂದ ಪಾಲ್ಗೊಳ್ಳಬೇಕು.ಈ ಸಮೀಕ್ಷೆಯಲ್ಲಿ ತಳವಾರ ಸಮಾಜದ ಜನಾಂಗದವರು ಶಾಲೆಯಲ್ಲಿ ಬರೆದಿರುವ ಜಾತಿಗಳ ಬಗ್ಗೆ ಮಹತ್ವ ನೀಡದೆ, ಸಾರ್ವಜನಿಕ ಬದುಕಿನಲ್ಲಿ ನಮ್ಮ ನ್ನು ಹೇಗೆ ತಳವಾರ ಎಂದು ಕರೆಯುತ್ತಾರೆಯೋ..! ಹಾಗೆ ನಾವು ಮುಖ್ಯ ಜಾತಿ ತಳವಾರ ಎಂದು ನಮೂದಿಸಿಬೇಕು. ಈ ಸಮೀಕ್ಷೆಯಿಂದ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯ ಹಾಗೂ ಸರ್ವಕ್ಷೇತ್ರದಲ್ಲೂ ಸಮುದಾಯ ಏಳಿಗೆ ಕಾಣಲು ಸಾಧ್ಯ.ಈ ಸಮೀಕ್ಷೆಯಿಂದ ತಳವಾರ ಸಮಾಜಕ್ಕೆ ಒಂದು ಗ್ರಂಥವಾಗಿ ವರದಾನವಾಗುತ್ತೆದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುರೇಶಗೌಡ ಪಾಟೀಲ, ರಾಜು ಮೆಟಗಾರ, ಅಣ್ಣಪ್ಪ ತಳವಾರ, ಹುಚ್ಚಪ್ಪ ತಳವಾರ , ಎಸ್ ಜೆ ವಾಲಿಕಾರ, ಶ್ರೀಮಂತ ತಳವಾರ, ರವಿ ವಗ್ಗೆ, ವಿಶ್ವನಾಥ ಕವಲಗಿ, ಸೋಮು ಜಮಾದಾರ, ಹಣಮಂತ ಖಡೆಖಡೆ, ಸಣ್ಣಪ್ಪ ತಳವಾರ, ಸಾಹೇಬಗೌಡ ಬಿರಾದಾರ, ಎಸ್ ಕೆ ಲಿಂಗದಳ್ಳಿ, ಅಂಬಣ್ಣ ಸುಣಗಾರ, ಪರಮಾನಂದ ಕೋಳಿ, ಚಂದ್ರಕಾಂತ ಕೋಳಿ, ಎಸ್ ಎಮ್ ಕೋಳಿ, ಸರಕಾರಿ ನೌಕರ ಸಂಘದ ತಾಲೂಕು ಮಾಜಿ ಅಧ್ಯಕ್ಷರು ಎಸ್ ಆರ್ ಪಾಟೀಲ ಸೇರಿದಂತೆ ಅನೇಕರು
ಉಪಸ್ಥಿತರಿದ್ದರು. ನಿರೂಪಣೆ ಆನಂದ ವಾಲಿಕಾರ ನೆರಿವೆರಿಸಿದರು.



















