ನಗರದಲ್ಲಿ ಡಿಸೆಂಬರ್ 7 ರಂದು ವೃಕ್ಷಥಾನ್ ಹೆರಿಟೇಜ್ ರನ್-
ವಿಜಯಪುರ: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025 ನಲ್ಲಿ ರಾಜ್ಯದ ನಾನಾ ಭಾಗಗಳ ಜನರು ಕುಟುಂಬ ಸಮೇತ ಪಾಲ್ಗೋಳ್ಳಲು ಉತ್ಸುಕರಾಗಿದ್ದಾರೆ ಎಂದು ಡಾ. ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.
ನಗರದಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್(ವಿಸಿಜಿ) ನಡೆಸಿದ ಹೆರಿಟೇಜ್ ರನ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿ 21 ಕಿ. ಮೀ. ಓಟದಲ್ಲಿ ಕಳೆದ ಬಾರಿಗಿಂತಲೂ ಅತೀ ಹೆಚ್ಚು ಜನ ಪಾಲ್ಗೋಳ್ಳುವ ನಿರೀಕ್ಷೆ ಇದೆ. ನಾನಾ ಇಲಾಖೆಗಳ ಅಧಿಕಾರಿಗಳು ತಮ್ಮ ಸಿಬ್ಬಂದಿ ಮತ್ತು ಕುಟುಂಬ ಸಮೇತ ಪಾಲ್ಗೋಳ್ಳಲು ಹೆಸರು ನೋಂದಾಯಿಸಿದ್ದಾರೆ. ಬೇರೆ ರಾಜ್ಯಗಳಿಂದಲೂ ಕ್ರೀಡಾಪಟುಗಳು ಪಾಲ್ಗೋಳ್ಳಲಿದ್ದಾರೆ. ಈಗಾಗಲೇ ಸುಮಾರು ಒಂದು ಸಾವಿರ ಜನರು 5 ಕಿ. ಮೀ., 10 ಕಿ. ಮೀ ಹಾಗೂ 21 ಕಿ. ಮೀ. ಓಟದಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ. ಈ ಸಲದ ಓಟದಲ್ಲಿ ಕ್ರೀಡಾಪಟುಗಳು ಪ್ರತಿಯೊಂದು ವಿಭಾಗದ ಓಟಗಳಿಗೆ ಬೇರೆ ಬೇರೆ ಬಣ್ಮದ ಟಿ- ಶರ್ಟ್ ಧರಿಸಲಿದ್ದಾರೆ. ಸ್ವಯಂ ಸೇವಕರಿಗೂ ಪ್ರತ್ಯೇಕ ಬಣ್ಣದ ಟಿ- ಶರ್ಟ್ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯ ಮತ್ತು ಉಪನ್ಯಾಸಕ ಸಂದೀಪ ಮಡಗೊಂಡ ನವೆಂಬರ್ 22 ರಂದು ಚಿಕ್ಕಮಗಳೂರು ಜಿಲ್ಲೆಯ ಮಳಂದೂರಿನಲ್ಲಿ ನಡೆಯಲಿರುವ ಮತ್ತು ಕಠಿಣವಾಗಿರುವ ಮಲೆನಾಡ ಅಲ್ಟ್ರಾ ರನ್ 100 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳುತ್ತಿದ್ದಾರೆ. ಅಲ್ಲದೇ, ವಿಸಿಜಿ ಗ್ರುಪ್ ಸದಸ್ಯರಾದ ರಘು ಸಾಲೋಟಗಿ ಮತ್ತು ಡಾ. ರಾಜು ಯಲಗೊಂಡ, ಶಿವು ಕುಂಬಾರ 50 ಕಿ. ಮೀ ಹಾಗೂ ವೀರೇಂದ್ರ ಗುಚ್ಚೆಟ್ಟಿ ಮತ್ತು ನಂದೀಶ ಹುಂಡೆಕಾರ 30 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳುತ್ತಿರುವುದು ಓಟಗಾರರಿಗೆ ಸ್ಪೂರ್ತಿ ನೀಡಿದೆ ಎಂದು ಅವರು ತಿಳಿಸಿದರು.
ಗುಂಪುಗಳಲ್ಲಿ ಹೆಸರು ನೋಂದಾಯಿಸುವ ತಂಡಗಳಿಗೆ ನೋಂದಣಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಇದೇ ವೇಳೆ ಸಂದೀಪ ಮಡಗೊಂಡ ಅವರನ್ನು ವಿಸಿಜಿ ಗ್ರುಪ್ ಸದಸ್ಯರು ಸನ್ಮಾನಿಸಿ ಗೌರವಿಸಿದರು.
9ಈ ಸಂದರ್ಭದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಸಂಚಾಲಕ ಡಾ. ಮುರುಗೇಶ ಪಟ್ಟಣಶೆಟ್ಟಿ, ಬಸನಗೌಡ ಪಾಟೀಲ, ಸೈಕ್ಲಿಂಗ್ ಗ್ರುಪ್ ಸದಸ್ಯರಾದ ಶಿವನಗೌಡ ಪಾಟೀಲ, ಅಪ್ಪು ಭೈರಗೊಂಡ, ಸಂತೋಷ ಅವರಸಂಗ, ವೀರೇಂದ್ರ ಗುಚ್ಚೆಟ್ಟಿ, ಸಮೀರ ಬಳಿಗಾರ, ಡಾ. ಪ್ರವೀಣ ಚೌರ, ಸೋಮಶೇಖರ ಸ್ವಾಮಿ, ಕಾರ್ಪೋರೇಟರ್ ಅಶ್ಪಾಕ್ ಮನಗೂಳಿ ಮುಂತಾದವರು ಉಪಸ್ಥಿತರಿದ್ದರು.



















