ಇಂಡಿ : ಕ್ಷೇತ್ರದ ಅನೇಕ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿರುವ ಹಾಗೂ ರಾಜ್ಯದ ಅನೇಕ ಸಮಸ್ಯೆಗಳ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ ಚುಕ್ಕೆ ಗುರುತಿಲ್ಲದ ಪ್ರಶ್ನೆ ಮೂಲಕ ಅಧಿವೇಶನಲ್ಲಿ ಧ್ವನಿ ಮೊಳಗಿಸಿದರು.
ತೋಗಾರಿಕೆ ಇಲಾಖೆ ಅಡಿಯಲ್ಲಿ ರಾಜ್ಯದಲ್ಲಿ ಭೌಗೋಳಿಕ ಜಿಯೋಗ್ರಫಿಕಲ್ ಐಡಿಂಟಿಫಿಕೇಷನ್ ಗುರುತು ಅನುಸರಿಸುವ ಮಾನದಂಡಗಳೇನು .? ರಾಜ್ಯದಲ್ಲಿ ಈಗಾಗಲೇ ಒಟ್ಟು 13 ತೋಟಗಾರಿಕೆ ಉತ್ಪನ್ನಗಳಿಗೆ
ಬೌಗೋಳಿಕ ಗುರುತು ಮಾನ್ಯತೆ ನೀಡಲಾಗಿದೆ. ಇನ್ನೂ ರಾಜ್ಯದಲ್ಲಿ 23,119 ಹೆಕ್ಟೇರ್ ಪ್ರದೇಶದ
ಲಿಂಬೆ ಬೆಳೆಯಲಾಗುತ್ತಿದೆ. ಲಿಂಬೆಗೂ ಸಹ ಮಾರ್ಚ್ 31 ರಂದು ಜಿಐ ದೊರೆತ್ತಿದೆ ಎಂದು ತಿಳಿಸಿದರು. ಇನ್ನೂ ಶಿವಮೊಗ್ಗ ಕಲ್ಬುರ್ಗಿ, ವಿಜಯಪುರ ಮಂಜೂರಾತಿ ದೊರಕಿದ್ದು, ಸದರಿ ವಿಮಾನ ನಿಲ್ದಾದಿಂದ ವಿಮಾನ ಹಾರಾಟ ಬಗ್ಗೆ ಪ್ರಶ್ನೆ ಮಾಡಿದರು. ವಿಜಯಪುರ ವಿಮಾನ ನಿಲ್ದಾಣ ಬಹುತೇಕ ಶೇ 78.12 ರಷ್ಟು ಮುಗಿದಿದ್ದು ಬಾಕಿ ಕಾಮಗಾರಿಗಳು ಅಕ್ಟೋಬರ್ 2023 ರಲ್ಲಿ ಪೂರ್ಣಗೊಳ್ಳುವ ನೀರಿಕ್ಷೆ ಇದೆ ಸಂಬಂಧಿಸಿದ ಸಚಿವರು ಉತ್ತರಿಸಿದ್ದಾರೆ.
ಇನ್ನೂ ತಾಲ್ಲೂಕಿನ ಬೂದಿಹಾಳ ಗ್ರಾಮದಲ್ಲಿ ಕೈಗಾರಿಕಾ ವಸಾಹತು ಪಡಿಸಲು ಅನುದಾನ & ಸರಕಾರ ಕೈಗೊಂಡಿರುವ ಬಗ್ಗೆ ಪ್ರಶ್ನಿಸಲಾಗಿದ್ದು, ಜಮೀನಿನ ಹದ್ದು ಬಸ್ತು ಗುತುತಿಸಿ ನಿಗಮಕ್ಕೆ ಹಸ್ತಾಂತರಿಸುವುದು ಬಾಕಿ ಇದ್ದು, ತದನಂತರ ಕೈಗಾರಿಕಾ ವಸಾಹತು ಸ್ಥಾಪಿಸಲು ವಿವರವಾದ ಯೋಜನಾ ವರದಿಯನ್ನು ನಿಗಮದಲ್ಲಿನ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಮುಂದಿನ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.
ಅದಲ್ಲದೇ ತಾಲೂಕು ಕ್ರೀಡಾಂಗಣದ ಮೂಲಭೂತ ಸೌಕರ್ಯ ಇಲ್ಲದಿರುವುದು, ಪ್ರಾಥಮಿಕ & ಪ್ರೌಢ ಶಾಲೆಯಲ್ಲಿ ಕೊಠಿಡಿಗಳು ಸೇರಿದಂತೆ ಮೂಲ ಸೌಕರ್ಯಗಳು ಇಲ್ಲದಿರುವುದು. ತಾಲ್ಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ಹಾಗೂ ಸಿಬ್ಬಂದಿ ವರ್ಗದ ಮಾಹಿತಿ ಹಾಗೂ ಅವರಿಗೆ ಒದಗಿಸಿರುವ ವಸತಿ ವ್ಯವಸ್ಥೆಯ ಸಮಸ್ಯೆಗಳ ಕುರಿತು ಸದನದಲ್ಲಿ ಬೆಳಕು ಚೆಲ್ಲಿದರು.
ಇದಕ್ಕೆ ಸಂಬಂಧಿಸಿದ ಸಚಿವರು ಉತ್ತರಿಸಿದ ಅವರು ಸಕಾರಾತ್ಮಕ ಉತ್ತರ ನೀಡಿದ್ದಾರೆ. ಅತೀ ಬೆಗ ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.