ರಾಯಚೂರು : ಕೆಲಸ ಮಾಡುತ್ತಿದ್ದ ಚಿನ್ನದ ಅಂಗಡಿಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಜೊತೆ ಖಧೀಮರು ಎಸ್ಕೇಪ್ ಆಗಿದ್ದರು.
ರಾಯಚೂರಿನ ನೇತಾಜಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬಂಗಾರದ ಅಂಗಡಿಯಲ್ಲಿ ಬಂಗಾರದ ಕರಿಮಣಿ ತಾಳಿ ಸರ, ಒಲೆಗಳು, ಉಂಗುರಗಳು, ನೆಕೆಲ್ಸ್ಗಳು ಕಳ್ಳತನ ಮಾಡಿರುವ ಕುರಿತಂತೆ ಪೊಲೀಸ್ ಠಾಣೆಗೆ ದೂರು ನೀಡಿಲಾಗಿತ್ತು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ನಿಖಿಲ್, ಲಕ್ಷ್ಮಿಕಾಂತ ಎಂಬ ಆರೋಪಿಗಳನ್ನು ಬಂಧಿಸಿ, 11 ಲಕ್ಷ 86 ಸಾವಿರ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಬಂಧಿತ ನಿಖಿಲ್ ಹಾಗೂ ಲಕ್ಷ್ಮಿಕಾಂತ ಇಬ್ಬರು ದೋತ್ರಬಂಡಿ ಅಶೋಕ ಎನ್ನುವರ ಅಂಗಡಿಗೆ ಕೆಲಸಕ್ಕೆ ಸೇರಿಕೊಂಡಿದ್ದರು.
ಹಲವು ದಿನಗಳಿಂದ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುತ್ತಲೆ ಚಿನ್ನಾಭರಣವನ್ನು ಕಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡುವ ವೇಳೆ ಅಂಗಡಿಯಲ್ಲಿ ಸಿಸಿ ಕ್ಯಾಮರ್ ವನ್ನು ಬಂದ್ ಮಾಡುತ್ತಿದ್ದರು. ಆದರೆ ಸಾಮಾನುಗಳು ಕಡಿಮೆಯಾಗುತ್ತಿರುವುದು ಗಮನಿಸಿ ಒಂದು ದಿನ ಸಿಸಿ ಕ್ಯಾಮರ್ ಆನ್ ಮಾಡಿದ್ದಾಗ ಖದೀಮರು ಕೃತ್ಯವೆಸಗಿರುವ ದೃಶ್ಯ ಸೆರೆ ಸಿಕ್ಕಿದೆ. 250 ಗ್ರಾಂ. ವರೆಗೆ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದು, ಇದೀಗ 205 ಗ್ರಾಂ. ಬಂಗಾರದ ಆಭರಣಗಳನ್ನು ನೇತಾಜಿ ನಗರದ ಠಾಣೆ ಪೊಲೀಸ್ ರು ವಶಕ್ಕೆ ಪಡೆಯುವಲ್ಲಿ ಯಶ್ವಸಿಯಾಗಿದ್ದಾರೆ.
ಇನ್ನೂ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಆಂಧ್ರ ಮೂಲದ ಪ್ರಕಾಶಂ ಜಿಲ್ಲೆಯ ಅರ್ದಮೀಡುನ ನೇಹೆಮೀಯಾ ಬರ್ನಾಬಸ್ ಆರೋಪಿಯನ್ನು ಸೆರೆ ಹಿಡಿದು, ಎರಡುವರೆಗೆ ತೊಲೆ ಬಂಗಾರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎರಡೂ ಠಾಣೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ಕಾರ್ಯಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.