ಲಿಂಗಸೂಗೂರು: ಪ್ರತಿವರ್ಷದಂತೆ ಈ ವರ್ಷವು ಕೂಡ ಈಚನಾಳ ಗ್ರಾಮ ದೇವತೆ ಗದ್ದೆಮ್ಮ ದೇವಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ರಥಕ್ಕೆ ಈಚನಾಳ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಕೆಸರಟ್ಟಿ, ಮರಗಂಟನಾಳ, ತೊರಲಬೆಂಚಿ, ಯರಗುಂಟಿಯ ಗ್ರಾಮಗಳಿಂದ ರಥಕ್ಕೆ ಕುಂಭ ಕಳಸ ದೊಂದಿಗೆ ಆಗಮಿಸಿದ್ದರು. ರಥೋತ್ಸವ ಸಂದರ್ಭದಲ್ಲಿ ಪಿಎಸೈ ಪ್ರಕಾಶ್ ರೆಡ್ಡಿ ಡಂಬಳರವರ ನೇತೃತ್ವದಲ್ಲಿ ಸೂಕ್ತ ಪೋಲೀಸ್ ಭದ್ರತೆ ಒದಗಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆದಪ್ಪ ಮೇಟಿ, ಮಾಜಿ ತಾ.ಬ್ಲಾಕ್ ಅಧ್ಯಕ್ಷರಾದ ಶರಣಪ್ಪ ಮೇಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರ್ ವಜ್ಜಲ್, ವೆಂಕಟೇಶ್ ಎನ್ ರಾಠೋಡ್, ಗದ್ದೆಮ್ಮ ದೇವಿ ಸಮಿತಿ ಅಧ್ಯಕ್ಷರಾದ ಸೋಮಪ್ಪ ಗುಜ್ಜಲ್, ನಿವೃತ್ತ ಕಂಟ್ರೋಲರ್ ಬಸನಗೌಡ ಪಾಟೀಲ್, ಯಮನಪ್ಪ ಕಟ್ಟಿಮನಿ, ಹನುಮಂತ ದ್ಯಾಪುರಿ, ಸಣ್ಣಗದ್ದೆಪ್ಪ ಚಿಗರಿ, ಗದ್ದೆಪ್ಪ ಕನ್ನಾಳ, ಗದ್ದೇಪ್ಪ ಡೊಳ್ಳಿನ, ಅಮರಪ್ಪ ಕುಂಬಾರ, ಇನ್ನಿತರರಿದ್ದರು.