ಲಿಂಗಸೂಗೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಿಂಗಲ್ ಫೇಸ್ ಮತ್ತು ಪರ್ಸಂಟೆಜ್ ಸರ್ಕಾರವಾಗಿದ್ದು ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ನಾರಾಯಣಪುರ ರಸ್ತೆಯಲ್ಲಿ ಇರುವ ಶ್ರೀ ಮಹಾಂತೇಶ್ವರ ಸ್ವಾಮಿಗಳ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಮುದಗಲ್ ಪಟ್ಟಣದ ಮೂಲಕ ಹೊಗುವ ಸಂದರ್ಭದಲ್ಲಿ ಯಮನೂರ ನದಾಫ್ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ದುಡ್ಡಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವದು, ಕೋಟ್ಯಂತರ ರೂಪಾಯಿ ಸರ್ಕಾರ ಹಣ ಕೊಳ್ಳೆ ಹೊಡೆಯುವದು, ಧರ್ಮ ಧರ್ಮಗಳಿಗೆ ಭಿನ್ನತೆ ಉಂಟು ಮಾಡುವ ಕೆಲಸವಾಗಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಸಮಾನತೆ, ಜಾತ್ಯಾತೀತತೆ, ಭಾವೈಕ್ಯತೆ ಎನ್ನುವುದು ಮರೆಮಾಚಿದೆ ಎಂದು ಹೇಳಿದರು.
ನಂತರ ಲಿಂಗಸುಗೂರು ಜೆಡಿಎಸ್ ಪಕ್ಷದಿಂದ ಪುರಸಭೆಯ ಅಧ್ಯಕ್ಷೆ ಸುನಿತಾ ಕೆಂಭಾವಿ ಬಿಜೆಪಿ ಸೇರಿದ್ದನ್ನು ಮಾದ್ಯಮದವರು ಪ್ರಶ್ನೆಗೆ ಉತ್ತರಿಸಿದ ಅವರು ಸಾರ ಸಜ್ಜನರ ಸಂಗ ದೂರ ದುರ್ಜನರ ಸಂಗ ಲೇಸಯ್ಯ ಮತ್ತು ನಮ್ಮಲ್ಲಿ ಐವತ್ತು ಹಸು ಇದ್ದರೆ ನಾವು ಒಂದು ಹೊರಿ ಕಟ್ಟುತ್ತವೆ. ಹಸುಗಳು ಹೊಗವದು ಸಹಜ ಹೊಗಲಿ ಗಟ್ಟಿಯಾದ ಹೊರಿ ಉಳಿಯುತ್ತವೆ ಎಂದು ಮಾತಿನಲ್ಲಿ ಕುಟುಕಿದರು. ಇನ್ನೂ ಪಕ್ಷಕ್ಕೆ ಹೊಸಬರು ಯಾರು ಬರುತ್ತಾರೆ ನೋಡ್ತಾಯಿರಿ. ಜೆ ಎಚ್ ಪಟೇಲ್ ಅವರ ಮಗ, ವಿರೇಂದ್ರ ಪಾಟೀಲ್ ಅವರ ಮಗನನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆದಿದೆ. ಕಾಂಗ್ರೆಸ್ ನ ಸಾಫ್ಟ್ ಹಿಂದುತ್ವ ನಡೆ ಅನುಸರಿಸುತ್ತಿದ್ದಾರೆ. ಬಿಜೆಪಿಯವರ ಸರ್ಕಾರ ಮಂಗಳಮುಖಿ ಸರ್ಕಾರವಾಗಿದೆ. ಆ ಕಡೆನು ಇಲ್ಲಾ ಇ ಕಡೆನು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸಿದ್ದು ವಾಯ್ ಬಂಡಿ, ಅಮೀರ್ ಬೇಗ್ ಉಸ್ತಾದ್, ಬಸವರಾಜ ಮಾಕಾಪೂರು, ಮಹಿಬೂಬ ಕಡ್ಡಿಪುಡಿ ಕರಿಯಪ್ಪ ಯಾದವ್, ದುರಗಪ್ಪ ಕಟ್ಟಿಮನಿ, ಇಮ್ತಿಯಾಜ್ ಪಾಷಾ, ರಾಘವೇಂದ್ರ ಮಸ್ಕಿ, ಯಮನೂರು ನದಾಫ್, ಅರುಣ ಕುಮಾರ ಯರದಿಹಾಳ ಮುಂತಾದ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.