ಸಿಂದಗಿ : ಶಿಕ್ಷಕ ಬಸವರಾಜ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಂದಗಿ ಬಿಇಓ ಹಾಗೂ ಮೂವರು ಶಿಕ್ಷಕರು ಅಮಾನತು ಸೋಮವಾರ ಅಮಾನತು ಮಾಡಲಾಗಿದೆ.
ವಿಜಯಪುರ ಡಿಡಿಪಿಐ ಉಮೇಶ ಶಿರಹಟ್ಟಿಮಠ ಅವರಿಂದ ಆದೇಶ ಹೊರಡಿಸಿದ್ದಾರೆ. ಶಿಕ್ಷಕರಾದ ಜಿಎನ್ ಪಾಟೀಲ, ಎಸ್ಎಲ್ ಭಜಂತ್ರಿ, ಬಿ ಎಂ ತಳವಾರ, ಸಿಂದಗಿ ಬಿಇಓ ಎಚ್ಎಂ ಹರನಾಳ ಅಮಾನತುಗೊಂಡವರು. ಅಲ್ಲದೇ, ಶಿಕ್ಷಕ ಬಸವರಾಜ್ ನಾಯಕಲ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಹಿನ್ನಲೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ. ಈಗಾಗಲೇ ನಾಲ್ವರು ವಿರುದ್ಧ ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.