ಲಿಂಗಸೂಗೂರು: ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ಅಧ್ಯಕ್ಷರಾದ ಈಶ್ವರ ಎಮ್ ವಜ್ಜಲ್ರವರು ಇಂದು ಈಚನಾಳ ಗ್ರಾಮದಲ್ಲಿ ಜಗನ್ಮಾತೆ ಶ್ರೀ ಗದ್ದೆಮ್ಮದೇವಿ ಜಾತ್ರೆ ಅಂಗವಾಗಿ ನಡೆದ ಕಬ್ಬಡಿ ಪಂದ್ಯಾವಳಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಈಶ್ವರ್ ವಜ್ಜಲ್ ಮಾತನಾಡಿ ಕ್ರೀಡೆ ಮನುಷ್ಯನ ದೇಹವನ್ನು ಸದೃಢಗೊಳಿಸುವಲ್ಲಿ ಸಹಕಾರಿಯಾಗಿದೆ. ಆಟಗಳನ್ನು ಆಡುವದರಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ ಎನ್ನುವ ಮಾತು ಸತ್ಯ. ಆಟಗಾರರ ಉಮ್ಮಸ್ಸನ್ನು ನೋಡಿದರೆ ನನಗೂ ಬಾಲ್ಯದ ದಿನಗಳು ನೆನಪಿಗೆ ಬರುತ್ತವೆ ಎಂದರು. ಈ ವೇಳೆ ಗ್ರಾಮದ ಹಿರಿಯರು ಪಕ್ಷದ ಮುಖಂಡರು, ಗ್ರಾಮಸ್ಥರು, ಯುವಕರು, ಆಟಗಾರರು ಉಪಸ್ಥಿತರಿದ್ದರು.