• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿ | ಜಿಲ್ಲೆಗಾಗಿ ವಿಧಾನ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರ ಮಾತು ಏನು..?

    ಇಂಡಿ | ಜಿಲ್ಲೆಗಾಗಿ ವಿಧಾನ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರ ಮಾತು ಏನು..?

    ಸಕ್ಕರೆ ಸೇವನೆ ಕೊಲೆಸ್ಟಾçಲ ಏರಿಕೆ ಕಿಡ್ನಿ ಸಮಸ್ಯೆಗೆ ಕಾರಣ

    ಸಕ್ಕರೆ ಸೇವನೆ ಕೊಲೆಸ್ಟಾçಲ ಏರಿಕೆ ಕಿಡ್ನಿ ಸಮಸ್ಯೆಗೆ ಕಾರಣ

    ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿ -ಸಂತೋಷ ಬಂಡೆ

    ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿ -ಸಂತೋಷ ಬಂಡೆ

    ಇಂಡಿ ನಗರಸಭೆ ೫ . ೪೭ ಲಕ್ಷ ರೂ ಉಳಿತಾಯ ಬಜೆಟ್

    ಇಂಡಿ ನಗರಸಭೆ ೫ . ೪೭ ಲಕ್ಷ ರೂ ಉಳಿತಾಯ ಬಜೆಟ್

    ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್- ಸ್ಪರ್ಧಾತ್ಮಕ ಪರೀಕ್ಷೆ

    ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್- ಸ್ಪರ್ಧಾತ್ಮಕ ಪರೀಕ್ಷೆ

    ಮಾಚ್‌ 14 ರಂದು ವಿಜಯಪುರದಲ್ಲಿ ರಂಭಾಪುರಿ ಶಾಖಾಮಠಕ್ಕೆ ಭೂಮಿ ಪೂಜೆ: ಸೋಮಯ್ಯ ಗಣಾಚಾರಿ ​

    ಮಾಚ್‌ 14 ರಂದು ವಿಜಯಪುರದಲ್ಲಿ ರಂಭಾಪುರಿ ಶಾಖಾಮಠಕ್ಕೆ ಭೂಮಿ ಪೂಜೆ: ಸೋಮಯ್ಯ ಗಣಾಚಾರಿ ​

    ಯೋಜನೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಿಪಂ ಸಿಇಒ‌ ರಿಷಿ ಆನಂದ‌ ಸೂಚನೆ

    ಯೋಜನೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಿಪಂ ಸಿಇಒ‌ ರಿಷಿ ಆನಂದ‌ ಸೂಚನೆ

    ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್ ಕೊರತೆ ಇಲ್ಲ..!

    ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್ ಕೊರತೆ ಇಲ್ಲ..!

    ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ಮಹಿಳೆಯರ ಜವಾಬ್ದಾರಿ ಅತ್ಯಂತ ಪ್ರಮುಖ..!

    ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ಮಹಿಳೆಯರ ಜವಾಬ್ದಾರಿ ಅತ್ಯಂತ ಪ್ರಮುಖ..!

    ಕುಡಿಯುವ ನೀರಿನ ಸಮಸ್ಯೆಗೆ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ತಹಶೀಲ್ದಾರ್ ಕೀರ್ತಿ ಚಾಲಕ್ ಎಚ್ಚರಿಕೆ

    ಕುಡಿಯುವ ನೀರಿನ ಸಮಸ್ಯೆಗೆ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ತಹಶೀಲ್ದಾರ್ ಕೀರ್ತಿ ಚಾಲಕ್ ಎಚ್ಚರಿಕೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಇಂಡಿ | ಜಿಲ್ಲೆಗಾಗಿ ವಿಧಾನ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರ ಮಾತು ಏನು..?

      ಇಂಡಿ | ಜಿಲ್ಲೆಗಾಗಿ ವಿಧಾನ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರ ಮಾತು ಏನು..?

      ಸಕ್ಕರೆ ಸೇವನೆ ಕೊಲೆಸ್ಟಾçಲ ಏರಿಕೆ ಕಿಡ್ನಿ ಸಮಸ್ಯೆಗೆ ಕಾರಣ

      ಸಕ್ಕರೆ ಸೇವನೆ ಕೊಲೆಸ್ಟಾçಲ ಏರಿಕೆ ಕಿಡ್ನಿ ಸಮಸ್ಯೆಗೆ ಕಾರಣ

      ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿ -ಸಂತೋಷ ಬಂಡೆ

      ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿ -ಸಂತೋಷ ಬಂಡೆ

      ಇಂಡಿ ನಗರಸಭೆ ೫ . ೪೭ ಲಕ್ಷ ರೂ ಉಳಿತಾಯ ಬಜೆಟ್

      ಇಂಡಿ ನಗರಸಭೆ ೫ . ೪೭ ಲಕ್ಷ ರೂ ಉಳಿತಾಯ ಬಜೆಟ್

      ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್- ಸ್ಪರ್ಧಾತ್ಮಕ ಪರೀಕ್ಷೆ

      ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್- ಸ್ಪರ್ಧಾತ್ಮಕ ಪರೀಕ್ಷೆ

      ಮಾಚ್‌ 14 ರಂದು ವಿಜಯಪುರದಲ್ಲಿ ರಂಭಾಪುರಿ ಶಾಖಾಮಠಕ್ಕೆ ಭೂಮಿ ಪೂಜೆ: ಸೋಮಯ್ಯ ಗಣಾಚಾರಿ ​

      ಮಾಚ್‌ 14 ರಂದು ವಿಜಯಪುರದಲ್ಲಿ ರಂಭಾಪುರಿ ಶಾಖಾಮಠಕ್ಕೆ ಭೂಮಿ ಪೂಜೆ: ಸೋಮಯ್ಯ ಗಣಾಚಾರಿ ​

      ಯೋಜನೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಿಪಂ ಸಿಇಒ‌ ರಿಷಿ ಆನಂದ‌ ಸೂಚನೆ

      ಯೋಜನೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಿಪಂ ಸಿಇಒ‌ ರಿಷಿ ಆನಂದ‌ ಸೂಚನೆ

      ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್ ಕೊರತೆ ಇಲ್ಲ..!

      ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್ ಕೊರತೆ ಇಲ್ಲ..!

      ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ಮಹಿಳೆಯರ ಜವಾಬ್ದಾರಿ ಅತ್ಯಂತ ಪ್ರಮುಖ..!

      ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ಮಹಿಳೆಯರ ಜವಾಬ್ದಾರಿ ಅತ್ಯಂತ ಪ್ರಮುಖ..!

      ಕುಡಿಯುವ ನೀರಿನ ಸಮಸ್ಯೆಗೆ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ತಹಶೀಲ್ದಾರ್ ಕೀರ್ತಿ ಚಾಲಕ್ ಎಚ್ಚರಿಕೆ

      ಕುಡಿಯುವ ನೀರಿನ ಸಮಸ್ಯೆಗೆ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ತಹಶೀಲ್ದಾರ್ ಕೀರ್ತಿ ಚಾಲಕ್ ಎಚ್ಚರಿಕೆ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ರಾಜ್ಯ

      ರಾಜ್ಯದಾದ್ಯಂತ ಪ್ರತಿಭಟನೆ ಎಚ್ಚರಿಕೆ :ಕೊಡಿಹಳ್ಳಿ ಚಂದ್ರಶೇಖರ

      Voiceofjanata.in

      October 31, 2024
      0
      ರಾಜ್ಯದಾದ್ಯಂತ ಪ್ರತಿಭಟನೆ ಎಚ್ಚರಿಕೆ :ಕೊಡಿಹಳ್ಳಿ ಚಂದ್ರಶೇಖರ
      0
      SHARES
      116
      VIEWS
      Share on FacebookShare on TwitterShare on whatsappShare on telegramShare on Mail

      ರಾಜ್ಯದಾದ್ಯಂತ ಪ್ರತಿಭಟನೆ ಎಚ್ಚರಿಕೆ :ಕೊಡಿಹಳ್ಳಿ ಚಂದ್ರಶೇಖರ

       

      ಇಂಡಿ: ಪಹಣಿಯಲ್ಲಿ ವಕ್ಪ್ ಬೋರ್ಡ ಹೆಸರು ಸೇರಿಸಿದ್ದನ್ನು ಕೂಡಲೆ ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯದ್ಯಂತ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ರೈತ ಸಂಘಟನೆ, ಹಸಿರು ಸೇನೆ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಹೇಳಿದರು.

      ಮಂಗಳವಾರ ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
      ಅಕ್ಟೋಬರ್ ೮ ಮತ್ತು ೧೦ರಂದು ರೈತರ ಪಹಣ ಯಲ್ಲಿ ವಕ್ಫ್ ಬೋರ್ಡ್ ಎಂದು ತಿದ್ದುಪಡಿ ಮಾಡಲು ನಿರ್ದೇಶನ ನೀಡಿದವರು ಯಾರು ಮುಖ್ಯಮಂತ್ರಿಗಳೋ, ಜಿಲ್ಲಾಧಿಕಾರಿಗಳೋ, ಇಲ್ಲದಿದ್ದರೆ ಮತ್ಯಾರು, ಯಾವ ಪುರುಷಾರ್ಥಕ್ಕಾಗಿ ರೈತರಿಗೆ ತೊಂದರೆ ನೀಡಲು ಮುಂದಾಗಿದ್ದೀರಿ ಎಂದು ಪ್ರಶ್ನಿಸಿದರು.

      ಈ ಹಿಂದೆ ವಿಜಯಪುರ ಜಿಲ್ಲೆಯನ್ನು ಸುಲ್ತಾನರು ಆಳ್ವಿಕೆ ಮಾಡಿದ್ದಾರೆ ಅದಕ್ಕಿಂತ ಮೊದಲು ಬಾದಾಮಿ ಚಾಲುಕ್ಯರು ಸೇರಿದಂತೆ ಹಲವು ಹಿಂದೂ ರಾಜರು ಆಳ್ವಿಕೆ ಮಾಡಿದ್ದಾರೆ, ಆ ಸಂದರ್ಭದಲ್ಲಿ ರೈತರು ತಾವು ಉಳುಮೆ ಮಾಡುತ್ತಿದ್ದ ಜಮೀನಿಗೆ ರಾಜರಿಗೆ ತೆರಿಗೆ ಕಟ್ಟುತ್ತಿದ್ದರು, ತದನಂತರ ಬ್ರಿಟಿಷ್ ಕಂಪನಿ ರೈತರಿಗೆ ತಾವು ಉಳುಮೆ ಮಾಡುತ್ತಿದ್ದ ಸ್ಥಳವನ್ನು ಅಳತೆ ಮಾಡಿ ರೈತರ ಹೆಸರಿಗೆ ಎಕರೆ ಗುಂಟೆ ವಿಸ್ತೀರ್ಣದ ಬಗ್ಗೆ ದಾಖಲಾತಿ ನೀಡಿದರು, ೧೯೭೪ರಲ್ಲಿ ಡಿ ದೇವರಾಜ್ ಅರಸ್ ಅವರು ರೈತರು ಉಳುಮೆ ಮಾಡುತ್ತಿದ್ದ ಜಮೀನಿಗೆ ಉಳುವವನೇ ಒಡೆಯ ಎಂದು ಘೋಷಿಸಿ ಆ ಜಮೀನನ್ನು ನೇರವಾಗಿ ರೈತರ ಹೆಸರಿಗೆ ಖಾತೆ ಬದಲಾವಣೆ ಮಾಡಿಸಿದರು, ಅಲ್ಲಿಂದ ಇಲ್ಲಿಯವರೆಗೂ ಅಲ್ಲಿ ರೈತರು ಬೆವರು ಸುರಿಸಿ ದುಡಿದು, ತಮಗಾಗಿ ಅಲ್ಲದೆ ದೇಶದ ಜನರಿಗಾಗಿ ಅನ್ನ ಹಾಕುವ ಕಾರ್ಯ ಮಾಡುತ್ತಿದ್ದಾರೆ.

      ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಕಾಏಕಿ ಒಂದು ಧರ್ಮ ಅಥವಾ ಸಮುದಾಯದ ಓಲೈಕೆಗಾಗಿ ವಕಫ್ ಬೋರ್ಡ್ ಹೆಸರನ್ನು ರೈತರ ಪಹಣ ಯಲ್ಲಿ ಸೇರಿಸುತ್ತಿರುವುದು ಏಕೆ ಎಂದು ಪ್ರಸಿದ್ಧರು, ನಿಮಗೆ ಆ ಸಮುದಾಯದ ಮೇಲೆ ಕಾಳಜಿ ಇದ್ದರೆ, ಸರಕಾರದಿಂದ ಅವರಿಗೆ ನೀವು ಸಹಾಯ ಮಾಡಿ ನಮಗೆ ಯಾವುದೇ ಅಭ್ಯಂತರವಿಲ್ಲ, ಆದರೆ ರೈತರ ಜಮೀನನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿರುವ ನೀವು ಈ ಕೂಡಲೇ ಅದನ್ನು ಕೈ ಬಿಟ್ಟು, ಪಹಣ ಯಲ್ಲಿ ಸೇರಿದ ವಕಪ್ ಬೋರ್ಡ್ ಹೆಸರನ್ನು ತೆಗೆದುಹಾಕಿ, ರೈತರ ಜಮೀನು ರೈತರಿಗೆ ಇರುವಂತೆ ಮಾಡಬೇಕು, ಒಂದು ವೇಳೆ ನೀವು ವಕಪ್ ಬೋರ್ಡ್ ಗೆ ರೈತರ ಜಮೀನನ್ನು ಸೇರಿಸುವ ಹುನ್ನಾರ ಮುಂದುವರಿಸಿದರೆ, ರಾಜ್ಯಾದ್ಯಂತ ರೈತರು ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ, ಮುಂಬರುವ ದಿನಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸಲು ನಾವೆಲ್ಲ ಒಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

      ವಕಪ್ ಬೋರ್ಡಿಗೆ ಇನಾಮು ಕೊಟ್ಟಿದ್ದು ಯಾವಾಗ, ದಾನ ಪಡೆದ ಜಮೀನನ್ನು ಇಲ್ಲಿಯವರೆಗೂ ಏಕೆ ವಕಪ್ ಬೋರ್ಡ್ ಗೆ ಸೇರಿಸಿಕೊಂಡಿಲ್ಲ, ಈಗ ಒಮ್ಮಿಂದೊಮ್ಮೆಲೆ, ಪಹಣ ಗಳಲ್ಲಿ ವಕಪ್ ಬೋರ್ಡ್ ಹೆಸರು ಸೇರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಪಹಣ ಯಲ್ಲಿ ವಕಪ್ ಭೋರ್ಡ ಎಂದು ನಮೂದಿಸಿರುವುದು ಸರಿ ಮಾಡುತ್ತೇವೆ, ಎಂದು ಹೇಳಿಕೆ ನೀಡುತ್ತಿದ್ದೀರಿ ಈ ಮೊದಲು ಏಕೆ ವಕಪ್ ಬೋರ್ಡ ಹೆಸರು ತೇಲಿಸಿದ್ದೀರಿ? ನೀವು ರೈತರಿಗೆ ದ್ರೋಹ ಮಾಡಲು ಮುಂದಾಗಿದ್ದೀರಿ ಮೊದಲು ಪಹಣ ಯಲ್ಲಿನ ವಕಪ್ ಬೋರ್ಡ ಹೆಸರು ತೆಗೆದು ಜಿಲ್ಲೆಯ ರೈತರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.

      ನಿಮ್ಮ ರಾಜಕೀಯ ಲಾಭಕ್ಕಾಗಿ ರೈತರನ್ನು ಭೂಮಿಯಿಂದ ಹೊರಗೆ ಹಾಕಲು ಮುಂದಾದರೆ ರೈತರಿಗೆ ದ್ರೋಹ ಮಾಡಿ ರೈತರ ಒಡೆತನದ ಭೂಮಿಯನ್ನು ಕಸಿದುಕೊಂಡರೆ, ದೇವರು ನಿಮಗೆ ಕ್ಷಮಿಸಲ್ಲ ನಾವು ರಾಜ್ಯಾದ್ಯಂತ ಹೋರಾಟಕ್ಕಿಳಿಯಬೇಕಾಗುತ್ತದೆ. ಇನ್ನು ೧೫ ದಿನಗಳಲ್ಲಿ ಪಹಣ ಗಳಲ್ಲಿ ತೇಲಿಸಿದ ವಾಕಪ್ ಬೋರ್ಡ್ ಹೆಸರನ್ನು ತೆಗೆದು ಹಾಕಬೇಕು ಇಲ್ಲವಾದಲ್ಲಿ ನಮ್ಮ ಹೋರಾಟಕ್ಕೆ ನಾವು ಅಣೆಯಾಗುತ್ತೇವೆ ಎಂದು ತಿಳಿಸಿದರು.

      ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎಸ್.ಬಿ ಕೆಂಭೋಗಿ ಮಾತನಾಡಿ, ರೈತರಿಗೆ ಯಾವುದೇ ನೋಟಿಸ್ ನೀಡದೆ, ಅವರ ಪಹಣ ಗಳಲ್ಲಿ ಏಕಾಏಕಿ ವಕ್ಪ್ ಬೋರ್ಡ್ ಹೆಸರನ್ನು ತೇಲಿಸಿದ್ದು ಖಂಡನೀಯ, ಈ ಕೂಡಲೇ ಅದನ್ನು ಹಿಂಪಡೆದು, ತಪ್ಪು ಮಾಡಿದ ಅಧಿಕಾರಿಗಳನ್ನು ಅಮಾನತ್ತು ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ರಾಜ್ಯಾಧ್ಯಕ್ಷರು ಕರೆ ನೀಡಿದರೆ ನಾವೆಲ್ಲ ರೈತರು ಸೇರಿ ಹೋರಾಟದ ರೂಪುರೇಷೆ ತಯಾರಿಸಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ತಿಳಿಸಿದರು.
      ಪತ್ರಿಕಾಗೋಷ್ಠಿ ನಡೆದ ಸಂದರ್ಭದಲ್ಲಿಯೇ ಇಂಡಿ ತಾಲೂಕಿನ ಹಿಂಗಣ ಯ ರೈತ ಮಂಜುನಾಥ ಗುಬ್ಯಾಡ ನಮ್ಮ ಜಮೀನಿನ ಪಹಣ ಯಲ್ಲಿಯೂ ವಕ್ಪ್ ಭೋರ್ಡ ಹೆಸರು ತೇಲಿಸಿದ್ದಾರೆ. ನಮ್ಮ ಮುತ್ತಜ್ಜನ ಕಾಲದಿಂದಲೂ ಇದು ನಮ್ಮ ಆಸ್ತಿ ಇದೆ. ಈಗ ಏಕಾಏಕಿ ನೋಟಿಸ್ ನೀಡದೇ ಪಹಣ ಯಲ್ಲಿ ವಕಪ್‌ಬೋರ್ಡ ಹೆಸರು ತೇಲಿಸಿದ್ದಾರೆ ಎಂದು ಅಳಲು ತೋಡಿಕೊಂಡರು.

      ಪತ್ರಿಕಾಗೋಷ್ಠಿಯಲ್ಲಿ ರಾಯಚೂರ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಪೊಲೀಸ್‌ಪಾಟೀಲ, ದಾವಣಗೆರೆ ತಾಲೂಕಾಧ್ಯಕ್ಷ ವಿಶ್ವನಾಥ ಮಂಡಲೂರು, ಬೆಳಗಾವಿ ಜಿಲ್ಲಾಧ್ಯಕ್ಷ ಶಂಕರ ಮಾದೇನಹಳ್ಳಿ, ನಾಗೇಶ ಹೆಗಡ್ಯಾಳ, ಮಲ್ಲಿಕಾರ್ಜುನ ಹಾವಿನಾಳಮಠ, ಸೇರಿದಂತೆ ಮತ್ತಿತರರು ಇದ್ದರು.

      ಇಂಡಿ: ಪತ್ರಿಕಾಗೋಷ್ಠಿಯಲ್ಲಿ ಚಂದ್ರಶೇಖರ ಕೋಡಿಹಳ್ಳಿ ಮಾತನಾಡಿದರು.

      Tags: #indi / vijayapur#kodihalli chandrashekhar#Pressmeet#Public News#State News#Statewide protest warning: Kodihalli Chandrasekhara#Today News#Voice Of Janata#Voiceofjanata.in#ರಾಜ್ಯದಾದ್ಯಂತ ಪ್ರತಿಭಟನೆ ಎಚ್ಚರಿಕೆ :ಕೊಡಿಹಳ್ಳಿ ಚಂದ್ರಶೇಖರ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ವಿಜಯಪುರ | ಜಿಲ್ಲೆಯಲ್ಲಿ ರಂಭಾಪುರಿ ಮಠದ ಶಾಖಾಮಠ ನಿರ್ಮಾಣಕ್ಕೆ ಚಾಲನೆ!

      ವಿಜಯಪುರ | ಜಿಲ್ಲೆಯಲ್ಲಿ ರಂಭಾಪುರಿ ಮಠದ ಶಾಖಾಮಠ ನಿರ್ಮಾಣಕ್ಕೆ ಚಾಲನೆ!

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ವಿಜಯಪುರ | ಜಿಲ್ಲೆಯಲ್ಲಿ ರಂಭಾಪುರಿ ಮಠದ ಶಾಖಾಮಠ ನಿರ್ಮಾಣಕ್ಕೆ ಚಾಲನೆ!

      ವಿಜಯಪುರ | ಜಿಲ್ಲೆಯಲ್ಲಿ ರಂಭಾಪುರಿ ಮಠದ ಶಾಖಾಮಠ ನಿರ್ಮಾಣಕ್ಕೆ ಚಾಲನೆ!

      March 15, 2026
      ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಶಂಕುಸ್ಥಾಪನೆ..!

      ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಶಂಕುಸ್ಥಾಪನೆ..!

      March 14, 2026
      ಶೇ. 56ರಷ್ಟು ಮೀಸಲಾತಿ ಕಾಯ್ದೆಗೆ ಕಾನೂನಾತ್ಮಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಮಹತ್ವದ ಹೆಜ್ಜೆ

      ಶೇ. 56ರಷ್ಟು ಮೀಸಲಾತಿ ಕಾಯ್ದೆಗೆ ಕಾನೂನಾತ್ಮಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಮಹತ್ವದ ಹೆಜ್ಜೆ

      March 14, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.