ರಾಯಚೂರು : ಪ್ರಸಕ್ತ ಸಾಲಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹೆಸರಿನಲ್ಲಿ ಶಿಕ್ಷಣ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಿ.ಲಿಜೆಂಡ್ ಟಿಪ್ಪುಸುಲ್ತಾನ್ ಸಂಘದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅಸಮಾಧಾನ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವರ್ಗದ ಜನರು ತಮ್ಮ ಮಕ್ಕಳನ್ನು ಶಿಕ್ಷಣ ಕೊಡಿಸಲು ಆಗುತ್ತಿಲ್ಲ ಶಿಕ್ಷಣ ಸಂಸ್ಥೆಗಳು ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ದೂರಿದರು. ಅನೇಕ ಶಿಕ್ಷಣ ಸಂಸ್ಥೆಗಳು ಶಾಲೆ ತೆರೆಯಲು ಇಲಾಖೆಯ ಪರವಾನಗಿ ಪಡೆದಿಲ್ಲ ಕೆಲವು ಶಾಲೆಗಳು ಹಲವಾರು ನ್ಯೂನತೆಯಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪ ನಿರ್ದೇಶಕರು ಆಮಿಷಕ್ಕೆ ಒಡ್ಡಿ ನಿಯಮ ಅಪಾಲಿಸದೇ ನಡೆಸುತ್ತಿದ್ದಾರೆ.
ಎಲ್ ಕೆ.ಜಿ ಪ್ರವೇಶ ಪಡೆಯಲು ೫೦ ಸಾವಿರದಿಂದ ೮೦ ಸಾವಿರ ಕನಿಷ್ಟ ೧೫ ಸಾವಿರ ಪಡೆಯುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ನಿಗದಿತ ದರ ನಿಗದಿ ಮಾಡಿದರೆ ಖಾಸಗಿ ಶಾಲೆಗಳು ತಮ್ಮ ಮನ ಬಂದಂತೆ ದರ ನಿಗದಿ ಮಾಡುತ್ತಿದ್ದಾರೆ. ಶಾಸಕರು, ಶಿಕ್ಷಣಾಧಿಕಾರಿಗಳು. ದೆಹಲಿ ಪಂಜಾಬ್ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಯಾಗಿ ಗುಣಮಟ್ಟದ ಶಿಕ್ಷಣ ನೀಡುವ ಮಾದರಿಯಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಆದಿಲ್ ಚೌದ್ರಿ, ಸೈಯದ್ ರಶೀದ್, ಆನಂದ್ ಏಗನೂರು, ರವಿಕುಮಾರ್ ಇದ್ದರು.