ವಿಜಯಪುರ : ಪಾಕಿಸ್ತಾನದ ಚಿತ್ರ ಹಾಕಿದ್ದನ್ನು ಪ್ರಶ್ನಿಸಿದಕ್ಕೆ ಓರ್ವನ್ನು ಕಿಡ್ನ್ಯಾಪ್ಗೈದು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಹೊನವಾಡ ಬಳಿ ನಡೆದಿದೆ. ಹೊನವಾಡ ಗ್ರಾಮದ ಪೈಲ್ವಾನ್ ಉಮೇಶ ಹರಗಿ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ. ಜತ್ತ ತಾಲ್ಲೂಕಿನ ಆಸಂಗಿ ಗ್ರಾಮದಲ ಅಫ್ಹಲ್ ಖಾನ್ ಮುಜಾವರ ಹಾಗೂ ಮೂವರು ಹಲ್ಲೆ ಮಾಡಿದ್ದಯ, ಪೈಲ್ವಾನ್ ಅಫ್ಜಲ್ ಹಸಿರು ಸಿಂಹದ ಫೋಟೊವನ್ನು ವಾಟ್ಸ್ಆ್ಯಪ್ನಲ್ಲಿ ಪೋಸ್ಟ್ ಮಾಡಿದ್ದ. ಇದನ್ನು ಪೈಲ್ವಾನ್ ಉಮೇಶ ಹರಗಿ ಪ್ರಶ್ನಿಸಿದ್ದಾನೆ. ಅದಕ್ಕಾಗಿ ಹೊನವಾಡನಲ್ಲಿ ಹಲ್ಲೆಗೈದು ಕಿಡ್ನ್ಯಾಪ್ ಮಾಡಿ ರಾಡ್ನಿಂದ ಹಲ್ಲೆಗೈದು ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಉಮೇಶ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಿಕೋಟಾ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.