ಕಳೆದ ಹಲವು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ರಸ್ತೆಗಳು ಹದಗೆಟ್ಟು ಹೋಗಿವೆ. ಅಲ್ಲದೇ, ಸಂಚಾರಕ್ಕೂ ಸಂಚಕಾರ ಎದುರಾಗಿದೆ.
ಹೌದು..! ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಿಂದ ವಿಜಯಪುರ ಮುಖ್ಯ ರಸ್ತೆ ಹಾಳಾಗಿವೆ. ಇನ್ನು ರಸ್ತೆಯಲ್ಲಿ ದೊಡ್ಡ ಗಾತ್ರದ ತಗ್ಗು ಗುಂಡಿಗಳು ಬಿದ್ದಿವೆ. ಇನ್ನೂ ಸಾಕಷ್ಟು ವಾಹನ ಸವಾರರು ತಮ್ಮ ಜೀವವನ್ನು ಹಿಡಿದುಕೊಂಡು ಓಡಾಡು ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ರಸ್ತೆಗಳನ್ನು ಸುಧಾರಿಸಲು ಆಗ್ರಹಿಸಿ ಇಂಡಿ ಹಿತ ರಕ್ಷಣಾ ವೇದಿಕೆ ವತಿಯಿಂದ ಗುಂಡಿಗಳಲ್ಲಿ ಸಸಿ ನೆಡುವುದರ ಮೂಲಕ ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಆದಷ್ಟು ಬೇಗನೆ ರಸ್ತೆ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಇಂಡಿ ಹಿತ ರಕ್ಷಣಾ ಸಮಿತಿಯ ಮುಖಂಡ ಶ್ರೀಧರ್ ಕ್ಷೇತ್ರಿ ಮಾತಾನಾಡಿದ ಅವರು, ಇಂಡಿ ಬಂಗಾರದ ಕಿಂಡಿ ಮಾಡುವ ಸಂಕಲ್ಪ ಶಾಸಕರದಾಗಿತ್ತು . ಆದರೆ ಪಟ್ಟಣದ ರಸ್ತೆ ತುಂಬೆಲ್ಲಾ ಗುಂಡಿಗಳೆ ಕಾಣುತ್ತವೆ. ಜೊತೆಗೆ ರಾಜ್ಯದಲ್ಲಿಯೇ ಅತೀ ಹೆಚ್ಚು ಕೆರೆಗಳು ಇಂಡಿ ತಾಲ್ಲೂಕಿನಲ್ಲಿ ಕಾಣುತ್ತವೆ ಅದು ಪಟ್ಟಣದ ರಸ್ತೆಗಳ ಮೇಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೋರ್ವ ಮುಖಂಡ ನಾಗೇಶ್ ಶಿಂದೆ ಮಾತಾನಾಡಿ ಕಳೆದ ಹತ್ತು ವರ್ಷಗಳಿಂದ ಕೈ ಶಾಸಕರು ಆಯ್ಕಯಾಗುತ್ತಿದ್ದಾರೆ. ಎಲ್ಲಾ ಕಡೆಯೂ ಅಭಿವೃದ್ಧಿ ಪರ್ವದ ಬಗ್ಗೆ ಮಾತಾಡುತ್ತಾರೆ. ಆದರೆ ನಾವು ಇಂದು ಇಂಡಿ ನಗರದ ರಸ್ತೆಗಳ ಮೇಲೆ ಬಿದ್ದ ಗುಂಡಿಗಳ ಸ್ಥಳದಲ್ಲಿ ಗಿಡನೆಡುವ ಸಂದರ್ಭ ಬಂದಿದೆ ಎಂದು ಹೇಳಿದರು. ಈ ರಸ್ತೆಗಳ ಮೇಲೆ ಎಷ್ಟೊಂದು ಅನಾಹುತಗಳು ನಡೆಯುತ್ತೆವೆ. ಎಷ್ಟು ಜನರು ಕೈ ಕಾಲು ಮುರಿದುಕೊಂಡು ಜೀವಕ್ಕೆ ಅಪಾಯ ತಂದುಕೊಂಡಿದ್ದಾರೆ . ಈಗಲಾದರೂ ಕೂಡಲೇ ರಸ್ತೆ ಸರಿಪಡಿಸಿ ಜನರಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರವೀಣ ಮಠ, ವಿನೋದ ಪವಾರ, ಅಖೀಲ ಬಂಕೂರ, ವಿನೋದ ಸೂರ್ಯವಂಶಿ, ಶಿವಾಜಿ ಶಿಂಧೆ, ಅಕ್ಷಯ ಹಿಬಾರೆ, ಮುತ್ತು ಸಿಂದಗಿ, ಶ್ರೀಶೈಲ ಬೊಡಿ, ಅಕ್ಷಯ ಶೀವೂರ, ನಿಲೇಶ ಮಾನೆ, ಗಿರೀಶ್ ಪಾಟೀಲ, ಧರ್ಮರಾಜ ಚಡಚಣ , ವಿನೋದ ಹದಗಲ್ ಮತ್ತು ಅನೇಕರು ಉಪಸ್ಥಿತಿತರು.