ಲಿಂಗಸೂಗೂರು: ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ ಘಟಕದ ವತಿಯಿಂದ ಅಶೋಕ ಗೌಡ ಪಾಟೀಲ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎ. ನಯೀಮ್ ಮಾತನಾಡಿ ಪಾಟೀಲ್ರು ಬಡವರಿಗೆ ಉಚಿತ ಶಿಕ್ಷಣ ನೀಡಿರುವುದು, ಮತ್ತು ಕ್ರೀಡಾ ಕ್ಷೇತ್ರದಲ್ಲಿ ಹಲವಾರು ಬಡ ಕ್ರೀಡಾಪಟುಗಳಿಗೆ ಸಹಾಯ ಹಸ್ತ ನೀಡಿರುವುದು, ಅಲ್ಲದೆ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ, ಐತಿಹಾಸಿಕ ಮುದಗಲ್ ಕೋಟೆ ಸ್ವಚ್ಛತಾ ಅಭಿಯಾನದ ನೇತೃತ್ವವನ್ನು ವಹಿಸಿ ಸಂಘ ಸಂಸ್ಥೆಗಳ ಸಹಕಾರದಿಂದ ಕೋಟೆಯ ಉಳಿವಿಗಾಗಿ ತನು, ಮನು, ಧನ ದಿಂದ ಸಹಕರಿಸಿದ್ದಾರೆ. ಬಡವರ ಏಳಿಗೆಗಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡು ಯಾವುದೇ ಪ್ರಚಾರಕ್ಕೆ ಆಪೇಕ್ಷೆ ಪಡದೆ ಶ್ರಮಿಸುತ್ತಿರುವ ಅಶೋಕಗೌಡ ಪಾಟೀಲ್ ಅವರಿಗೆ ದೇವರು ಆರೋಗ್ಯ,ಹಾಗೂ ಬಡವರ ಧ್ವನಿಯಾಗಿ ಕೆಲಸ ಮಾಡಲಿಕ್ಕೆ ನೂರುವರ್ಷ ಆಯುಷ್ಯ ಕೊಡಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಾಬು ಹುಸೇನ್, ಮಹಾಂತೇಶ ಶೆಟ್ಟರ್, ಅಬ್ದುಲ್ ಮಜೀದ್, ಗ್ಯಾನಪ್ಪ, ಜಾಕೀರ್ ಪಾಷಾ, ರಹೀಮ್, ವಿರುಪಾಕ್ಷಿ ಹೂಗಾರ, ಇಸ್ಮಾಯಿಲ್ ಕೊಳ್ಳಿ ಉಪಸ್ಥಿತರಿದ್ದರು.