ಅದ್ಯಕ್ಷೆಯ ಪತಿ, ಮುಖ್ಯಾಧಿಕಾರಿ, ಜೆಇ ದುರಾಡಳಿತ:
ಅನುದಾನದ ಮಾಹಿತಿ ನೀಡುತ್ತಿಲ್ಲ
ಬಿಜೆಪಿ ಸದಸ್ಯರ ವಾರ್ಡಗಳಿಗೆ ಅಭಿವೃದ್ದಿ ಕೆಲಸಗಳು ಮರಿಚಿಕೆ:
ಅಫಜಲಪುರ: ಕಳೆದ 8 ತಿಂಗಳಿಂದ ಪುರಸಭೆಯ ಸಾಮಾನ್ಯ ಸಭೆಯಾಗಲಿ, ಯಾವುದೇ ಸಭೆಗಳಾಗಲಿ ಮಾಡುತ್ತಿಲ್ಲ ಎಂದು ಪುರಸಭೆ ಸದಸ್ಯರಾದ ಶಿವಾನಂದ ಹಾಗೂ ಜಗು ಆರೋಪಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪುರಸಭೆಯಲ್ಲಿ ನಮ್ಮ ಮಾತಿಗೆ ಯಾರು ಬೆಲೆ ನೀಡುತ್ತಿಲ್ಲ. ನಾವು ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದೇವೆ.
ನಮ್ಮ ವಾರ್ಡಗಳಿಗೆ ಯಾವ ಅಭಿವೃದ್ದಿ ಕೆಲಸಗಳನ್ನು ಇಡುತ್ತಿಲ್ಲ. ನಾವು ಅನುದಾನದ ಮಾಹಿತಿ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಜೆಇ ತಾವೇ ಸದಸ್ಯ ಎನ್ನುವಂತೆ ವರ್ತಿಸುತ್ತಿದ್ದು ಎಲ್ಲಾ ಕಡೆ ಅವರೇ ಕಾಮಗಾರಿ ಹೆಸರಿಡುತ್ತಾರೆ. ತಾವೇ ಬಿಲ್ ಮಾಡಿಕೊಳ್ಳುತ್ತಿದ್ದಾರೆ, ಇದರಿಂದ ನಾವು ಬೇಸತ್ತಿದ್ದೇವೆ. ಮುಖ್ಯಾಧಿಕಾರಿಗಳಿಗೆ ಮಾಹಿತಿ ಕೇಳಿದರೂ ಪ್ರಯೋಜನವಾಗುತ್ತಿಲ್ಲ.
14ನೇ ಹಣಕಾಸು ಯೋಜನೆಯಲ್ಲಿ 20 ಲಕ್ಷ ದುರುಪಯೋಗವಾಗಿದೆ. ಅದರ ಮಾಹಿತಿ ನಿಡುತ್ತಿಲ್ಲ. ಇವರ ವರ್ತನೆಯಿಂದ ನಮಗೆ ಸಾಕಾಗಿದೆ. ನಾವು ಪ್ರತಿನಿಧಿಸಿದ ವಾರ್ಡಗಳಲ್ಲಿ ಜನ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತಿಲ್ಲ ಎಂದು ಅಳಲು ತೋಡಿಕೊಂಡ ಅವರು ಇನ್ನಾದರೂ ತಮ್ಮ ಧೋರಣೆ ಬಿಟ್ಟು ಎಲ್ಲಾ ವಾರ್ಡಗಳ ಅಭಿವೃದ್ದಿಗಾಗಿ ಶ್ರಮಿಸಬೇಕು ಇಲ್ಲದಿದ್ದರೆ ನಾವು ಪುರಸಭೆಯ ಮುಂದೆ ಧರಣಿ ಕೂತುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ