ಲಿಂಗಸೂಗೂರು: ಕಳೆದ ಮೂರು ದಿನಗಳ ಹಿಂದೆ ಮನೆಯ ಮುಂದೆ ಕಟ್ಟಿದ ಆಡುಗಳನ್ನು ಕಳ್ಳತನ ಮಾಡಿ ಕಳ್ಳರು ಎಸ್ಕೇಪ್ ಆಗಿದ್ದರು. ಕೊನೆಗೂ ಪೊಲೀಸರು ಪ್ರಕರಣವನ್ನು ಬೇಧಿಸಿ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಮನೆ ಮಂದೆ ಕಟ್ಟಿದ 28 ಸಾವಿರ ರೂ ಬೆಲೆ ಬಾಳುವ ಎರಡು ಆಡುಗಳನ್ನು ಕಳ್ಳರು ರಾತ್ರಿ ವೇಳೆ ಕಳ್ಳತನ ಮಾಡಿದ್ದರು. ಈ ಹಿನ್ನಲೆಯಲ್ಲಿ ಯಮನೂರ ಅರಕೇರಿ ಹಾಗೂ ನಿಂಗಮ್ಮ ಆನಂದಪ್ಪ ಎನ್ನುವವರು ಹಟ್ಟಿ ಚಿನ್ನದ ಗಣಿ ಠಾಣೆಗೆ ದೂರನ್ನು ಸಲ್ಲಿಸಿದ್ದರು.
ದೂರು ಆಧರಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ತಂಡವನ್ನ ರಚಿಸಿ ಹುಡುಕಾಟ ನಡೆಸಿದ್ದರು.
ಕೊನೆಗೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ 1 ಲಕ್ಷ 50 ಸಾವಿರ ರೂ. ಬೆಲೆ ಬಾಳುವ 13 ಆಡುಗಳು, 1 ಲಕ್ಷ 50 ರೂ.ಯ ಆಟೋವನ್ನು ಜಪ್ತಿ ಮಾಡಿ ನಾಗರಾಜ ಗುರಿಕಾರ, ಹನುಮಂತ ರೆಡ್ಡಿ, ಗುರಿಕಾರ, ಆಂಜನೇಯನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.