ಸಸಿಗೆ ನೀರೆರೆಯುವ ಮೂಲಕ ಯೂನುಸ್ ಬಾಲದಾರ ಹುಟ್ಟುಹಬ್ಬಕ್ಕೆ ಚಾಲನೆ ನೀಡಿದ ಕೆಪಿಸಿಸಿ ನಾಯಕ ರಜಾಕ್ ಮುಲ್ಲಾ
ಅಥಣಿ: ಅಥಣಿ ತಾಲೂಕಿನಾದ್ಯಂತ ಸದಾ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಬಳ್ಳಿಗೇರಿ ಗ್ರಾಮದ ಜನಪ್ರಿಯ ಯುವ ಮುಖಂಡರಾದ ಶ್ರೀ ಯೂನುಸ್ ಬಾಲದಾರ ಅವರ ೩೯ ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮವು ನಿನ್ನೆ ಸಾಯಂಕಾಲ ಅತ್ಯಂತ ಸಡಗರ ಹಾಗೂ ಸಾಂಸ್ಕೃತಿಕ ಹಬ್ಬದ ವಾತಾವರಣದಲ್ಲಿ ಜರುಗಿತು. ಈ ಪ್ರಮುಖ ಸಮಾರಂಭಕ್ಕೆ ರಾಜ್ಯ ರಾಜಕಾರಣದ ಮತ್ತು ಸ್ಥಳೀಯ ಸಮಾಜದ ಪ್ರಮುಖ ಗಣ್ಯರು ಸಾಕ್ಷಿಯಾದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಕೆಪಿಸಿಸಿ (ಕೆ.ಪಿ.ಸಿ.ಸಿ) ಸಂಯೋಜಕರಾದ ಸನ್ಮಾನ್ಯ ಶ್ರೀ ರಜಾಕ್ ಡಿ. ಮುಲ್ಲಾ ಬಾಗಿ ಅವರು, ಕೇವಲ ಹಾರ-ತುರಾಯಿಗಳಿಗೆ ಸೀಮಿತವಾಗದೆ ಹಸಿರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಅತ್ಯಂತ ಅರ್ಥಪೂರ್ಣ ಮತ್ತು ಪರಿಸರಸ್ನೇಹಿ ಚಾಲನೆ ನೀಡಿದರು. ಇಂದಿನ ಯುವ ಪೀಳಿಗೆಗೆ ಪ್ರಕೃತಿ ಸಂರಕ್ಷಣೆಯ ಸಂದೇಶ ಸಾರುವ ಇಂತಹ ವಿಭಿನ್ನ ಆಚರಣೆಗಳು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು. ವೇದಿಕೆಯಲ್ಲಿ ಯುವ ಮುಖಂಡ ಯೂನುಸ್ ಬಾಲದಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರಿ ಮಾತನಾಡಿದ ಶ್ರೀ ರಜಾಕ್ ಮುಲ್ಲಾ ಅವರು, “ಯೂನುಸ್ ಬಾಲದಾರ್ ಅವರು ಸದಾ ಸಾರ್ವಜನಿಕರ ಸಂಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆ. ಅವರು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಇನ್ನು ಹೆಚ್ಚಿನ ಉನ್ನತ ಸ್ಥಾನಗಳನ್ನು ಅಲಂಕರಿಸಿ, ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು. ಭಗವಂತನು ಅವರಿಗೆ ಆಯುಷ-ಆರೋಗ್ಯ ನೀಡಿ, ನೂರಾರು ಕಾಲ ಜನಸಾಮಾನ್ಯರ ಸೇವೆ ಮಾಡುವ ಶಕ್ತಿಯನ್ನು ಕರುಣಿಸಲಿ” ಎಂದು ಆಶಿಸಿದರು.

ಈ ಭವ್ಯ ಸಮಾರಂಭದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದು ಹರಸಿದರು. ದಲಿತ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷರಾದ ಶ್ರೀ ಗೌತಮ್ ಪರಂಜಿಪೆ, ಪ್ರಮುಖ ಯುವ ಮುಖಂಡರಾದ ಶ್ರೀ ನಿಶಾಂತ್ ಮಡ್ಡಿ ಮತ್ತು ಶ್ರೀ ವಿನೋದ ಕಾಂಬಳೆ ಅವರು ಭಾಗವಹಿಸಿ ಶುಭ ಕೋರಿದರು ಅಲ್ಲದೆ, ಕ್ಷೇತ್ರದ ಹೆಸರಾಂತ ವೈದ್ಯಕೀಯ ಸಂಸ್ಥೆಯಾದ ಓಂ ಮಾಧವ್ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಯ ಮಾಲೀಕರಾದ ಶ್ರೀ ಸಂಗಮೇಶ ದಿವಾನಮಳ, ಹಿರಿಯ ಮುಖಂಡರಾದ ಶ್ರೀ ಸುರೇಶ ಚಲವಾದಿ, ಶ್ರೀ ಹೈದರ್ ಬಾಲದಾರ್, ಶ್ರೀ ಕೃಷ್ಣಾ ದೊಡಮನಿ, ಶ್ರೀ ವಿಠ್ಠಲ ಸನದಿ, ಶ್ರೀ ಮಲ್ಲಿಕಾರ್ಜುನ ಪಾಟೀಲ್ ಹಾಗೂ ಶ್ರೀ ತುಕಾರಾಮ ಆಸೋದೆ ಸೇರಿದಂತೆ ವಿವಿಧ ರಂಗಗಳ ನಾಯಕರು, ಅಪಾರ ಸಂಖ್ಯೆಯ ಯುವ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಬಳ್ಳಿಗೇರಿ ಗ್ರಾಮಸ್ಥರು ಉಪಸ್ಥಿತರಿದ್ದು, ಯೂನುಸ್ ಬಾಲದಾರ ಅವರಿಗೆ ಆತ್ಮೀಯವಾಗಿ ಗೌರವಿಸಿ ಜನ್ಮದಿನದ ಶುಭ ಕೋರಿದರು.
ವರದಿ – ಮಹೇಶ್ ಶರ್ಮಾ, ಅಥಣಿ ಬೆಳಗಾವಿ

















