ಇಂಡಿಯಲ್ಲಿ ಸಿದ್ಧೇಶ್ವರ ಶ್ರೀಗಳಿಗೆ ಕಾವ್ಯ ನಮನ ; ಕ.ಸ.ಪ ಅಧ್ಯಕ್ಷ ಕುಲಕರ್ಣಿ..!
ಇಂಡಿ : ಈ ನಾಡಿನ ನಡೆದಾಡುವ ದೇವರೆಂದೇ ಹೆಸರುವಾಸಿಯಾದ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳಿಗೆ ವಿಶಿಷ್ಠ ರೀತಿಯಲ್ಲಿ ನಮನ ಸಲ್ಲಿಸುವದಕ್ಕಾಗಿ “ಕಾವ್ಯ ನಮನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಶ್ರೀಗಳ ಕುರಿತು ಕವನ ವಾಚನ ಹಾಗೂ ಗೀತೆಯನ್ನು ಹಾಡುವವರು 22 ಜುಲೈ ಒಳಗಾಗಿ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಕ.ಸಾ.ಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರೀ ಸಿದ್ದೇಶ್ವರ ಪೂಜ್ಯರ ಕಾವ್ಯ ನಮನ ಕಾರ್ಯಕ್ರಮ ಆಯೋಜಿಸಿದ್ದು, ಭಾಗವಹಿಸಿದ ಕವಿಗಳಿಗೆ ಪ್ರಶಸ್ತಿಪತ್ರದೊಂದಿಗೆ ಸತ್ಕರಿಸಲಾಗುವುದೆಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಿಕೊಳ್ಳಲು ಕ.ಸಾ.ಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ 9481084909 ಹಾಗೂ ಕಾರ್ಯದರ್ಶಿ ಪಾರ್ವತಿ ಸೊನ್ನದ 8217735804 ಅವರಿಗೆ ಸಂಪರ್ಕಿಸಿ ಹೆಸರು ನೊಂದಾಯಿಸಲು ತಿಳಿಸಿದ್ದಾರೆ.