ಸಾಹಿತ್ಯದ ಕೃಷಿಯಲ್ಲಿ ಹೆಚ್ಚು ಹೆಚ್ಚು ಸ್ಥಳೀಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ; ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ..
ಕಾವ್ಯ ಮತ್ತು ಗೀತ ನಮನ ಕಾರ್ಯಕ್ರಮದ ಅದ್ಬುತ ಕ್ಷಣಗಳು ವಿಧ್ಯಾರ್ಥಿಗಳಿಗೆ ಅಮೂಲ್ಯವಾಗಿವೆ ;
ಪ್ರಭಾಕರ್ ಬಗಲಿ
ಪಠ್ಯ ಪುಸ್ತಕದಲ್ಲಿ ಸಿದ್ದೇಶ್ವರ ಶ್ರೀಗಳನ್ನು ಕಾಣುವ ತುಡಿತ : ಕಸಾಪ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ..
ಶ್ರೀಗಳು ಪೌರಾತ್ಯ ಮತ್ತು ಪಾಶ್ಚಾಮಾತ್ಯ ತತ್ವಗಳ ಅಧ್ಯಯನ ಮಾಡಿದ ವಿಶ್ವಶ್ರೇಷ್ಠ ಸಂತರು ; ಪ್ರೋ ರವಿಕುಮಾರ್ ಅರಳಿ
ಇಂಡಿ : ಸಿಂಪಿ ಲಿಂಗಣ್ಣ ಸ್ಮಾರಕದ ನೀಲನಕ್ಷೆ ಸಿದ್ದಪಡಿಸಿದ್ದೆವೆ. ಜಿಲ್ಲೆಯಲ್ಲಿ ರೂ. 6 ಕೋಟಿ 50 ಲಕ್ಷ ವೆಚ್ಚದ ಕನ್ನಡ ಸಾಹಿತ್ಯ ಪರಿಷತ್ತು ಭವನ ನಿರ್ಮಾಣ ಮಾಡುವ ಮತ್ತು ಗುಮ್ಮಟ ನಗರಿಯಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೆವೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ಪಟ್ಟಣದ ಪ್ರತಿಷ್ಠಿತ ಜಿ ಆರ್ ಜಿ ಕಲಾ, ವಾಯ್ ಎ ಪಾಟೀಲ ವಾಣಿಜ್ಯ ಹಾಗೂ ಎಮ್ ಎಫ್ ದೋಶಿ ವಿಜ್ಞಾನ ಮಹಾವಿದ್ಯಾಲಯದ ಸಭಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇಂಡಿ ತಾಲ್ಲೂಕು ಘಟಕದ ಆಶ್ರಯದಲ್ಲಿ ಪೂಜ್ಯ ಸಿದ್ದೇಶ್ವರ ಶ್ರೀಗಳಿಗೆ ಕಾವ್ಯ ಹಾಗೂ ಗೀತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಇನ್ನೂ ಸಾಹಿತ್ಯದ ಕೃಷಿಯಲ್ಲಿ ಹೆಚ್ಚು ಹೆಚ್ಚು ಸ್ಥಳೀಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ವಿಧ್ಯಾರ್ಥಿಗಳ ಸಲುವಾಗಿ ಮಕ್ಕಳ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ಆಯೋಜನೆ ಗೊಳಿಸಲಾಗುತ್ತದೆ. ಹಾಗಾಗಿ ಮಹಾವಿದ್ಯಾಲಯ ವಿಧ್ಯಾರ್ಥಿಗಳಿಗೆ ಉಪಯುಕ್ತ. ಜ್ಞಾನದಾತರಾದ ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನದ ಮೂಲಕ ಜನರಿಗೆ ದಾರಿ ದೀಪವಾಗಿದ್ದರು.
ಅವರ ಜೀವನವೇ ಸ್ಪೂರ್ತಿಗಾದೆ. ಅವರ ವಿಚಾರಧಾರೆ ಮೈಗೂಡಿಸಿಕೊಳ್ಳಬೇಕು ಎಂದರು. ಅದಲ್ಲದೇ ಕಾಡು ಪ್ರಾಣಿಗಳು ಕಾಡಲ್ಲಿದ್ದರೆ, ಕಾಡುವ ಪ್ರಾಣಿಗಳು ನಾಡಲ್ಲಿ ಇರುತ್ತೆವೆ ಎಂದು ಹೇಳಿ ಹಾಸ್ಯ ಚಟಾಕಿ ಹಾರಿಸಿ ವಿಧ್ಯಾರ್ಥಿಗಳಿಗೆ ಸೂಕ್ಷ್ಮ ಜಾಗೃತಿ ಮತ್ತು ವಿಶಾಲತೆ ಬಗ್ಗೆ ತಿಳಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ್ ಬಗಲಿ ಅವರು, ಸಸಿ ನೀರೂಣಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಗೊಳಿಸಿ ಮಾತಾನಾಡಿದರು.
ವಿಧ್ಯಾರ್ಥಿ ಜೀವನದಲ್ಲಿ ಪ್ರತಿ ಕ್ಷಣವೂ ಬಹಳ ಮುಖ್ಯ, ಆದರೆ ಇಂದಿನ ಕಾರ್ಯಕ್ರಮದ ಕಾವ್ಯ ಮತ್ತು ಗೀತ ನಮನ ಕ್ಷಣಗಳು ವಿಧ್ಯಾರ್ಥಿಗಳಿಗೆ ಅಮೂಲ್ಯವಾಗಿವೆ. ಈ ಮಣ್ಣಿನ ಗುಣಧರ್ಮ ಮತ್ತು ಸಿದ್ದೇಶ್ವರ ಶ್ರೀಗಳ ಬಗ್ಗೆ ಅರಿತ್ತಿದ್ದೆಯಾದರೆ ಜೊತೆಗೆ ಕಾವ್ಯ ಮತ್ತು ಗೀತ ಬಗ್ಗೆ ತಿಳಿದುಕೊಂಡಿದ್ದುಯಾದರೆ, ಭವಿಷ್ಯದಲ್ಲಿ ಉನ್ನತ ವ್ಯಾಸಾಂಗದ ಸಂಶೋಧನೆಯಲ್ಲಿ ಮತ್ತು ಸಾಹಿತ್ಯ, ಕವಿ, ಲೇಖಕರಾಗಿ ಜೀವನದಲ್ಲಿ ಸದಾ ಜ್ಞಾನದ ಚಿಲುಮೆ ಯಾಗಲು ಸಾಧ್ಯೆವಾಗುತ್ತದೆ ಎಂದು ಹೇಳಿದರು.
ಝಳಕಿಯ ಸಹಾಯಕ ಪ್ರಾಧ್ಯಾಪಕ ರವಿಕುಮಾರ ಅರಳಿ ಮಾತನಾಡಿ, ಶ್ರೀಗಳು ಪೌರಾತ್ಯ ಮತ್ತು
ಪಾಶ್ಚಾಮಾತ್ಯ ತತ್ವಗಳ ಅಧ್ಯಯನ ಮಾಡಿದ ವಿಶ್ವಶ್ರೇಷ್ಠ ಸಂತರು. ಅವರು ತಮ್ಮ ೧೯ ನೆಯ ವಯಸ್ಸಿನಲ್ಲಿ ಸಿದ್ದಾಮತ ಶಿಖಾಮಣಿ ರಚಿಸಿದ ಶ್ರೇಷ್ಠರು.
ಎಲ್ಲರನ್ನು ಸಮನಾಗಿ ನೊಡಿಕೊಂಡು ಸಾತ್ವಿಕ ಬೋಧನೆ
ಮಾಡಿದವರು. ವೇದ ಉಪನಿಷತ್ತ ಗಳನ್ನು ಸಾಮಾನ್ಯ
ಭಾಷೆಯಲ್ಲಿ ನೀಡಿದ ಸಂತರು. ೧೨ ಶತಮಾನದಲ್ಲಿ ಇರುವ ಶರಣ ಸಾಹಿತ್ಯ ೨೧ ನೆಯ ಶತಮಾನದಲ್ಲಿ ನೀಡಿದ್ದಾರೆ. ಒಳ್ಳೆಯದು ಹೇಳುವದು ಆಗಿದೆ. ಆದರೆ ಅದು ಈಗ ಅನುಷ್ಠಾನಗೊಳ್ಳಬೇಕು ಎಂದು ಬದಲಾವಣೆ ಪರ, ಸಮಾನತೆಯ ಪರ ಶ್ರಮಿಸಿದರು ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತಾನಾಡಿದ ಅವರು, ಸಿದ್ದೇಶ್ವರ ಶ್ರೀಗಳ ಬಗ್ಗೆ ಪಠ್ಯ ಪುಸ್ತಕದಲ್ಲಿ ಕಾಣುವ ತವಕ ನಮ್ಮಲ್ಲರಿಗೂ ಇದೆ. ಈ ಹಿಂದೆ ಕಸಾಪ ಪದಾಧಿಕಾರಿಗಳ ಪದಗ್ರಹಣದ ಕಾರ್ಯಕ್ರಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಕೂಡಾ ಸಿದ್ದೇಶ್ವರ ಶ್ರೀಗಳ ಬಗ್ಗೆ ಪಠ್ಯ ಪುಸ್ತಕದಲ್ಲಿ ಮುದ್ರಣಗೊಳ್ಳಬೇಕು ಎಂದು ಆಗ್ರಹಿಸುತ್ತೆನೆ ಎಂದು ಹೇಳಿದ್ದರೂ ಎಂದು ಆಶಯ ನುಡಿಯಲ್ಲಿ ಹೇಳಿದರು.
ವೇದಿಕೆಯ ಮೇಲೆ ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಇಂಡಿ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಹರಳಯ್ಯ, ಬೆರಗು ಪ್ರಕಾಶನ
ಸಂಚಾಲಕ ಡಾ|| ರಮೇಶ ಕತ್ತಿ, ಶ್ರೀ ಸತ್ಯ ಸಾಯಿ ಜಿಲ್ಲಾ
ಮಹಿಳಾ ಸೇವಾ ಸಂಚಾಲಕರು ಗಂಗಾಬಾಯಿ ಗಲಗಲಿ, ಬಿಆರ್ ಪಿ ಆರ್ ವ್ಹಿ ಪಾಟೀಲ, ನಿವೃತ ಔಷಧ ಸಂಯೋಜಕರು ಎಸ್.ಜಿ. ವಾಲಿ, ಪ್ರಾಚಾರ್ಯ ಎಸ್.ಬಿ.
ಜಾಧವ, ಆರ್ ವಿ ಪಾಟೀಲ ಮತ್ತಿತರಿದ್ದರು.
ಪೂಜ್ಯ ಸಿದ್ದೇಶ್ವರ ಶ್ರೀಗಳಿಗೆ ಕಾವ್ಯ ಹಾಗೂ ಗೀತ
ನಮನ ಕರ್ಯಾಕ್ರಮದಲ್ಲಿ ಇಂಡಿ ಸೇರಿದಂತೆ ಚಡಚಣ, ತಾಳಿಕೋಟಿ, ಮುದ್ದೇಬಿಹಾಳ, ಬಿಜ್ಜರಗಿ ಆಲಮೇಲ ವಿಜಯಪುರ ಹೀಗೆ ಅನೇಕ ಭಾಗದ ಸುಮಾರು ೬೦ ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು. ಅದರಲ್ಲಿ
ಮಹಿಬೂಬ ಜಿದ್ದಿ, ಶ್ರೀಮತಿ ಆರ್.ಬಿ. ತಳವಾರ, ಸಂಗಮೇಶ ಕರೆಪ್ಪಗೋಳ, ಕುಮಾರಿ ಆಶ್ವರ್ಯ ಕುಂಬಾರ, ರಾಘವೇಂದ್ರ ದೇಶಪಾಂಡೆ, ಶರಣ
ಬಸವರಾಜ ಪಾಟೀಲ, ಪಾರ್ವತಿ ಸೊನ್ನದ, ದಾನಮ್ಮ ಹಿರೆಪಟ್ಟ, ರವಿ ಮುಂದೆವಾಡಿ, ನಿರ್ಮಲಾ ಹಂಜಗಿ, ಸರೋಜಿನಿ ಮಾವಿನಮರ, ಕುಮಾರಿ ಶೀಲಾ ಡಂಗಿ, ವಿ.ಎಸ್. ದಸ್ತರೆಡ್ಡಿ, ಪಾರ್ವತಿ ದಳವಾಯಿ, ರೇಣುಕಾ ಸಂಖ, ಆರ್.ಎಸ್. ಮಾರನೂರ, ಜಿ.ಡಿ. ಕಾಂಬಳೆ, ರಾಜಶ್ರೀ ಕ್ಷತ್ರಿ, ಸುಮಂಗಲಾ ನಿಂಬಾಳ, ಶೋಭಾ ಬಡಿಗೇರ, ಮರಿಲಿಂಗಪ್ಪ ಹೊರಗಿನಮನಿ, ಬಾಬು ಸಿಂಪಿ, ಬಸವರಾಜ ಕಿರಣಗಿ, ಬಸವರಾಜ ಕಿರಣಗಿ ಕಾವ್ಯ ಮತ್ತು ಗೀತ ವಚನ ಮಾಡಿದರು. ವಾಯ್.ಬಿ ಪಾಟೀಲ ಸ್ವಾಗತಿಸಿ, ಆಯ್.ಎಸ್. ಮಾಶ್ಯಾಳ ನಿರೂಪಿಸಿದರು.