ಇಂಡಿ : ಮಹಿಳೆಯರ ಉನ್ನತ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಾರಂಭಗೊಂಡ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಮುಚ್ಚವುದಾಗಿ ಹೇಳಿಕೆಗಳು ಬರುತ್ತಿರುವುದು ಸರಕಾರದ ಗಮನಕ್ಕೆ ಬಂದಿದಿಯೇ ಎಂದು ನಿಂಬೆ ನಾಡಿನ (ಇಂಡಿ ವಿಧಾನ ಸಭಾ ಮತ ಕ್ಷೇತ್ರದ) ಶಾಸಕ ಯಶವಂತರಾಯಗೌಡ ಪಾಟೀಲ್ ಸದನದಲ್ಲಿ ಸರಕಾರಕ್ಕೆ ಗಮನ ಸೆಳೆದರು. ವಿಶ್ವವಿದ್ಯಾಲಯ ಸ್ಥಾಪಿಸಿರುವ ಉದ್ದೇಶವೇನು ? ಯಾವ ಯಾವ ಕೊರ್ಸುಗಳಿವೆ ? ಅಲ್ಲಿ ಕಾರ್ಯ ನಿರ್ವಹಿಸಿತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಸಂಖ್ಯೆ ಎಷ್ಟು ? ವಿಶ್ವವಿದ್ಯಾಲಯ ಅಡಿಯಲ್ಲಿ ಯಾವ ಯಾವ ಕಾಲೇಜುಗಳು ಸೇರ್ಪಡೆಗೊಂಡಿವೆ ಎಂದು ಚುಕ್ಕೆ ಗುರುತಿಲ್ಲದ ಪ್ರಶ್ನೆ ಮೂಲಕ ವಿಶ್ವವಿದ್ಯಾಲಯದ ಸಮಸ್ಯೆಗಳ ಮೇಲೆ ಸಂಪೂರ್ಣ ಬೆಳಕು ಚೆಲ್ಲುವಲ್ಲಿ ದ್ವನಿ ಮೊಳಗಿಸಿದರು.
ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ್ ಸಿ ಎನ್ ಅವರು, 2003-04 ನೇ ಸಾಲಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಶೈಲಿಯ ಕ್ಷೇತ್ರದಲ್ಲಿ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ ಉನ್ನತ ಶಿಕ್ಷಣ ಸಂಶೋಧನಾ ಪ್ರಗತಿ ಸಾಧಿಸುವಲ್ಲಿ ಒತ್ತು ನೀಡುವ ಉದ್ದೇಶದಿಂದ ವಿಜಯಪುರ ಜಿಲ್ಲೆಯಲ್ಲಿ ಅಕ್ಕ ಮಹಾದೇವಿ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. 32 ಅಧ್ಯಯನ ವಿಭಾಗಗಳು 10 ಪಿ.ಜಿ, ಡಿಪ್ಲೊಮಾ ಕೋರ್ಸುಗಳು, 08 ಸರ್ಟಿಫಿಕೇಟ್ ಕೋರ್ಸುಗಳು ವ್ಯಾಸಂಗ ಮಾಡಲಾಗುತ್ತಿದೆ. 424 ಸಿಬ್ಬಂದಿ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದಿದ್ದು, ಪ್ರತಿ ವರ್ಷ ಅನುದಾನ ಬಿಡುಗಡೆ ಬಗ್ಗೆ ಅನುಭಂದ -3 ರಲ್ಲಿ ಒದಗಿಸಲಾಗಿದೆ ಎಂದು ಹೇಳಿದರು. ಇನ್ನೂ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಮುಚ್ಚುವ ಬಗ್ಗೆ ಸರಕಾರದ ಮುಂದೆ ಯಾವುದೇ ಪ್ರಸ್ತಾವ ಇಲ್ಲ ಎಂದು ಹೇಳಿದರು. ಸಾಮಾನ್ಯ ವಿಶ್ವವಿದ್ಯಾಲಯವನ್ನಾಗಿ ಪುನರ್ ರಚಿಸುವ ಹಾಗೂ ವಿಜಯಪುರ ಜಿಲ್ಲೆಯ ಮೇಲೆ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯೊಂದಿಗೆ ಸಂಯೋಜನೆಗೋಳಿಸುವ ಸಾಮನ್ಯ ವಿಶ್ವವಿದ್ಯಾಲಯವಾಗಿ ಪರಿವರ್ತಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.