ಇಂಡಿ : ಹಾಲುಮತಸ್ಥರು ಭಾರತೀಯ ಸಂಸ್ಕೃತಿಯ ರಕ್ಷಣೆಗೆ ತಮ್ಮದೇಯಾದ ರೀತಿಯಲ್ಲಿ ಕೂಡಿಗೆ ನೀಡಿದ್ದಾರೆ ಎಂದು ಜೆಡಿಎಸ್ ತಾಲ್ಲೂಕು ಮುಖಂಡ ಬಿ.ಡಿ.ಪಾಟೀಲ ಹೇಳಿದರು. ತಾಲೂಕಿನ ನಾದ ಕೆ.ಡಿ ಗ್ರಾಮದಲ್ಲಿ ಶ್ರೀ ಕನ್ನಲೀಂಗೇಶ್ವರ ಜಾತ್ರಾ ಮಹೋತ್ಸವದ & ಹಾಲುಮತ ಪುರಾಣ ಮುಂಗಲ ಮಹೋತ್ಸವದ ನಿಮತ್ಯವಾಗಿ ಧರ್ಮ ಸಭೆಯನ್ನು ಉದ್ಘಾಟಿಸಿ ಹೇಳಿದರು.
ಶ್ರೀಮಾಳಿಂಗರಾಯ ಮತ್ತು ಶ್ರೀಭೀರಲಿಂಗರು ಹಲವಾರು ಪವಾಡಗಳನ್ನು ಮಾಡಿ ಭಕ್ತರನ್ನು ಉದ್ದಾರ ಮಾಡಿದ ಮಹಾಮಾಶಾಲಿಗಳು. ಕಂಬಳಿ, ಭಂಡಾರ, ಡೂಳ್ಳು, ತ್ರೀ ಶಕ್ತಿಗಳ ಮುಖಾಂತರ ಬೇಡಿದ ಅವರಿಗೆ, ಬೇಡಿದ ವರವನೀಡಿದ ಪವಾಡಪುರಷರು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಗೋಳಸಾರ ಮಠ, ಅಧ್ಯಕ್ಷತೆ
ಶ್ರೀ ಮೈ.ನಿ.ಪ್ರ ಶಿವಲೀಂಗೇಶ್ವರ ಶಿವಯೋಗಿಗಳು , ನೇತೃತ್ವ ಶ್ರೀ ಮಹಾಳಿಂಗರಾಯರು ಹುಲಜಂತಿಯ ಪಟ್ಟದ ಪೂಜಾರಿಗಾಳದ ವಹಿಸಿದರು. ಇನ್ನೂ ಮಖಣಾಪೂರದ ಶ್ರೀ ಸೋಮೇಶ್ವರ ಮಹಾರಾಜರು, ಪ್ರವಚಾನಕಾರಾಗಿ ಶೋ.ಬ್ರ.ಶ್ರಿ ಮಲ್ಲಿಕಾರ್ಜುನ ಶ್ರೀ ವಹಿಸಿದ್ದರು,
ಇದೇ ಸಂದರ್ಭದಲ್ಲಿ ಅರವಿಂದ ದಳವಾಯಿ, ಬಿ.ಎಮ್. ಮೂಲಿಮನಿ, ಚಿದಂಬರಂ ಬಂಡಗರ, ಆರ್.ಕೆ. ಪಾಟೀಲ್, ನಿಂಗಣ್ಣ ತಾವರಖೇಡ, ಸಂಗಣ್ಣ ಪಾಟೀಲ, ಸಿದ್ದರಾಯ ಐರೋಡಗಿ, ಬಸಪ್ಪಗೌಡ ಪಾಟೀಲ, ಮಾಹಾದೇವ ಕೆರಟೂಗಿ, ಬಸವರಾಜ ಪಾಟೀಲ, ಅಶೋಕ ತೋಂಟಾಪೂರ, ದತ್ತಾತ್ರೇಯ ಡೂಕೆ, ಶಿವಪ್ಪ ಗೋಡೆಕರ, ವಿಠ್ಠಲ ಪಾಟೀಲ, ಪುಂಡಲೀಕ ಜಿಡ್ಡಿಮನಿ,ಕಾಂತು ಬಿರಾದಾರ, ಪಂಢರಿನಾದ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.