ಇಂಡಿ ಸ್ವಚ್ಛ ಸುಂದರ ನಗರಕ್ಕಾಗಿ ಸಂಕಲ್ಪ ಮಾಡೋಣ..!
ಇಂಡಿ : ನಗರದ ಸ್ವಚ್ಛತೆಗೆ ನಿಮ್ಮ ಸಂಕಲ್ಪ ಮತ್ತು ಸಹಕಾರ ಅತೀ ಅವಶ್ಯಕ ಎಂದು ಹೊಟೆಲ್ ಹಾಗೂ ಅಂಗಡಿ ಮಾಲಿಕರ ಜಾಗೃತಿ ಸಭೆಯಲ್ಲಿ ಪುರಸಭೆ ನೂತನ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ ಸೋಮವಾರ ಹೇಳಿದರು
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಅಂಗಡಿ ಹಾಗೂ ಹೊಟೆಲ್ ಮಾಲಿಕರಿಗೆ ಅಯೋಜಿಸಿರುವ ಜಾಗೃತಿ ಸಭೆಯಲ್ಲಿ ಮಾತಾನಾಡಿದ ಅವರು, ತಮ್ಮ ಅಂಗಡಿಯಲ್ಲಿ ಬರುವ ಕಸವನ್ನು ರಸ್ತೆ ಮೇಲೆ ಬಿಸಾಡದೆ ಒಂದು ಡಸ್ಟ್ ಬಿನ್ (ಕಸದ ತೋಟಿ )ಯಲ್ಲಿ ಹಾಕಿ ಸಂಗ್ರಹಿಸಬೇಕು. ಸಾಯಂಕಾಲ 6 ಗಂಟೆಗೆ ಬರುವ ಪುರಸಭೆಯ ಕಸ ಸಂಗ್ರಹಣಾ ವಾಹನದಲ್ಲಿ ಹಾಕಬೇಕು . ಎಲ್ಲಾ ಅಂಗಡಿ ವ್ಯಾಪಾರಸ್ಥರು ಹಾಗೂ ಬೀದಿ ಬದಿ ವ್ಯಾಪಾರಸ್ಥರು ಮೂರು ದಿನದಲ್ಲಿ ಡಸ್ಟ್ ಬಿನ್ ಇಡದೆ ಇದ್ದಲ್ಲಿ ಪುರಸಭೆ ವತಿಯಿಂದ ದಂಡ ವಿಧಿಸಲಾಗುವುದು ಮತ್ತು ಉದ್ದಿಮೆ ಪರವಾನಿಗೆ ರದ್ದು ಪಡಿಸಲಾಗುವುದುಮ.
ಅದೇ ರೀತಿ ಉದ್ದಿಮೆ ಪರವಾನಿಗೆ ಪಡೆಯದೇ ಇರುವ ಅಂಗಡಿ ಮಾಲೀಕರು ಒಂದು ವಾರದೊಳಗೆ ಪರವಾನಿಗೆ ಪಡೆಯಲು ಪುರಸಭೆಗೆ ಅರ್ಜಿ ಸಲ್ಲಿಸಲು ಸೂಚಿಸಲಾಯಿತು. ತಪ್ಪಿದ್ದಲ್ಲಿ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ತಿಳಿಸಿದರು. ನಗರವನ್ನು ಸ್ವಚ್ಚ ಹಾಗೂ ಸುಂದರ ವಾಗಿಡಲು ವರ್ತಕರು ಸಹಕರಿಸಬೇಕಾಗಿ ಹೇಳಿದರು
ಈ ಸಂದರ್ಭದಲ್ಲಿ ಪುರಸಭೆ ಕಿರಿಯ ಅರೋಗ್ಯ ನೀರಿಕ್ಷಕ ಎಲ್. ಎಸ್. ಸೋಮನಾಯಕ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಹೊಟೆಲ್ ಹಾಗೂ ಅಂಗಡಿ ಮಾಲಿಕರು ಉಪಸ್ಥಿತರಿದ್ದರು.