ಇಂಡಿ ಜಿಲ್ಲಾ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ..
ಇಂಡಿ: ಇಂಡಿ ಪ್ರತ್ಯೇಕ ಜಿಲ್ಲೆ ಘೋಷಣೆಗೆ ಆಗ್ರಹಿಸಿ
ಪಟ್ಟಣದ ಸಿ.ವಿ.ರಾಮನ್ ಪದವಿ ಪೂರ್ವ
ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪಟ್ಟಣದ ತೇಜಸ್ ಸಾಮಾಜಿಕ ಸಾಮಾಜಿಕ ಸಂಘ, ಸಮಗ್ರ ಇಂಡಿ
ಕ್ಷೇಮಾಭಿವೃದ್ದಿ ಸಂಘ, ಇಂಡಿ ಜಿಲ್ಲಾ ಹೋರಾಟ ಸಮಿತಿ
ಮತ್ತು ಆರ್ಟಿಕಲ್ 371 ಜೆ ಹಕ್ಕು ಒತ್ತಾಯ ಸಮಿತಿ
ವತಿಯಿಂದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ
ನಡೆಸಿದರು.
ವಿದ್ಯಾರ್ಥಿನಿ ಕಾವೇರಿ ಕಾಮಗೊಂಡ ಮಾತನಾಡಿ ಜಿಲ್ಲಾ
ಕೇಂದ್ರಕ್ಕೆ ಯೋಗ್ಯವಾದ ಭೌಗೋಳಿಕ ಪ್ರದೇಶ ಮತ್ತು ಸರಕಾರಿ ಕಚೇರಿಗಳನ್ನು ಹೊಂದಿರುವ ಇಂಡಿಯನ್ನು ಜಿಲ್ಲೆಯಾಗಿಸಬೇಕು. ಬರುವ ದಿನಗಳಿಂದ ಪಟ್ಟಣದ ಎಲ್ಲ ಕಾಲೇಜು ವಿದ್ಯಾರ್ಥಿಗಳಿಂದ ಮತ್ತು ತಾಲೂಕಿನ ಎಲ್ಲ ಕಾಲೇಜಿನ ವಿದ್ಯಾರ್ಥಿಗಳ ಸಹಕಾರು ಕೋರಿ ಎಲ್ಲರೂ
ಒಕ್ಕಟ್ಟಿನಿಂದ ಹೋರಾಟ ಮಾಡುವದಾಗಿ ತಿಳಿಸಿದರು.
ಐಶ್ವರ್ಯ ಹಿಳ್ಳಿ ಮಾತನಾಡಿ ಸರಕಾರ ನಮ್ಮ ಮನವಿ
ಪರಿಗಣಿಸಿ ಇಂಡಿ ಜಿಲ್ಲಾ ಕೇಂದ್ರ ಘೋಷಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಸೇರಿದಂತೆ ಉಗ್ರ ಹೋರಾಟ ಮಾಡಲಾಗುವದು ಎಂದರು.
ಸಮಗ್ರ ಇಂಡಿ ಕ್ಷೇಮಾಭಿವೃದ್ದಿ ಸಂಘದ ಎ.ಸಿ.ಪಾಟೀಲ
ಮಾತನಾಡಿ ಸಧ್ಯ ಸರಕಾರದ ಆಡಳಿತ ಯಂತ್ರವೇ ಬೆಳಗಾವಿಯಲ್ಲಿದ್ದು ಅಭಿವೃದ್ಧಿ ದೃಷ್ಠಿಯಿಂದ ಇಂಡಿಗೆ ಪ್ರತ್ಯೇಕ ಜಿಲ್ಲೆ ಸ್ಥಾನಮಾನ ನೀಡಬೇಕು. ಈ ಭಾಗದ ಬಹುದಿನದ ಜಿಲ್ಲಾ ಬೇಡಿಕೆಗೆ ಸರಕಾರ ಸ್ಪಂದಿಸಬೇಕು ಎಂದರು. ವೀರ ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಅನಂತ ಜೈನ ಮಾತನಾಡಿ ಶಾಸಕ ಯಶವಂತರಾಯಗೌಡರಿಗೆ ಬೆಳಗಾವಿ ಸದನದಲ್ಲಿ
ಧ್ವನಿ ಎತ್ತಲು ವಿನಂತಿಸಿಕೊಂಡಿದ್ದೇವೆ, ಶಾಸಕರು
ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರವಾಗಿ
ಅಧಿವೇಶನದಲ್ಲಿ ಧ್ವನಿ ಎತ್ತುವದಾಗಿ ಭರವಸೆ
ನೀಡಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ವೀರ ಭಾರತಿ ವಿದ್ಯಾ ಸಂಸ್ಥೆಯ
ಎಸ್.ಜಿ. ಕಾಮಗೊಂಡ, ಸನ್ಮಥ ಹಳ್ಳಿ, ರಾಧಿಕಾ
ಗಂಗಣ್ಣನವರ, ಮಂಜುನಾಥ ಬಾಬಳಗಾಂವ,
ಹೋರಾಟ ಸಮಿತಿಯ ಮಂಜುನಾಥ ಕಾಮಗೊಂಡ, ಕಾರ್ಯದರ್ಶಿ ಸಂತೋಷ ಪಾಪಣ್ಣನವರ ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ ಮತ್ತಿತರಿದ್ದರು.
ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ
ಇವರಿಗೆ ಮನವಿ ಸಲ್ಲಿಸಿದರು.