ಇಂಡಿ : ಶಿವಶರಣ ಹಡಪದ ಅಪ್ಪಣ್ಣನವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ ಎಂದು ಪಿಕೆಪಿಎಸ್ ನಿರ್ವಾಹಕ ಶೀವು ಹೂಗಾರ ಬಣ್ಣಿಸಿದರು.
ತಾಲ್ಲೂಕಿನ ಹಿರೇರೂಗಿ ಗ್ರಾಮದಲ್ಲಿ ಪಿಕೆಪಿಎಸ್ ಸಹಕಾರಿ ಸಂಘದ ಹಾಗೂ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶತಮಾನ ಸಮಾಜ ಸುಧಾರಕರ ಕ್ರಾಂತಿಕಾರಿಗಳನ್ನು ನಾಡಿಗೆ ಸಮರ್ಪಿಸಿದ ಕಾಲ, ಬಸವಣ್ಣ, ಅಲ್ಲಮ, ಚನ್ನಬಸವ, ಅಕ್ಕಮಹಾದೇವಿ ಹಡಪದ ಸೇರಿದಂತೆ ಮೊದಲಾದ ನೂರಾರು ಶರಣರ ಯುಗ, ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಹಡಪದ ಅಪ್ಪಣ್ಣನವರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ, ರಾಜಶೇಖರ ಡಂಗಿ ಪಿಕೆಪಿಎಸ್ ಅಧ್ಯಕ್ಷ ಪರಶುರಾಮ ಹತ್ತರಕಿ, ನಿರ್ದೇಶಕ ರಾಮ ಚೀಲಿ ಹಾಗೂ ಕೆ ಎಲ್ ನಡುವಿನಮನಿ ಮಾತಾನಾಡಿದ ಅವರು, ಕನ್ನಡ ನಾಡಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ಪರಿವರ್ತನೆಗೆ ಕಾರಣವಾದ ಈ ಚಳವಳಿಯು ಸಮಾಜದ ಶೋಷಿತ ವರ್ಗದ ದಲಿತರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿತು. ಆವರೆಗೆ ಸಾಹಿತ್ಯ ಕೇವಲ ಉನ್ನತ ವರ್ಗಕ್ಕೆ ಮೀಸಲಾಗಿದ್ದು ವ್ಯವಸ್ಥೆಯ ಬಹುಸಂಖ್ಯಾತರು ಉಪೇಕ್ಷೆಗೆ ಒಳಗಾಗಿದ್ದರು ಎಂದರು.
ಜನರ ಬದುಕಲ್ಲಿ ಹೊಸ ಗಾಳಿ ಬೀಸಿದಂತೆ ವಚನ ಚಳವಳ ಪ್ರವಹಿಸಿ ಜಗತ್ತಿನ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದಕ್ಕೆ ನಾಂದಿ ಹಾಡಿತು. ಅಪ್ಪಣ್ಣನವರು ಬಸವಪ್ರಿಯ ಕೂಡಲ ಚೆನ್ನಬಸವಣ್ಣ ಎಂಬ ಅಂಕಿತನಾಮದಲ್ಲಿ 250ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ.
ಅಪ್ಪಣ್ಣನವರು ಅನುಭವ ಮಂಟಪದ ಕಾರ್ಯದರ್ಶಿಯಾಗಿ ಮತ್ತು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾಯಕ ನಿರ್ವಹಿಸಿದರು. ಅವರ ಬಹುತೇಕ ವಚನಗಳು ಬೆಡಗಿನ ವಚನಗಳಾಗಿವೆ. ಇವರು ವಚನಗಳಲ್ಲಿ ಶರಣರಿಗಿರಬೇಕಾದ ಕಾಯಕನಿಷ್ಠೆ, ದಾಸೋಹ, ವೈರಾಗ್ಯ, ಭಕ್ತಿ, ಆಚಾರ ವಿಚಾರಗಳನ್ನು ವಿಡಂಬಿಸಿ ಅಜ್ಞಾನಿಗಳನ್ನು ಸುಜ್ಞಾನಿಗಳನ್ನಾಗಿ ಮಾಡಲು ಯತ್ನಿಸಿದ್ದರೆಂದರು.
ಈ ಸಂದರ್ಭದಲ್ಲಿ ಹಡಪದ ಸಮಾಜದ ಅಧ್ಯಕ್ಷ ಶ್ರೀನಾಥ್ ಲಕ್ಷ್ಮಣ್ ಹಡಪದ ಉಪಾಧ್ಯಕ್ಷ ಶಿವಗಪ್ಪ ಬಸಣ್ಣ ಹಡಪದ, ರಮೇಶ್ ಶಿವಪ್ಪ ನಾವಿ, ಗ್ರಾ.ಪಂ ಸದಸ್ಯ ಚಂದ್ರಕಾಂತ ಹಡಪದ, ಶ್ರೀಶೈಲ ಮಠಪತಿ, ಸೋಮಣ್ಣ ಲಕ್ಷ್ಮಣ ಹಡಪದ, ಆನಂದ ಮಲ್ಲಪ್ಪ ಹಡಪದ, ಬಸವರಾಜ್ ಅಣ್ಣಪ್ಪ ಹಡಪದ, ಮಾಂತು ಪರಶುರಾಮ ಹಡಪದ ಚಂದ್ರಕಾಂತ ನಿಂಗಪ್ಪ ಹಡಪದ, ಅಭಿಮಾನ ಜಟ್ಟಪ್ಪ ಹಡಪದ, ಸಂಜು ಚನ್ನಮಲ್ಲ ಹಡಪದ, ಕಲ್ಲಪ್ಪ ಮಲ್ಲಪ್ಪ ಹಡಪದ, ಸಿದ್ದು ಮಲ್ಲಪ್ಪ ಹಡಪದ, ದೋಳಪ್ಪ ಬಾಬು ಹಡಪದ, ರವಿ ಜಟ್ಟಪ್ಪ ಹಲಸಂಗಿ ಇನ್ನೂ ಅನೇಕ ಯುವಕರು, ಮುಖಂಡರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿಯ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.