ಗೊಂಧಳಿ ಸ್ಪರ್ಧೆಯಲ್ಲಿ ಸಾಗರ ಶ್ರೀಕೃಷ್ಣ ಮಾನೆ ಪ್ರಥಮ..
ಇಂಡಿ : ಕರ್ನಾಟಕ ಮತ್ತು ಮಹಾರಾಷ್ಟ್ರ ಮಧ್ಯ ನಡೆದ ಅಂತರ ರಾಜ್ಯ ಮಟ್ಟದ ಗೊಂಧಳಿ ಸ್ಪರ್ಧೆಯಲ್ಲಿ ಇಂಡಿಯ ಸಾಗರ ಶ್ರೀಕೃಷ್ಣ ಮಾನೆ ಪ್ರಥಮ ಸ್ಥಾನ ಪಡೆದು 31 ತೋಲಿ ಬೆಳ್ಳಿ ಕಡೆ ಪಡೆದು ವಿಜೇತರಾಗಿದ್ದಾರೆ.
ಹೌದು ತಾಲ್ಲೂಕಿನ ಚವಡಿಹಾಳ ಗ್ರಾಮದಲ್ಲಿ ಶ್ರೀಮರಗಮ್ಮ ದೇವಿ ಜಾತ್ರಾ ಮಹೋತ್ಸ ಅಂಗವಾಗಿ ಗೊಂಧಳಿ ಸ್ಪರ್ಧೆ ಏರ್ಪಡಿಸಿ ಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರಥಮ ಬಹುಮಾನ 31 ತೋಲಿ ಬೆಳ್ಳಿ ಕಡೆ, ದ್ವೀತಿಯ ಬಹುಮಾನ 21 ತೋಲಿ ಬೆಳ್ಳಿ ಕಡೆ ತೃತೀಯ ಬಹುಮಾನ 11 ತೋಲಿ ಬೆಳ್ಳಿ ಕಡೆ ನಿಗದಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಸ್ಪರ್ಧಿಗಳ ಮದ್ಯ ಸಾಗರ ಶ್ರೀಕೃಷ್ಣ ಮಾನೆ ಅವರು ಗೆಲವು ಸಾಧಿಸುವ ಮೂಲಕ ಇಂಡಿ ಮತ್ತು ವಿಜಯಪುರ ಜಿಲ್ಲೆ ಹಾಗೂ ರಾಜ್ಯದ ಕೀರ್ತಿ ಪತಾಕೆ ಹಿಡಿದಿದ್ದು ಸ್ಥಳೀಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇನ್ನೂ ಜಾತ್ರೆಯಲ್ಲಿ ಮರಗಮ್ಮ ದೇವಿಗೆ ಅಭಿಷೇಕ, ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಗೀತ ವಾದ್ಯಗಳೊಂದಿಗೆ ಕುಂಭಮೇಳದ ಬೃಹತ್ ಭವ್ಯ ಮೆರವಣಿಗೆ ಹಾಗೂ ಆ ದಿನ ರಾತ್ರಿ ಸುಪ್ರಸಿದ್ಧ ಗೊಂಧಳಿ ಕಾರ್ಯಕ್ರಮ ರವಿ ಗೊಣಕೆ ಇಚ್ಚಲ ಕರಂಜಿ ಅವರಿಂದ ನಡೆಯಿತು. ಇನ್ನೂ ಮರುದಿನ ಮುಂಬಯಿಕರ ಅವರಿಂದ ಮಹಾರಾಷ್ಟ್ರದ ಜನಪ್ರಿಯ ಲಾವಣಿ ಮಹೋತ್ಸವ, ಸಂಗೀತ ಕುರ್ಚಿ ಹೀಗೆ ಹಲವಾರು ಕಾರ್ಯಗಳು ಜರುಗಿದವು. ತದನಂತರ ಅಂತರ ರಾಜ್ಯ ಮಟ್ಟದ ಗೊಂಧಳಿ ಸ್ಪರ್ದೆನಡೆಯಿತು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಮಹಾ ಪ್ರಸಾದ್ ಸೇವೆ ಮಾಡಲಾಗಿತ್ತು. ಅನೇಕ ಭಕ್ತರು ಬೇರೆಬೇರೆ ಭಾಗದಿಂದ ಆಗಿಮಿಸಿ ದೇವಿಯ ದರ್ಶನ ಪಡೆದು ಪುನಿತರಾದರು ಎಂದು ಸ್ಥಳೀಯ ಮುಖಂಡರು, ಜಾತ್ರೆ ಆಯೋಜಕರು ತಿಳಿಸಿದರು.