ಇಂಡಿಯಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ!
![](http://voiceofjanata.in/wp-content/uploads/2023/08/IMG-20230824-WA0264.jpg)
ಇಂಡಿ : ಸಾಲಬಾಧೆ ತಾಳದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಾಲ್ಲೂಕಿನ ಚಿಕ್ಕಬೇವನೂರ ಗ್ರಾಮದ ರೈತ ಈರಪ್ಪ ಶಾಂತಪ್ಪ ಜಂಬಗಿ (೪೮) ಮೈತರಾದವರು,
ಗ್ರಾಮದ ಪಿಕೆಪಿಎಸ್ ೬೫೦೦೦ ಸೇರಿದಂತೆ ಕೈಗಡ ಸಾಲ ಮಾಡಿದ್ದ ಎನ್ನಲಾಗಿದೆ. ಕಳೆದ ವರ್ಷದಿಂದ ಸಮರ್ಪಕ ಮಳೆಯಾಗದೆ ಇರುವ ಕಾರಣ ಸಾಲ ತೀರಿಸುವುದು ಹೇಗೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](http://voiceofjanata.in/wp-content/uploads/2023/09/IMG-20230902-WA0200.jpg)