ಇಂಡಿ : ರಾಜ್ಯದಲ್ಲಿ ಕಳೆದ 6 ತಿಂಗಳುಗಳಿಂದ ಪಡಿತರ ಹಂಚಿಕೆಯಲ್ಲಿ ವ್ಯತ್ಯೆಯವಾಗಿದ್ದು ಸರಕಾರದ ಗಮನಕ್ಕೆ ಬಂದಿದ್ದಿಯೇ ಎಂದು ಚುಕ್ಕೆ ಗುರುತಿಲ್ಲದ ಪ್ರಶ್ನೆಯ ಮೂಲಕ ಶಾಸಕ ಯಶವಂತರಾಯಗೌಡ ಪಾಟೀಲ
ಅಧಿವೇಶನದಲ್ಲಿ ಧ್ವನಿ ಮೊಳಗಿಸಿದರು.
ಸಾರ್ವಜನಿಕ ಪಡಿತರ ವ್ಯವಸ್ಥೆ ಅಡಿಯಲ್ಲಿ ಆಹಾರ ಧಾನ್ಯ ವಿತರಿಸಲು ಅನುಸರಿಸುವ ಕಾರ್ಡ ಮಾದರಿಗಳು, ಒಟ್ಟು ಪ್ರಮಾಣ ಹಾಗೂ ಬೆಲೆಯ ಜೊತೆಗೆ ಗ್ರಾಮೀಣ ಭಾಗದಲ್ಲಿ ಬಯೋಮೆಟ್ರಿಕೆಗೆ ಕಾಡುತ್ತಿರುವ ಸರ್ವರ್ ಸಮಸ್ಯೆ ಬಗ್ಗೆ ಗಮನ ಸೆಳೆದರು.
ಈ ಸಂದರ್ಭದಲ್ಲಿ ಉತ್ತರಿಸಿದ ಸಚಿವರು, ಅಂತ್ಯೋದಯ ಅನ್ನ, ಆಧ್ಯತಾ, ಆಧ್ಯತೇರ ಒಟ್ಟು ರೀತಿಯ ಕಾರ್ಡುಗಳಿದ್ದು 1,52,53,885 ಹೊಂದಿದ್ದಾರೆ. ಅದರಂತೆಯೆ ಅಂತ್ಯೋಧಯ ಅನ್ನ ಯೋಜನೆ ಪ್ರತಿ ಕಾರ್ಡಗೆ ಉಚಿತವಾಗಿ 35 ಕೆಜಿ ಅಕ್ಕಿ/ರಾಗಿ/ಜೋಳ, ಆಧ್ಯತಾ ಕಾರ್ಡಗೆ ಉಚಿತವಾಗಿ ಪ್ರತಿ ಸದಸ್ಯರಿಗೆ 5 ಕೆಜಿ ಮತ್ತು ಹೆಚ್ಚುವರಿಯಾಗಿ ಪ್ರತಿ ಸದಸ್ಯ 1 ಕೆಜಿ ವಿತರಿಸಲಾಗುತ್ತಿದೆ. ಇನ್ನೂ ಆಧ್ಯತೇರ ಕುಟುಂಬಕ್ಕೆ ಏಕ ಸದಸ್ಯ ಪಡಿತರ ಚೀಟಿಗೆ 5 ಕೆಜಿ ಒಬ್ಬರಿಗಿಂತ ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ 10 ಕಜಿ ಹಾಗೂ ಕೆಜಿಗೆ 15 ರೂ ಬೆಲೆ ನಿಗದಿ ಎಂದು ಹೇಳಿದರು. ಅಲ್ಲದೇ ಗ್ರಾಮೀಣ ಭಾಗದಲ್ಲಿ ಬಯೋಮೆಟ್ರಿಕ್ ಮಾಡಲಿಕ್ಕೆ ಸರ್ವರ್ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದ್ದು, ಈ ಸಮಸ್ಯೆ ತಾತ್ಕಾಲಿಕ ಇರುತ್ತದೆ. ತಕ್ಷಣವೇ ಸಮಸ್ಯೆ ಬಗೆಹರಿಸಿ ಪಡಿತರ ವಿತರಿಸಲು ಕ್ರಮವಹಿಸಲಾಗುತ್ತದೆ.
ಇನ್ನೂ ಅಕ್ಟೋಬರ್ 2022 ರಿಂದ ಜನವರಿ 2023 ರವರೆಗೆ ಕೇಂದ್ರ ಸರ್ಕಾರದಿಂದ ಮುಕ್ತ ಮಾರುಕಟ್ಟೆ ಯೋಜನೆ ಅಕ್ಕಿ ಸ್ಥಗಿತಗೊಂಡಿದ್ದ ಕಾರಣ ಆಧ್ಯೆತೇರ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆಯಲ್ಲಿ ಗೊಂದಲ ಉಂಟಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಎನಸಿಸಿಎಫ್ ಸಂಸ್ಥೆಯಿಂದ ಅಕ್ಕಿಯನ್ನು ವಿತರಿಸಿ ಕ್ರಮವಹಿಸಲಾಗಿದೆ. ಹಾಗೂ ಪೆಬ್ರವರಿ 2023 ರಿಂದ ಕೇಂದ್ರ ಸರಕಾರದ OMSS(D) ಪೂರೈಕೆ ಮುಂದುವರೆಸಲಾಗುವುದು.
ಸಾರ್ವಜನಿಕರು ಇಲಾಖೆಯ ಆಹಾರ ವೆಬ್ ಸೈಟ್ ನಲ್ಲಿ ಹೊಸ ಪಡಿತರ ಚೀಟಿಗಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಹೊಸ ಪಡಿತರ ಚೀಟಿ ಪಡೆಯುವ ವಿಧಾನ ಆಹಾರ ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ.