2 ವರ್ಷ 4 ತಿಂಗಳು ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ:
ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ ಖಡಕ್ ಪೊಲೀಸ್:
ಪ್ರಾಮಾಣಿಕತೆ ಹಾಗೂ ದಕ್ಷತೆಗೆ ಹೆಸರುವಾಸಿ ಈ ಅಧಿಕಾರಿ:
ಸಿಬ್ಬಂದಿಗಳ, ಪತ್ರಕರ್ತರ, ಆತ್ಮೀಯ ಗೆಳೆಯ:
ಲಿಂಗಸೂಗೂರು: ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಗಿದ್ದ ತಾಲೂಕಿನ ಮುದಗಲ್ ಠಾಣೆಯ ಪಿಎಸ್ಐ ಡಾಕೇಶ ಉಪ್ಪಾರ ಅವರು ಕೊಪ್ಪಳ ಜಿಲ್ಲೆಯ ಕುಕನೂರಿಗೆ ವರ್ಗಾವಣೆಯಾಗಿದ್ದಾರೆ. ವರ್ಗಾವಣೆ ಹಿನ್ನೆಲೆಯಲ್ಲಿ ಠಾಣೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ಹಾಗೂ ಮುದಗಲ್ ಠಾಣೆಗೆ ಹೊಸದಾಗಿ ಪಿಎಸ್ ಐ ಆಗಿ ನೇಮಕವಾದ ಪ್ರಕಾಶ್ ರೆಡ್ಡಿ ಡಂಬಳ ಅವರ ಸ್ವಾಗತ ಸಮಾರಂಭವನ್ನು
ಏರ್ಪಡಿಸಿಲಾಗಿತ್ತು.
ಈ ವೇಳೆಯಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ಕಾರ್ಯಕರ್ತರು, ಪತ್ರಕರ್ತರು ಭಾಗಿಯಾಗಿದ್ದರು. ಮುದಗಲ್ ಠಾಣೆಯಲ್ಲಿ ಪಿಎಸ್ ಐ ಡಾಕೇಶ್ ಅವರು 2 ವರ್ಷ 4 ತಿಂಗಳು ಸೇವೆ ಸಲ್ಲಿಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ. ಅಲ್ಲದೆ ಹಲವಾರು ಪ್ರಕರಣಗಳನ್ನು ಬೇಧಿಸಿ ಮೇಲಾಧಿಕಾರಿಗಳಿಂದ ಭೇಶ್ ಎನಿಸಿಕೊಂಡಿದ್ದಾರೆ.
ಇವರು ದಕ್ಷ, ಸರಳ, ಪ್ರಾಮಾಣಿಕತೆಗೆ ಹೆಸರವಾಸಿಯಾದವರು. ವರ್ಗಾವಣೆಗೊಂಡ ಪೊಲೀಶ್ ಅಧಿಕಾರಿಗೆ ಠಾಣೆಯ ವತಿಯಿಂದ ಪೊಲೀಸ್ ಸಿಬ್ಬಂದಿಗಳು, ನಾಗರಿಕರು ಪ್ರೀತಿಯಿಂದ ಬೀಳ್ಕೊಟ್ಟರು. ಸರಳತೆ, ಪ್ರಾಮಾಣಿಕತೆಗೆ ಹೆಸರಾಗಿದ್ದ ಡಾಕೇಶ ಅವರಿಗೆ ಠಾಣೆಯ ವತಿಯಿಂದ ಪೊಲೀಸ್ ಸಿಬ್ಬಂದಿಗಳು ಹಾಗೂ ನಾಗರಿಕರು ಆತ್ಮೀಯತೆಯಿಂದ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು, ಸಂಘಟನೆಗಳ ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.