ಇಂಡಿ : ನಗರದ ಭಗವಾನ ಶ್ರೀಸತ್ಯಸಾಯಿ ಮಂದಿರದಲ್ಲಿ ಇಂದು ಶ್ರೀ ಸತ್ಯಸಾಯಿ ಸೇವಾ ಸಮಿತಿ, ಕನ್ನಡ ಸಾಹಿತ್ಯ ಗೆಳೆಯರ ಬಳಗ,ವಿಜಯಪೂರದ ಮಹಾಬೆಳಗು ಸೇವಾ ಸಂಸ್ಥೆ ಹಾಗೂ ಕದಳಿ ವೇದಿಕೆ, ವನೀತಾ ಸಾಹಿತ್ಯ ವೇದಿಕೆ ಇವರುಗಳ ಸಂಯುಕ್ತ ಆಶ್ರಯದಲ್ಲಿ. ನೇತ್ರದಾನ ಶಿಬಿರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ 27.2.22ರಂದು ಬೀರಪ್ಪ ನಗರದ ಸಾಯಿ ಮಂದಿರದಲ್ಲಿ ಹಮ್ಮಿಕಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತನೇತ್ರ ತಜ್ಞರಾದ ಡಾ. ಪ್ರಭುಗೌಡ ಲಿಂಗದಹಳ್ಳಿ ಚಬನೂರ ವಹಿಸಿ ಮಾತನಾಡುತ್ತಾ ದೀಪದಿಂದ ದೀಪ ಹಚ್ಚಿ, ನೇತ್ರದಾನ ದಿಂದ ಅಂದರ ಬಾಳು ಬೆಳಗುವ ಮಹತ್ಕಾರ್ಯ. ಇಂತಹ ಸಂಸ್ಕಾರವನ್ನು ನಾವುಗಳು ಭವಿಷ್ಯದ ಮಕ್ಕಳಲ್ಲಿ ನೀಡಬೇಕು ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆ ಖ್ಯಾತ ವೈದ್ಯ ಡಾ ಪ್ರಭುಗೌಡ ಲಿಂಗದಹಳ್ಳಿ ಆಶೆಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಡಾ ಕಾಂತು ಇಂಡಿ ಮಾತನಾಡಿ ಹಲವಾರು ಬಡರೋಗಿಗಳಿಗೆ ಡಾ.ಪ್ರಭುಗೌಡ ಚಬನೂರರವರು ಉಚಿತ ಚಿಕಿತ್ಸೆ ನೀಡಿ ಅಂದರ ಬಾಳಿಗೆ ಬೆಳಕಾಗಿದ್ದಾರೆ. ಅದೆ ರೀತೀಲಿ ಇಂಡಿಯ ಶ್ರೀ ಸತ್ಯಸಾಯಿ ಸೇವಾ ಸಮಿತಿಯು ನೇತ್ರದಾನದ ಜಾಗೃತಿ ಮೂಡಿಸುವ ಕೆಲಸ ಶ್ಲಾಘನೀಯ ಎಂದು ಮಾತನಾಡಿದರು. ಈ ಮದ್ಯೆ ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಬಸವರಾಜ ಕುಂಬಾರ ಮಾತನಾಡಿ ಮಾನವ ದೇಹದ ಬಹುಮುಖ್ಯ ಅಂಗ ಕಣ್ಣುಗಳು ಸತ್ತ ನಂತರ ಮಣ್ಣಲಿ ಮಣ್ಣಾಗುವಂತದ್ದು ಕಳವಳಕಾರಿ ಸಂಗತಿಯಾಗಿದೆ. ನೇತ್ರದಾನ ಶಿಬಿರಗಳು ಹೆಚ್ಚ ಹೆಚ್ಚು ನಡೆಸಿದರರೆ ಅಂಧಕಾರವನ್ನು ಹೋಗಲಾಡಿಸಿಬಹುದು ಎಂದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಗಂಗೂಬಾಯಿ ಗಲಗಲಿ ವಹಿಸಿದ್ದರು. ಅತಿಥಿಗಳಾಗಿ ಶ್ರೀಮತಿ ವಿಜಯಲಕ್ಷ್ಮೀ ದೇಸಾಯಿ, ಶೈಲಜಾ ಕಾ.ಬಿರಾದರ, ಇಂಡಿ ಕನ್ನಡ ಸಾಹಿತ್ಯ ಬಳಗದ ಸಿದ್ದು ಡಂಗಾ ರಾಜು ಕುಲಕರ್ಣಿ, ಬಿ ಈ ಹಿರೇಮಠ, ಸದಾನಂದ ಈರಣ್ಣಕೇರಿ, ಸಂಜು ಕುಮಾರ್ ತೆಲೂರ, ಶ್ರೀ ಮತಿ ಭವಾನಿ ಗುಳೇದಗುಡ್ಡ, ಎಮ್ ಪಿ ಚಿಮ್ಮಾಗೋಳ, ಪ್ರಕಾಶ್ ಬಿರಾದಾರ, ಸಂದೇಶ ಗಲಗಲಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಜಿ ಜಿ ಬರಡೋಲ ಹಾಗೂ ಭವಾನಿ ಗುಳೇದಗುಡ್ಡ ನೆರವೇರಿಸಿದರು. ಸದಾನಂದ ಈರಣ್ಣಕೇರಿ ವಂದಿಸಿದರು.