ಲಿಂಬೆ ನಾಡಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಮನ..! ಯಾವಾಗ ಗೊತ್ತಾ..?
ಫೆ.28 ರಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಕಟ್ಟಡ ಉದ್ಗಾಟನೆ..!
ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಶತಮಾನೋತ್ಸವ..!
ಇಂಡಿ: ಪಟ್ಟಣದ ಸಿಂದಗಿ ರಸ್ತೆಯ ಮಲ್ಲಿಕಾರ್ಜುನ
ದೇವಸ್ಥಾನದ ಹತ್ತಿರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಕಟ್ಟಡ ಉದ್ಗಾಟನೆ ಹಾಗೂ ಇಂಡಿ ತಾಲೂಕಾ ಪ್ರಾಥಮಿಕ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಶತಮಾನೋತ್ಸವ ಕಟ್ಟಡ ಫೆ,28 ರಂದು
ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರಾಥಮಿಕ
ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ಹರಳಯ್ಯ,
ಪ್ರಾಥಮಿಕ ಶಿಕ್ಷಕರ ಸಹಕಾರಿ ಪತ್ತಿನ ಸಂಘದ
ಅಧ್ಯಕ್ಷ ಪರಮಾನಂದ ಚಾಂದಕವಟೆ ಹೇಳಿದರು.
ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಂಟಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಾಥಮಿಕ ಶಿಕ್ಷಕರ ಸಹಕಾರಿ ಪತ್ತಿನ ಸಂಘಕ್ಕೆ 1994 ರಲ್ಲಿ ನಡೆದಾಡುವ ದೇವರಾದ ಸಿದ್ದೇಶ್ವರ ಮಹಾಸ್ವಾಮಿಜೀಗಳು ಅಡಿಗಲ್ಲು ಹಾಕಿದ್ದಾರೆ., ಅವರ
ಪಾದಸ್ಪರ್ಶದಿಂದ ಇಂದು ಸಂಘ ಇಷ್ಟೊಂದು
ಹೆಮ್ಮರವಾಗಿ ಬೆಳೆದಿದೆ ಎಂದರು. ಕಾರ್ಯಕ್ರಮದ ಸಾನಿಧ್ಯವನ್ನು ಕಾತ್ರಾಳ- ಬಾಲಗಾಂವ್ ಮಠದ ಅಮೃತಾನಂದ ಮಹಾಸ್ವಾಮಿಗಳು ವಹಿಸಲಿದ್ದು,
ನೈತೃತ್ವವನ್ನು ಶಾಸಕ ಯಶವಂತರಾಯಗೌಡ ಪಾಟೀಲವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಹಕಾರಿ ಸಚಿವ ರಾಜಣ್ಣಾ, ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಕ್ಕರೆ ಹಾಗೂ ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ಆದ್ದರಿಂದ ಶಿಕ್ಷಕ ಬಂಧುಗಳು,
ಗುರುಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ
ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೋಳಿಸಬೇಕು ಎಂದು ಮನವಿ ಮಾಡಿದರು.
ನಿಕಟಪೂರ್ವ ಕಸಾಪ ಅಧ್ಯಕ್ಷ ಡಾ.ಕಾಂತು ಇಂಡಿ
ಮಾತನಾಡಿ ಪ್ರಾಥಮಿಕ ಶಿಕ್ಷಕರ ಸಂಘ ತನ್ನದೇಯಾದ ಇತಿಹಾಸ ಹೊಂದಿದೆ. ಸಂಘದ ಕಟ್ಟಡದ ಸಲುವಾಗಿ ಸ್ಥಳೀಯ ಶಾಸಕರಾದ ಯಶವಂತರಾಯಗೌಡ ಪಾಟೀಲ 10ಲಕ್ಷ, ಶಿವಯೋಗೆಪ್ಪ ನೇದಲಗಿ 10 ಟನ್ ಕಬ್ಬಿಣ, ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್ ಪಾಟೀಲ 3 ಲಕ್ಷ, ಹಣಮಂತ ನಿರಾಣಿ 2ಲಕ್ಷ, ಅರುಣ ಶಹಾಪೂರ 2
ಲಕ್ಷ ಮತ್ತು ಎಲ್ಲಾ ಶಿಕ್ಷಕ ಬಂಧುಗಳ ಸಹಾಯ ಸಹಕಾರದಿಂದ ಇಂದು ಕಟ್ಟಡ ನಿರ್ಮಾಣವಾಗಿದೆ.
ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಹಿಂದಿನ ಹಿರಿಯರು ಕೇವಲ 10 ರೂ ಷೇರು ಸಂಗ್ರಹಿಸಿ ಸಂಘ ಕಟ್ಟಿದ್ದಾರೆ. ಇಂದು 8 ಕೋಟಿ 37 ಲಕ್ಷ ರೂ ದುಡಿಯುವ ಬಂಡವಾಳದಲ್ಲಿದೆ. ಫೆ, 28 ರಂದು ಸಾಧನಾ ಪಥ ಎಂಬ ಹೊತ್ತಿಗೆ ಬಿಡುಗಡೆ ಮಾಡಲಾಗುವುದು ಒಟ್ಟಾರೆ ಈ ಶಿಕ್ಷಕರ ಸಹಕಾರಿ ಸಂಘ ಶಿಕ್ಷಕರು ಕಷ್ಟದ ಸಂಧರ್ಭದಲ್ಲಿ ಸಹಾಯ ನೀಡುವ ಒಂದು ಸಂಸ್ಥೆಯಾಗಿದೆ ಎಂದರು.
ಪಿ.ಎ ಎಲಗಾರ, ಅಲ್ಲಾಭಕ್ಷ ವಾಲೀಕಾರ ಮಾತನಾಡಿ ಸ.ಶಿ. ಪತ್ತಿನ ಸಹಕಾರ ಸಂಘದ ಉದ್ದೇಶ ನೌಕರರ
ಹಣಕಾಸಿನ ಸಮಸ್ಯಗಳಿಗೆ ಸಹಕಾರಿ ಸಂಘ
ಸಹಕಾರಿಯಾಗಿದೆ. ನೂರು ವರ್ಷದ ಶತಮಾನೋತ್ಸವ ಆಚರಣೆಯಲ್ಲಿ ನಮ್ಮ ಪೂರ್ವಜರ, ಹಿರಿಯರನ್ನು ಗೌರವಿಸಿ ಅವರನ್ನು ಸ್ಮರಿಸುವ ಅರ್ಥಪೂರ್ಣ ಕಾರ್ಯ ವೇದಿಕೆಯ ಮೂಲಕ ನಡೆಯುತ್ತದೆ. ರಾಷ್ಟ್ರೀಕೃತ
ಬ್ಯಾಂಕಿನಲ್ಲಿ ಯಾವ ರೀತಿ ವ್ಯವಹಾರ ನಡೆಯುತ್ತದೆ ನಮ್ಮ ಸಹಕಾರಿ ಬ್ಯಾಂಕಿನಲ್ಲಿ ಅದೆಲ್ಲ ವ್ಯವಸ್ಥೆ ಇದೆ. ನೌಕರರಲ್ಲದ ವರ್ಗ ಸಹ ಸಂಘದ ಮೇಲೆ ವಿಶ್ವಾಸವಿಟ್ಟು 2 ಕೋಟಿ ಹಣ ಠೇವಣಿಯಾಗಿ ಇಟ್ಟಿದ್ದಾರೆ. ವಿಶ್ವಾಸರ್ಹತೆ ನಂಬಿಕೆ ಮುಖ್ಯ ಅದೆಲ್ಲವನ್ನೂ ನಮ್ಮ ಆಡಳಿತ ಮಂಡಳಿ
ಪ್ರಾಮಾಣಿಕವಾಗಿ ಕಾಯ್ದುಕೊಂಡಿದೆ ಎಂದರು.
ಶಿಕ್ಷಕರಾದ ಎಂ.ಎಂ ನೇದಲಗಿ, ವಾಯ್.ಟಿ ಪಾಟೀಲ,
ಶಾರದಾ ಗಿರಣಿ, ಟಿ.ಕೆ. ಜಂಬಗಿ, ಡಿ.ಜಿ ರಾಠೊಡ, ಜೆ.ಎ.
ಚವಡಿಹಾಳ, ಬಂಗಾರೆಪ್ಪ ಜಮಾದಾರ, ಎ.ಎಂ. ಶೇಖ,
ಶ್ರೀದೇವಿ ಮುಗಳಿ, ಜಯರಾಮ ಚವ್ಹಾಣ, ಸಿ.ಎಸ್ ಝಳಕಿ, ಆನಂದ ಕೆಂಬಾವಿ, ಅನಿತಾ ರಾಠೋಡ,
ವಿಜಯಲಕ್ಷ್ಮೀ ಡಿಸ್ಲೇ, ಜಯಶ್ರೀ ತೇಲಗ,ಅಂಬರೀಶ
ರಾಠೋಡ, ಸುರೇಶ ಚವ್ಹಾಣ, ಕೆ.ಎಸ್ ಕಾಂಬಳೆ,
ಜಟ್ಟೆಪ್ಪ ಮಾದರ, ಕೆ.ಎಂ. ಇಂಡಿ, ಸಿ.ಆರ್ ಮ್ಯಾಕೇರಿ
ಸೇರಿದಂತೆ ಅನೇಕ ಶಿಕ್ಷಕ ಸಂಘದ ಪದಾಧಿಕಾರಿಗಳು ಇದ್ದರು.
ಇಂಡಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ
ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ
ಸಮಘದ ನೂತನ ಕಟ್ಟಡದ ಉದ್ಘಾಟನೆ ನಿಮಿತ್ಯ
ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ
ನಡೆಸಿದರು.