ಇಂಡಿ: ಅಹಿರಸಂಗ ಗ್ರಾಮದ ಹಿಪ್ಪರಗಿ ವಸ್ತಿಯ ಶ್ರೀಲಕ್ಷ್ಮಿದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಧರ್ಮಸಭೆ ಹಾಗೂ ಸುಪ್ರಸಿದ್ಧ ಡೂಳ್ಳಿನ ಗಾಯನ ಕಾರ್ಯಕ್ರಮದ ಉದ್ಘಾಟನೆಯನ್ನು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ನೆರವೇರಿಸಿದರು. ಈ ವೇಳೆ ಮಾತನಾಡಿದ ಪಾಟೀಲರು ಭಾರತೀಯ ಪರಂಪರೆಯಲ್ಲಿ ಹಬ್ಬ ಹರಿದಿನಗಳು ನಮ್ಮ ಜನಪದರು ಅನಾದಿಕಾಲದಿಂದಲೂ ನಡೆಸಿಕೂಂಡು ಬಂದಿದ್ದಾರೆ. ಇಂತಹ ಪರಪಂರೆ ಅಹಿರಸಂಗದ ಹಿಪ್ಪರಗಿ ವಸ್ತಿಯ ಜನತೆ ಮುಂದೆವರಿಸಿಕೊಂಡು ಹೊರಟಿರುವದು ಸಂತೋಷದ ಸಂಗತಿ. ಹಿಂತಾ ಕಲಿಯುಗದಲ್ಲಿ ಮಾನವೀಯ ಮೌಲ್ಯಗಳ ಸಂಸ್ಕಾರವನ್ನು ನಾವುಗಳು ಭವಿಷ್ಯದ ಮಕ್ಕಳಲ್ಲಿ ನೀಡಬೇಕು. ಇಂದು ಲಕ್ಷ್ಮಿದೇವಿಯು ನಮ್ಮ ಜನತೆಗೆ ಮಳೆ ಬೆಳೆ ನೀಡಲೇಂದು ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿದ್ದು ಮಹಾರಾಜರು ವಹಿಸಿದ್ದರು.
ಅತಿಥಿಗಳಾಗಿ ಕಲ್ಲಪ್ಪ ಹಿಪ್ಪರಗಿ, ಮಾಳಪ್ಪ ಕಾಡೆಗೋಳ, ಹಣಮಂತ ಕಾಡೆಗೋಳ, ಸೈದಪ್ಪ ಹಿಪ್ಪರಗಿ, ರೇವಣಸಿದ್ದ ಕಾಡೆಗೋಳ, ಶಿವಶಂಕರ ಹಿಪ್ಪರಗಿ, ನಿಂಗು ಪೂಜಾರಿ, ಹಣಮಂತ ಪೂಜಾರಿ, ನಿಂಗಪ್ಪ ಹಿಪ್ಪರಗಿ, ತುಳಜಾರಾಮ ಹಿಪ್ಪರಗಿ, ಈರಪ್ಪ ಹಿಪ್ಪರಗಿ, ರಾಜು ಹಿಪ್ಪರಗಿ, ರಮೇಶ್ ಹಿಪ್ಪರಗಿ, ಶಿವಾನಂದ ಹಿಪ್ಪರಗಿ, ಸೈದಪ್ಪ ಮುಲ್ಲಾ, ಮಾಳಪ್ಪ ಪೂಜಾರಿ, ಸತ್ಯಪ್ಪ ಹಿಪ್ಪರಗಿ, ಸಿದ್ದಪ್ಪ ಹಿಪ್ಪರಗಿ, ಮಾರುತಿ ಹಿಪ್ಪರಗಿ, ಮುಂತಾದವರು ಉಪಸ್ಥಿತರಿದ್ದರು.