VOJ ನ್ಯೂಸ್ ಡೆಸ್ಕ್ : ಏಳು ಬೆಟ್ಟಗಳ ಒಡೆಯ ತಿರುಪತಿ ತಿಮ್ಮಪ್ಪನಿಗೆ ಭಕ್ತರೊಬ್ಬರು ಒಂದು ಕೋಟಿ ರೂಪಾಯಿ ಕಾಣಿಕೆಯನ್ನು ಅರ್ಪಿಸಿದ್ದಾರೆ.
ದುಬೈನಲ್ಲಿ ಲೆಕ್ಕ ಪರಿಶೋಧಕರಾಗಿರುವ ಎಂ ಹನುಮಂತ ಕುಮಾರ್ ಅವರು ಈ ದೇಣಿಗೆ ನೀಡಿದ್ದಾರೆ.
ತಿರುಮಲ ಟ್ರಸ್ಟ್ ಬಡವರಿಗಾಗಿ ಜಾರಿಗೊಳಿಸುತ್ತಿರುವ ಕಲ್ಯಾಣ ಕಾರ್ಯಕ್ರಮಗಳಿಗೆ ಈ ಹಣ ಬಳಸುವಂತೆ ಅವರು ಮನವಿ ಮಾಡಿದ್ದಾರೆ.
ಒಂದು ಕೋಟಿ ರೂಪಾಯಿ ಡಿ ಡಿ. ಯನ್ನು ತಿರುಮಲ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ವೈ . ವಿ. ರೆಡ್ಡಿ ಅವರಿಗೆ ಹನುಮಂತ ಕುಮಾರ್ ಹಸ್ತಾಂತರಿಸಿದ್ದಾರೆ.
ಹನುಮಂತ ಕುಮಾರ್ ತಿರುಪತಿ ತಿಮ್ಮಪ್ಪನ ಅನನ್ಯ ಭಕ್ತರಾಗಿದ್ದಾರೆ.