ಇಂದಿನಿಂದ ಗಂಗನದೊಡ್ಡಿ ಗ್ರಾಮಕ್ಕೆ ಸರ್ಕಾರಿ ಬಸ್ ಸಂಚಾರ
ಹನೂರು : ತಾಲೂಕಿನ ಸೂಳೆರಿಪಾಳ್ಯ ಗ್ರಾ. ಪಂ ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮಕ್ಕೆ ಬಸ್ ಸಂಚಾರ ಆರಂಭಿಸಿದ ಹಿನ್ನೆಲೆ ಬಸ್ ಗೆ ಹೂವಿನ ಅಲಂಕಾರ, ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ ರೈತ ಸಂಘಟನೆ ಹಾಗೂ ಗ್ರಾಮಸ್ಥರು.
ಇದೇ ವೇಳೆ ಮಾತನಾಡಿದ ಹನೂರು ತಾಲೂಕು ರೈತ ಸಂಘ ಘಟಕದ ಅಧ್ಯಕ್ಷ ಅಮ್ಜದ್ ಖಾನ್ , ಸ್ವತಂತ್ರ ಬಂದು ಹಲವು ವರ್ಷಗಳಿಂದ ಬಸ್ಸನ್ನೇ ಕಾಣದ ಗ್ರಾಮವಾಗಿದೆ, ಇದನ್ನ ಗಮನಿಸಿದ ರೈತ ಸಂಘಟನೆ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಹಾಗೂ ಶಾಸಕರಿಕೆ ಮನವಿ ಸಲ್ಲಿಸಿದರು. ಇದನ್ನ ಮನಗಂಡ ಅಧಿಕಾರಿಗಳು ಇಂದು ಗಂಗನ ದೊಡ್ಡಿ ಗ್ರಾಮಕ್ಕೆ ಬಸ್ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಇದು ತಾತ್ಕಾಲಿಕವಾಗಿ ಬಸ್ಸ ಸಂಚಾರವಲ್ಲ, ಪ್ರತಿನಿತ್ಯ ಈ ಈ ಮಾರ್ಗವಾಗಿ ಬಸ್ ಸಂಚರಿಸುತ್ತದೆ. ಗಂಗನ ದೊಡ್ಡಿ ಗ್ರಾಮದ ಮಾರ್ಗವಾಗಿ ಬಸ್ ಸಂಚಾರ ವ್ಯವಸ್ಥೆ ಮಾಡಿದ ಸ್ಥಳೀಯ ಶಾಸಕರಿಗೆ, ಹಾಗೂ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ರೈತ ಸಂಘಟನೆಯಿಂದ ಹಾಗೂ ಗ್ರಾಮಸ್ಥರಿಂದ ಅಭಿನಂದನೆ ಸಲ್ಲಿಸುತ್ತಿದ್ದೇನೆ.

ಈ ಬಸ್ ಬೆಳಿಗ್ಗೆ ಕೊಳ್ಳೇಗಾಲ ಮಾರ್ಗದಿಂದ, ಹನೂರು, ಅಜ್ಜಿಪುರ, ಕುರುಬರ ದೊಡ್ಡಿ, ಗಂಗನ್ ದೊಡ್ಡಿ, ಚಿಕ್ಕುಡಿ, ಮಂಚಾಪುರ ಹಾಗೂ ರಾಮಾಪುರ ಮಾರ್ಗವಾಗಿ ಸಂಚರಿಸುತ್ತದೆ. ಸಂಜೆ ಕೊಳ್ಳೇಗಾಲದಿಂದ ರಾಮಾಪುರ , ಮಂಚಾಪುರ, ಗಂಗನ್ದೊಡ್ಡಿ ಮಾರ್ಗವಾಗಿ ಸಂಚರಿಸುತ್ತದೆ.
ಇದರಿಂದ ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಿದೆ.
ಇದೇ ಸಂದರ್ಭದಲ್ಲಿ ಚಾಲಕ ನಾರಾಯಣ್, ನಿರ್ವಾಹಕ ಪರಮೇಶ್, ಹನೂರು ಘಟಕದ ಗೌರವಧ್ಯಕ್ಷ ರಾಜೇಂದ್ರ,ಉಪಾಧ್ಯಕ್ಷ ಪಳನಿಸ್ವಾಮಿ, ಹಾಗೂ ವಿವಿಧ ಗ್ರಾಮದ ಪದಾಧಿಕಾರಿಗಳು ರೈತ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ.


















