ಸ್ಥಿತಿಕಂಡು ಮರುಗಿದ ಯುವಕರು.
ಹಾಗೇ ಕೆಲವೇ ಕ್ಷಣದಲ್ಲಿ ಸೇರಿದ ಯುವಕರು ಸೂಲಿಗಿತ್ತಿಯಾಗಿ ನಿಂತುಕೊಂಡು ನಗರದ ಜನತೆಯ ಪ್ರಶಂಸೆಗೆ ಪಾತ್ರರಾದರು.
ಹೌದು ಪಟ್ಟಣದ ಬಸವರಾಜೇಂದ್ರ ನಗರ ಮತ್ತು ಜಿ ಆರ್ ಜಿ ಕಲಾ ಮಹಾ ವಿದ್ಯಾಲಯದ ಹತ್ತೀರ ತುಂಬು ಗರ್ಭಾವಸ್ಥೆಯ ನೋವಿನಿಂದ ಬಳಲುತ್ತಿದ್ದ ಹಸುವಿನ ಕಂಡ ಎಬಿವಿಪಿ ಮುಖಂಡ ಶ್ರೀಧರ್ ಕ್ಷೇತ್ರಿ ಸ್ನೇಹಿತರೊಂದಿಗೆ ಸೇರಿ ಪಶು ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಹೆರಿಗೆ ಮಾಡಿಸಿ ಹೃದಯವಂತರಾದರು.
ರಕ್ಷಣೆಗೆ ಟೊಂಕ್ ಕಟ್ಟಿದರು.
ಕೆಲ ಹೊತ್ತಿನಲ್ಲಿ ಸ್ಥಳಕ್ಕೆ ಆಗಮಿಸಿದ ಪಶು ಇಲಾಖೆ ಸಿಬ್ಬಂದಿ ಹಾಗೂ ಯುವಕರು ಸುಲಭ ಹೆರಿಗೆ ಮಾಡಲು ಟೊಂಕ್ ಕಟ್ಟಿ ನಿಂತರು. ಅಲ್ಲಿಯೇ ಸೂಕ್ತ ವ್ಯವಸ್ಥಿತ ಸ್ಥಳಮಾಡಿ ಕೊಂಡು ಯಾವುದೇ ರೀತಿಯ ಹಂದಿ, ನಾಯಿ ಸಮೀಪ ಬಾರದಂತೆ ನೋಡಿಕೊಂಡರು. ಸುರಕ್ಷತಾ ಭಾವ ಮೂಡಿದಂತೆ ಹೆರಿಗೆ ಮಾಡಲು ಸಹಕಾರ ನೀಡಿದ ಹಸು ಮಂಡಿಯೂರಿ ಪ್ರಸವ ವೇದನೆಯಿಂದ ಮುಕ್ತಿಯಾಯಿತು.
ಅರ್ದ ಗಂಟೆ ಅವಧಿಯನ್ನು ಯುವಕರು ಹಾಗೂ ಸಿಬ್ಬಂದಿ ವರ್ಗದವರು ಕಣ್ಣಲ್ಲಿ ಕಣ್ಣಿಟ್ಟು ಕಾದರು. ಸುಖ ಪ್ರಸವದ ನಂತರ ಎಳೆಗರುವನ್ನು ನೆಕ್ಕಿ ಮಾತೃವಾತ್ಸಲ್ಯ ಮೆರೆಯಿತು. ಅಲ್ಲಿಯೇ ಪಕ್ಕದ ಮನೆಯಿಂದ ಜೋಳ, ಬೆಲ್ಲ, ರೊಟ್ಟಿ ಹುರಳಿಕಾಳು ತಿನಿಸಿ ಬಿಸಿ ನೀರು ಕುಡಿಸಿದರು. ತದನಂತರ ವಿಷಯ ತಿಳಿದ ಅದರ ಮಾಲಿಕರಿಗೆ ಕರೆ ಮಾಡಿ ಹಸು ಮತ್ತು ಕರವನ್ನು ಕೊಟ್ಟು ಕಳುಹಿಸಿದರು.
ಈ ಕಾರ್ಯದಲ್ಲಿ ಯಶವಂತರಾಯಗೌಡ ನಿಂಗನಗೌಡ ಪಾಟೀಲ, ಮಾದೇವ ಹದಗಲ್ಲ, ಧರೇಶ ಉನ್ನದ, ಶಶಿಧರ ದಶವಂತ ಹಾಗೂ ಪಶು ಆಸ್ಪತ್ರೆಯಿಂದ ಸಿಬ್ಬಂದಿ ವರ್ಗದವರು ಜನರ ಮೆಚ್ಚುಗೆಗೆ, ಪ್ರಶಂಸೆಗೆ ಪಾತ್ರರಾದರು.