ಇಂಡಿ: ಶಿಕ್ಷಕರ ಕೊರತೆ ಉಂಟಾದಾಗ ಸರ್ಕಾರ ಅತಿಥಿ
ಶಿಕ್ಷಕರನ್ನು ನೇಮಕ ಮಾಡಿದ್ರು, ಈಗ ಏಕಾಏಕಿ ಅತಿಥಿ
ಶಿಕ್ಷಕರ ಕೈ ಬಿಡ್ತಾ ಇದ್ದಾರೆ ಇದೆಷ್ಟು ಸರಿ? ಪ್ರಸಕ್ತ
ಶೈಕ್ಷಣಿಕ ವರ್ಷ ಮುಗಿಯುವವರೆಗಾದ್ರೂ ಅತಿಥಿ
ಶಿಕ್ಷಕರನ್ನು ಮುಂದುವರೆಸಬೇಕೆಂದು ಅತಿಥಿ ಶಿಕ್ಷಕ
ಪ್ರವೀಣ ಮನಮಿ ಒತ್ತಾಯಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಎರಡು ವರ್ಷಗಳಿಂದ ಅತಿಥಿ ಶಿಕ್ಷಕರಾಗಿ ಕೆಲಸ ಮಾಡ್ತಾ ಬಂದಿದ್ದೀವಿ, ಈಗ ರಿಲೀವ್ ಮಾಡ್ತಾ ಇದ್ದಾರೆ. ನಾವು ನಮ್ಮನ್ನು ರಿಲೀವ್ ಮಾಡಲು ಬೇಡ ಅನ್ನುತ್ತಿಲ್ಲ. ಇದೊಂದು ಶೈಕ್ಷಣಿಕ ವರ್ಷ ಮುಗಿಸುವವರೆಗೂ ಮುಂದುವರೆಸಬೇಕೆಂದು ವಿನಂತಿಸಿದರು. ಸರಕಾರವನ್ನು ನಂಬಿ ಬಂದ ಅತಿಥಿ ಶಿಕ್ಷಕರ ಪರಿಸ್ಥಿತಿ ಹೇಗೋ ದೇವರೇ ಬಲ್ಲ ಎನ್ನುವಂತಾಗಿದೆ. ದಯವಿಟ್ಟು ಸರ್ಕಾರ ಮಾರ್ಚ್ ಕೊನೆ ತನಕ ಆದ್ರೂ. ಕೆಲಸ ಕೊಡಿ. ನೇಮಕವಾದಾಗಿ – ನಿಂದ ಸರಿಯಾಗಿ ಸಂಬಳ ಸಹ ನೀಡಿಲ್ಲ. ಆದರೂ ಸಹ ನಾವು ವೃತ್ತಿಯಲ್ಲಿ ಮುಂದುವರೆದಿದ್ದೇವೆ ಸರಕಾರ ನಮ್ಮ ಮನವಿಗೆ ಕಿವಿಗೊಡಬೇಕೆ ಎಂದು ತಾಲೂಕಿನ ಮಸಳಿ ಬಿ.ಕೆ ಶಾಲೆಯ ಅತಿಥಿ ಶಿಕ್ಷಕ ಮನಮಿ ವಿನಂತಿಸಿದ್ದಾರೆ.