ಇಂಡಿ: ಕರೋನಾ 4ನೇ ಅಲೆ ಈಗಾಗಲೇ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಂಗನವಾಡಿ ಶಿಕ್ಷಕಿಯೊಬ್ಬರು ಕರೋನಾ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಹೌದು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಗೋರಿಪಟ್ಟಿ ತಾಂಡಾದ ಅಂಗನವಾಡಿ ಶಿಕ್ಷಕಿ ಭಾರತಿ ರಾಜು ಪವಾರ್ ಅವರು ತಮ್ಮ ಸ್ವಂತ ಹಣದಲ್ಲೆ ಅಂಗವಾಡಿಗೆ ಬರುವ ಎಲ್ಲಾ ಮಕ್ಕಳಿಗೆ ಮಾಸ್ಕ್ ವಿತರಿಸಿದ್ದಾರೆ.
ಅಲ್ಲದೆ ಅಂಗನವಾಡಿಗೆ ಬರುವ ಮಕ್ಕಳಿಗೆ ಕೈಗಳ ಸ್ವಚ್ಚತೆ, ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಿ ವಿಟಮಿನ್ ಪೂರಕವಾದ ಆಹಾರವನ್ನು ನೀಡಿ, ನಿವಾರಣೆಗೆ ಕೆಲ ಮಕ್ಕಳಿಗೆ ಪೋಲಿಕ್ ಆ್ಯಸಿಡ್ ಮಾತ್ರೆ ಸೇವನೆ ಮಾಡಿಸಿದ್ದಾರೆ. ಶಿಕ್ಷಕಿಯ ಈ ಕಾರ್ಯಕ್ಕೆ ತಾಲೂಕಾ ವೈಧ್ಯಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.